ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಅದ್ದೂರಿ ಉತ್ಸವ : ಜನ್ಮ ಭೂಮಿ ವೇದಿಕೆವತಿಯಿಂದ ಕಾರ್ಯಕ್ರಮ ಆಯೋಜನೆ

ಕೋಲಾರ  : ಶ್ರೀನಿವಾಸಪುರ ಪಟ್ಟಣದಲ್ಲಿ ಪ್ರತಿವರ್ಷ ಜನ್ಮ ಭೂಮಿ ವೇದಿಕೆವತಿಯಿಂದ ಶ್ರೀನಿವಾಸಪುರ ಉತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಆಂಧ್ರಪ್ರದೇಶ ಸಿಂಹಾಚಲಂ ನಿಂದ ಶ್ರೀ ವರಾಹ ಲಕ್ಷ್ಮಿನರಸಿಂಹಸ್ವಾಮಿ ದೇವರನ್ನು ತಂದು ಕಲ್ಯಾಣೋತ್ಸವ ರಸಮಂಜರಿ ಕಾರ್ಯಕ್ರಮಗಳನ್ನು ನಡೆಸಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ಮಾಡಲಾಗುತ್ತಿತ್ತು.  ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದ ನಿಲ್ಲಿಸಲಾಗಿದ್ದ ಈ ವರ್ಷ ಕೋವಿಡ್ ಇಳಿಮುಖ ವಾಗಿರುವ ಕಾರಣ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು,  ಮುಂದಿನ ತಿಂಗಳು 3 ರಂದು ಸಂಜೆ ಜಬರ್ದಸ್ತ್ ಕಲಾ ತಂಡದಿಂದ ಕಾರ್ಯಕ್ರಮ  ಜೂನ್‌ 4 ರಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಲಕ್ಷ್ಮಿ ನರಸಿಂಹಸ್ವಾಮಿ ಮೆರವಣಿಗೆ  ಜೂನ್‌ 5 ರಂದು  ಮುಂಜಾನೆ ಕಲ್ಯಾಣೋತ್ಸವ ಹೆಸರಾಂತ ಗಾಯಕಿ ಮಂಗ್ಲಿ ತಂಡದವರಿಂದ ಕಾರ್ಯಕ್ರಮವನ್ನು ಜನ್ಮಭೂಮಿ ವೇದಿಕೆ ವತಿಯಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು,  ಯಾವುದೇ ಜಾತಿ ಬೇದ ವಿಲ್ಲದೆ ಪಕ್ಷಾತೀತವಾಗಿ ತಾಲ್ಲೂಕಿನ ಜನತೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಜನ್ಮಭೂಮಿ ವೇದಿಕೆ ವತಿಯಿಂದ ಕೆ ಕೆ ಮಂಜುನಾಥ್ ಹಾಗೂ ದಿಂಬಾಲ್ ಅಶೋಕ್ ರವರು ಸುದ್ದಿಗೋಷ್ಠಿ ನಡೆಸಿ ತಾಲ್ಲೂಕಿನ ಜನತೆಗೆ ಆಹ್ವಾನ ನೀಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಕಾಲಿಕ ಮಳೆಗೆ ಹಾನಿಗೊಳಗಾದ ಮನೆಗಳಿಗೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಭೇಟಿ : ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ಸಂತ್ರಸ್ತರಿಗೆ ಧೈರ್ಯ

Tue May 24 , 2022
  ಲಕ್ಷ್ಮೇಶ್ವರ:  ಕಳೆದ ವಾರ ಸುರಿದ ಅಕಾಲಿಕ ಮಳೆಗೆ  ಹಾನಿಗೊಳಗಾದ ಮನೆಗಳಿಗೆ ಮಾಜಿ ಶಾಸಕ  ರಾಮಕೃಷ್ಣ ದೊಡ್ಡಮನಿ ಹಾಗೂ ನಗರ ಕಾಂಗ್ರೇಸ ಸಮಿತಿ ಅಧ್ಯಕ್ಷ ಅಂಬರೀಶ ತೆಂಬದಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮನೆಯವರಿಗೆ ಸಮಾಧಾನ ಹೇಳಿದರು ಹಾಗೂ ಅಧಿಕಾರಿಗಳು ಸಮೀಕ್ಷೆ ಮಾಡಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ತಿಳಿಸುತ್ತೆವೆ ಎಂದು ಸಂತ್ರಸ್ತರಿಗೆ ಧೈರ್ಯ ತುಂಬಿದರು. ನಂತರ ಮಾತನಾಡಿದ ನಗರ ಕಾಂಗ್ರೆಸ್ ಸಮಿತಿ […]

Advertisement

Wordpress Social Share Plugin powered by Ultimatelysocial