ಹುಬ್ಬಳ್ಳಿ: ಯಾರಿಂದಲೂ ಜೆಡಿಎಸ್ ಮುಗಿಸೋದಕ್ಕೆ ಆಗೋದಿಲ್ಲ. ನೂರು ಜನ್ಮವೆತ್ತಿ ಬಂದ್ರು ಜೆಡಿಎಸ್ ( JDS Party ) ಮುಗಿಸೋದಕ್ಕೂ ಆಗೋದಿಲ್ಲ. ಮೂಲೆ ಗುಂಪು ಆಗೋದಿಲ್ಲ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಸಿದ್ಧರಾಮಯ್ಯ ಒಂದೇ ಕಲ್ಲಿನಿಂದ 2 ಹಕ್ಕಿ ಹೊಡೆದಿದ್ದಾರೆ ಎಂಬುದಾಗಿ ಭಾವಿಸಿರಬಹುದು. ಆದ್ರೇ.. ಅದು ಸಾಧ್ಯವಾಗಿಲ್ಲ. ಅವರ ತಲೆಯ ಮೇಲೆ ಚಪ್ಪಡಿ ಎಳೆದುಕೊಂಡಿದ್ದಾರೆ. ಅದು ಜೂನ್ 10ರ ರಾಜ್ಯಸಭೆ ಚುನಾವಣೆ ಬಳಿಕ ತಿಳಿಯಲಿದೆ ಎಂದರು.
ಬಿಜೆಪಿಯ ಬಿ-ಟೀಂ ಯಾವುದು, ಎ-ಟೀಂ ಯಾವುದು ಎನ್ನುವ ಬಗ್ಗೆ ಜೂನ್ 10ನೇ ತಾರೀಕಿನ ಮೇಲೆ ಪ್ರೂ ಆಗಲಿದೆ. ಅದು ರಾಜ್ಯಸಭೆಯ ನಂತ್ರ ಹೊರಬರಲಿದೆ. ನಮಗೆ ರಾಜ್ಯಸಭೆ ಚುನಾವಣೆಗಿಂದ ವಿಧಾನಸಭೆ ಚುನಾವಣೆ ಮುಖ್ಯವಾಗಿದೆ ಎಂದರು.
ಜೆಡಿಎಸ್ ಮುಳುಗಿಸೋ ಬಗ್ಗೆ ಸಿದ್ಧರಾಮಯ್ಯ ಮಾತಿನ ಬಗ್ಗೆ ಪ್ರತಿಕ್ರಿಯಿಸಿದಂತ ಅವರು, ನೂರು ಜನ್ಮವೆತ್ತಿ ಬಂದ್ರು ಜೆಡಿಎಸ್ ಮುಗಿಸೋದಕ್ಕೆ ಆಗೋದಿಲ್ಲ. ಮೂಲೆ ಗುಂಪು ಆಗಲ್ಲ ಎಂಬುದಾಗಿ ತಿರುಗೇಟು ನೀಡಿದರು.
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲೋದು ಒಂದೇ ಒಂದು ಸೀಟ್ ಆಗಿದೆ. 2ನೇ ಅಭ್ಯರ್ಥಿ ಗೆಲ್ಲೋದಕ್ಕೆ ಸಾಧ್ಯವೇ ಇಲ್ಲ. ಪಾಪ ಮನ್ಸೂರ್ ಆಲಿ ಖಾನ್ ನನ್ನು ಮೊದಲ ಅಭ್ಯರ್ಥಿಯಾಗಿ ಹಾಕಬಹುದಾಗಿತ್ತು ಎಂದರು.
ಇದೇ ವೇಳೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೆಡಿಎಸ್ ಮುಳುಗುತ್ತಿರುವ ಹಡಗು ಎನ್ನುವ ಮಾತಿಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಮುಳುಗುತ್ತಿರೋ ಹಡಗಲ್ಲ. ಬಿಜೆಪಿಯೇ ಮುಳುಗುತ್ತಿದೆ ಎಂದು ತಿರುಗೇಟು ನೀಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada