ಕೋಲಾರ : ಶ್ರೀನಿವಾಸಪುರ ಪಟ್ಟಣದಲ್ಲಿ ಪ್ರತಿವರ್ಷ ಜನ್ಮ ಭೂಮಿ ವೇದಿಕೆವತಿಯಿಂದ ಶ್ರೀನಿವಾಸಪುರ ಉತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಆಂಧ್ರಪ್ರದೇಶ ಸಿಂಹಾಚಲಂ ನಿಂದ ಶ್ರೀ ವರಾಹ ಲಕ್ಷ್ಮಿನರಸಿಂಹಸ್ವಾಮಿ ದೇವರನ್ನು ತಂದು ಕಲ್ಯಾಣೋತ್ಸವ ರಸಮಂಜರಿ ಕಾರ್ಯಕ್ರಮಗಳನ್ನು ನಡೆಸಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ಮಾಡಲಾಗುತ್ತಿತ್ತು. ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದ ನಿಲ್ಲಿಸಲಾಗಿದ್ದ ಈ ವರ್ಷ ಕೋವಿಡ್ ಇಳಿಮುಖ ವಾಗಿರುವ ಕಾರಣ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಮುಂದಿನ ತಿಂಗಳು 3 ರಂದು ಸಂಜೆ ಜಬರ್ದಸ್ತ್ ಕಲಾ ತಂಡದಿಂದ ಕಾರ್ಯಕ್ರಮ ಜೂನ್ 4 ರಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಲಕ್ಷ್ಮಿ ನರಸಿಂಹಸ್ವಾಮಿ ಮೆರವಣಿಗೆ ಜೂನ್ 5 ರಂದು ಮುಂಜಾನೆ ಕಲ್ಯಾಣೋತ್ಸವ ಹೆಸರಾಂತ ಗಾಯಕಿ ಮಂಗ್ಲಿ ತಂಡದವರಿಂದ ಕಾರ್ಯಕ್ರಮವನ್ನು ಜನ್ಮಭೂಮಿ ವೇದಿಕೆ ವತಿಯಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಯಾವುದೇ ಜಾತಿ ಬೇದ ವಿಲ್ಲದೆ ಪಕ್ಷಾತೀತವಾಗಿ ತಾಲ್ಲೂಕಿನ ಜನತೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಜನ್ಮಭೂಮಿ ವೇದಿಕೆ ವತಿಯಿಂದ ಕೆ ಕೆ ಮಂಜುನಾಥ್ ಹಾಗೂ ದಿಂಬಾಲ್ ಅಶೋಕ್ ರವರು ಸುದ್ದಿಗೋಷ್ಠಿ ನಡೆಸಿ ತಾಲ್ಲೂಕಿನ ಜನತೆಗೆ ಆಹ್ವಾನ ನೀಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada