ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಂಗಳೂರು ವಿವಿಯು ಲ್ಯಾಪ್ ಟಾಪ್ ನೀಡಲು ಖರೀದಿಯನ್ನು ನಡೆಸಿದ್ದು, ಈ ಖರೀದಿಯಲ್ಲಿ ಅವ್ಯವಹಾರವು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಈಗಾಗಲೇ ಪತ್ರಿಕೆಗಳಲ್ಲಿ ಈ ವಿಷಯವು ಪ್ರಕಟಗೊಂಡಿದೆ. ಈ ಅವ್ಯವಹಾರವನ್ನು ಎಬಿವಿಪಿ ಖಂಡಿಸಿ ಮಂಗಳೂರು ವಿವಿಯ ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿತು.ರಾಷ್ಟ್ರದಾದ್ಯಂತ ಉತ್ತಮ ಹೆಸರನ್ನು ಹೊಂದಿರುವ ಮಂಗಳೂರು ವಿ.ವಿ ಈ ರೀತಿಯ ಭ್ರಷ್ಟಚಾರದ ಹಾಗೂ ಅವ್ಯವಹಾರದಿಂದ ಕೂಡಿದ ನಡೆಗಳಿಂದ ತನ್ನ ಘನತೆಯನ್ನು ಕಳೆದು ಕೊಳ್ಳುತ್ತಿರುವುದು ಶೋಚನಿಯ ವಿಷಯವಾಗಿದೆ. ಆಡಳಿತ ವರ್ಗವು ಈ ಕೂಡಲೇ ಎಚ್ಚೆತ್ತು ಕೊಂಡು ವಿ.ವಿ ಯ ಘನತೆ ಗೌರವವನ್ನು ಎತ್ತಿ ಹಿಡಿಯುವ ಅಗತ್ಯವಿದೆ.
ಈ ಲ್ಯಾಪ್ ಟಾಪ್ ಖರೀದಿಯಲ್ಲಿ ಸರಿ ಸುಮಾರು 1.21 ಕೋಟಿಯ ಹಗರಣ ನಡೆದಿರುವುದು ಬಾಹ್ಯ ನೋಟಕ್ಕೆ ಕಂಡು ಬರುತ್ತಿದೆ, ಈ ಅವ್ಯವಹಾರದ ಬಗ್ಗೆ ಸೂಕ್ತ ತನಿಖೆಯು ನಡೆಯ ಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಸೂಕ್ತ ಕಾನೂನು ಕ್ರಮಗಳನ್ನು ತೆಗೆದು ಕೊಳ್ಳಬೇಕೆಂದು ಎಬಿವಿಪಿ ಆಗ್ರಹಿಸಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada