ಬೆಂಗಳೂರು: ಹಿಜಾಬ್- ಕೇಸರಿ ಶಾಲು ಪ್ರತಿಭಟನೆ ವೇಳೆ ‘ಹಿಜಾಬ್ ಧರಿಸಿಯೇ ವಿಧಾನಸೌಧಕ್ಕೆ ಆಗಮಿಸುತ್ತೇನೆ, ಧೈರ್ಯವಿದ್ದರೆ ತಡೆಯಲಿ’ ಎಂದಿದ್ದ ಶಾಸಕಿ ಖನೀಜ ಫಾತಿಮಾ ಇಂದು ಹಿಜಾಬ್ ಧರಿಸಿ ಕಲಾಪದಲ್ಲಿ ಭಾಗವಹಿಸಿದ್ದಾರೆ.ಕಲಬುರ್ಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿಯಾಗಿರುವ ಖನೀಜ ಫಾತಿಮಾ ಕೆಲ ದಿನಗಳ ಹಿಂದೆ ಈ ಘೋಷಣೆ ಮಾಡಿದ್ದರು.ಅದರಂತೆ ಇಂದು ಹಿಜಾಬ್ ಧರಿಸಿ ಕಲಾಪದಲ್ಲಿ ಭಾಗಿಯಾಗಿದ್ದಾರೆ.ಈ ಹಿಂದಿನ ಅಧಿವೇಶನಗಳಲ್ಲೂ ಶಾಸಕಿ ಖನೀಜ ಫಾತಿಮಾ ಹಿಜಾಬ್ ಧರಿಸಿಯೇ ಭಾಗವಹಿಸುತ್ತಿದ್ದರು.ಎಡವಿ ಬಿದ್ದ ಶಾಸಕ: ವಿಧಾನಸೌಧದ ಕೆಂಗಲ್ ಗೇಟ್ ಬಳಿ ಗುರುಮಿಟ್ಕಲ್ ಶಾಸಕ ನಾಗನಗೌಡ ಕಂದಗೂರು ಕಾಲು ಎಡವಿ ಬಿದ್ದರು. ಜಂಟಿ ಅಧಿವೇಶನಕ್ಕೆ ವಿಧಾನಸೌಧದ ಕೇಂಗಲ್ ಗೇಟ್ ಮೂಲಕ ಪ್ರವೇಶ ಮಾಡುವ ಸಂದರ್ಭದಲ್ಲಿ ಕಾಲು ಎಡವಿ ಬಿದ್ದ ಅವರನ್ನು ಕೂಡಲೇ ಪೊಲೀಸ್ ಸಿಬ್ಬಂದಿಗಳು ಮೇಲೆತ್ತಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada