ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದ ಸಹಾಯಕ ಇಂಜಿನಿಯರ್ ಹಾಗೂ ಕಾರು ಚಾಲಕ..
ಗುತ್ತಿಗೆದಾರರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಸಹಾಯಕ ಇಂಜಿನಿಯರ್..
ಮಂಡ್ಯದ ಮದ್ದೂರಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿಯಲ್ಲಿ ಘಟನೆ..
ಸಹಾಯಕ ಇಂಜಿನಿಯರ್ ಎಂ.ಮಹಾಲಿಂಗಯ್ಯ ಎಸಿಬಿ ಬಲೆಗೆ ಬಿದ್ದ ಅಧಿಕಾರಿ..
ಮದ್ದೂರಿನ ಈರೇಗೌಡನದೊಡ್ಡಿಯ ಗುತ್ತಿಗೆದಾರ ಕೃಷ್ಣೇಗೌಡರಿಗೆ ಲಂಚದ ಬೇಡಿಕೆ ಇಟ್ಟಿದ್ದ ಅಧಿಕಾರಿ.
ಗುತ್ತಿಗೆದಾರ 5 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿ ಮುಗಿಸಿದ್ದ ಕೃಷ್ಣೇಗೌಡ.
ಬಿಲ್ ಪಾವತಿಸುವಂತೆ ಮೇಲಾಧಿಕಾರಿ ಶಿಫಾರಸು ಮಾಡುವಂತೆ ಮನವಿ ಮಾಡಿದ್ದರು.
ಆದರೆ ಸಹಾಯಕ ಇಂಜಿನಿಯರ್ ಕಚೇರಿ ಕೆಲಸಕ್ಕೆ 35 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದಾರೆ..
ಅದನ್ನು ತನ್ನ ಕಾರು ಚಾಲಕ ನವೀನ್ ಬಳಿ ನೀಡಿದ್ದ ಸಹಾಯಕ ಇಂಜಿನಿಯರ್ ಮಹಾಲಿಂಗಯ್ಯ.
ಈ ವೇಳೆ ಏಕಾಏಕಿ ದಾಳಿ ನಡೆಸಿ ಲಂಚದ ಸಮೇತ ಇಬ್ಬರನ್ನು ವಶಕ್ಕೆ ಪಡೆದ ಎಸಿಬಿ..
ಇಬ್ಬರನ್ನು ವಿಚಾರಣೆ ನಡೆಸುತ್ತಿರುವ ಎಸಿಬಿ ಅಧಿಕಾರಿಗಳು..
ಮಂಡ್ಯದ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: