ಬೆಂಗಳೂರು: ಹೆಡ್ ಮಾಸ್ಟರ್ ಮನೆಯಲ್ಲಿ ನರ್ಸ್ ಕೆಲಸಕ್ಕೆ ಬಂದ ಮಹಿಳೆ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿರುವ ಘಟನೆ ಬೆಂಗಳೂ ರಿನಲ್ಲಿ ನಡೆದಿದೆ. ಅಮೃತಹಳ್ಳಿ ವ್ಯಾಪ್ತಿಯ ನಿವಾಸಿ ನಿವೃತ್ತ ಹೆಡ್ ಮಾಸ್ಟರ್ ಮೇಲೂರಪ್ಪ ಮನೆಯಲ್ಲಿ ಏಜೆನ್ಸಿಯೊಂದರಲ್ಲಿ ನರ್ಸ್ ಕೆಲಸ ಮಾಡುತ್ತಿದ್ದ ಪವಿತ್ರ,
ಮನೆಯಲ್ಲಿದ್ದ ನಾಲ್ಕು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಕದ್ದು ಪರಾರಿ ಆಗಿದ್ದಳು.
ನಂತರ ಒಡವೆ ಕಳೆದುಕೊಂಡ ಮಾಲೀಕ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ವಿಚಾರಣೆ ಕೈಗೊಂಡ ಪೊಲೀಸರು ಮಹಿಳೆಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: