ಕೆಜಿಎಫ್ ಎಸ್ಪಿ ಹಾಗೂ ಸಂಸದರ ನಡುವೆ ವಾಗ್ವಾದ,
ರಸ್ತೆ ಅಗಲೀಕರಣ ವಿಚಾರವಾಗಿ ಕೆಜಿಎಫ್ ಎಸ್ಪಿ ಧರಣಿದೇವಿ ಹಾಗೂ ಸಂಸದ ಮುನಿಸ್ವಾಮಿ ನಡುವೆ ವಾಗ್ವಾದ,
ಕೋಲಾರ ಜಿಲ್ಲೆ ಕೆಜಿಎಫ್ನ ಬೆಮೆಲ್ ನಗರ ಬಳಿ ರಸ್ತೆ ಅಗಲೀಕರಣ ಕಾಮಗಾರಿ ವೇಳೆ ನಡೆದ ಘಟನೆ,
ವಿ.ಕೋಟೆ-ಬಂಗಾರಪೇಟೆ ಮುಖ್ಯರಸ್ತೆ ಒತ್ತುವರಿ ತೆರವು ಮಾಡುವ ವೇಳೆ ಪೊಲೀಸ್ ಇಲಾಖೆ ಮಾಹಿತಿ ನೀಡದೆ ಅಗಲೀಕರಣ ಕೆಲಸ ಮಾಡಿದ್ದಕ್ಕೆ ಎಸ್ಪಿ ವಿರೋಧ,
ಕಾಮಗಾರಿ ವಿಳಂಭವಾಗುತ್ತಿದ್ದು ಸರ್ಕಾರಿ ರಸ್ತೆ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದ ಸಂಸದ ಮುನಿಸ್ವಾಮಿ,
ಸರ್ಕಾರಿ ಜಾಗದಲ್ಲಿರುವ ಒತ್ತುವರಿ ತೆರವಿಗೆ ಯಾವ ನೋಟೀಸ್ ಕೊಡೋದಿಲ್ಲ ಯಾರ ವಿರೋಧವೂ ಇಲ್ಲ ಎಂದ ಸಂಸದ,
ನೋಟೀಸ್ ನೀಡಿ ಕೆಲಸ ಮಾಡಿ ಎಂದು ಸ್ಥಳದಿಂದ ಹೊರಟ ಎಸ್ಪಿ ಧರಣಿದೇವಿ,
ತೆರವು ಕಾರ್ಯಾಚರಣೆ ಹಿನ್ನೆಲೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: