ಡಾ. ಎಂ. ಅಕಬರ ಅಲಿ ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರು.

 

ಅಕಬರ ಅಲಿ 1925ರ ಮಾರ್ಚ್ 3ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಉಳ್ಳೇಗಡ್ಡಿ ಖಾನಾಪುರದಲ್ಲಿ ಜನಿಸಿದರು. ತಂದೆ ಅಪ್ಪಾ ಸಾಹೇಬರು. ತಾಯಿ ಅಮಿನಬಿ.ಪ್ರಾರಂಭಿಕ ಶಿಕ್ಷಣವನ್ನು ತಮ್ಮ ಊರಿನಲ್ಲೇ ಉರ್ದೂ ಭಾಷೆಯಲ್ಲಿ ಪಡೆದ ಅಕಬರ ಅಲಿ ಅವರು, ಐದನೆಯ ತರಗತಿಯಿಂದ ಕನ್ನಡ ಭಾಷೆಯನ್ನು ಕಲಿಯಲು ಮೊದಲು ಮಾಡಿದರು. ಮುಂದೆ ಅವರು ಬೆಳಗಾವಿಯ ಜಿ. ಎ. ಹೈಸ್ಕೂಲು ಸೇರಿದಾಗ, ಅವರಿಗೆ ಡಿ. ಎಸ್. ಕರ್ಕಿ ಹಾಗೂ ಡಿ. ಎಸ್. ಇಂಚಲರು ಗುರುಗಳಾಗಿದ್ದರು. ಈ ಮಹನೀಯರು, ಬಾಲಕ ಅಕಬರ ಅಲಿ ಅವರು ಬರೆದ ಕವಿತೆಯನ್ನು ಓದಿ ಪ್ರೋತ್ಸಾಹಿಸಿದರಲ್ಲದೆ, ಇವರ ಸಂಪಾದಕತ್ವದಲ್ಲೇ ಕೈ ಬರಹದ ಪತ್ರಿಕೆ ಹೊರತರುವ ವ್ಯವಸ್ಥೆ ಮಾಡಿದರು. ಬಸವರಾಜ ಕಟ್ಟೀಮನಿಯವರು ಇವರು ಬರೆದ ಕವಿತೆಗಳನ್ನು ತಾವು ಪ್ರಕಟಿಸುತ್ತಿದ್ದ ‘ಉಷಾ’ ಮಾಸಪತ್ರಿಕೆಯಲ್ಲಿ ಪ್ರಕಟಿಸಿ ಆತ್ಮವಿಶ್ವಾಸ ಹುಟ್ಟುವಂತೆ ಮಾಡಿದರು.ಅಲಿ ಅವರು ಬೆಳಗಾವಿಯಲ್ಲಿದ್ದಾಗ, ಈಶ್ವರ ಸಣಕಲ್ಲರು, ಪಾಟೀಲಪುಟ್ಟಪ್ಪ, ಕೋ. ಚನ್ನಬಸಪ್ಪ, ಹಿರೇಮಲ್ಲೂರು ಈಶ್ವರನ್ ಇವರುಗಳು ಸೇರಿ ಪ್ರಾರಂಭಿಸಿದ್ದ ‘ಕಿರಿಯರ ಬಳಗ’ ಸಾಹಿತ್ಯ ಸಂಸ್ಥೆಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕನ್ನಡ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಓದಿನಲ್ಲಿ ನಿರಂತರವಾಗಿ ತಮ್ಮ ಆಸಕ್ತಿಯನ್ನು ಕಾಯ್ದುಕೊಂಡ ಅಕಬರ ಅಲಿ ಅವರು 1949ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಬಿ.ಎ. ಆನರ್ಸ್ ಪದವಿಯನ್ನು ಪಡೆದು ತಾವು ಓದಿದ್ದ ಹೈಸ್ಕೂಲಿನಲ್ಲಿಯೇ ಶಿಕ್ಷಕರಾದರು. ಮುಂದೆ 1960ರಲ್ಲಿ ಪುಣೆಯ ವಿಲ್ಲಿಂಗ್ಡನ್ ಕಾಲೇಜಿನಿಂದ ಸ್ನಾತಕೋತ್ತರ ಪದವಿಯನ್ನು ಪಡೆದ ಅವರು ಕಾರವಾರದ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ, ಕ್ರಮೇಣದಲ್ಲಿ ಅದರ ಮುಖ್ಯಸ್ಥರಾಗಿಯೂ ದುಡಿದರು. ಈ ಹುದ್ದೆಯಲ್ಲಿ ಹದಿನಾಲ್ಕು ವರ್ಷಗಳ ಸೇವೆಯ ನಂತರ 1975ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇರಿ ಅಲ್ಲೇ ನಿವೃತ್ತರಾದರು. ಹೀಗೆ 35 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಪ್ರೌಢಶಾಲಾ ಮಟ್ಟದಿಂದ ಸ್ನಾತಕೋತ್ತರ ತರಗತಿಯವರೆಗೂ ಬೋಧನ ವೃತ್ತಿಯಲ್ಲಿ ಕಾರ್ಯನಿರತರಾಗಿದ್ದರು. ಬೋಧನೆಯ ಜೊತೆಗೆ ಅಧ್ಯಯನದ ಕೆಲಸವನ್ನೂ ನಡೆಸಿ 1983ರಲ್ಲಿ ‘ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯಸತ್ವ’ ಎಂಬ ಮಹಾಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಪಡೆದರು.1951ರಲ್ಲಿ ಮುಂಬಯಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ವಿಮರ್ಶಾಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ವಿ.ಕೃ. ಗೋಕಾಕರು ಬೆಳಗಾವಿಗೆ ಬಂದಿದ್ದ ಸಂದರ್ಭದಲ್ಲಿ, ಅವರ ಸನ್ಮಾನಾರ್ಥ ಟಿಳಕವಾಡಿಯಲ್ಲೊಂದು ಸಭೆ ಏರ್ಪಟ್ಟಿತ್ತು. ಆ ಸಭೆಯಲ್ಲಿ ಗೋಕಾಕರು ಮಾತನಾಡುತ್ತಾ ಅಮೆರಿಕದಲ್ಲಿರುವ ಇಂಗ್ಲಿಷ್‌ ಮಾದರಿಯ ಚುಟುಕು ಸಾಹಿತ್ಯ ಸೃಷ್ಟಿಗೆ ಕರೆಕೊಟ್ಟಿದ್ದರು. ಇದರಿಂದ ಪ್ರೇರಿತರಾದ ಅಕಬರ ಅಲಿ ಅವರು ಚುಟುಕು ಕವನಗಳನ್ನು ಮತ್ತು ಅಷ್ಟಪದಿಯನ್ನು ಬರೆಯಲು ಪ್ರಾರಂಭಿಸಿದರು.. ಹೀಗೆ ಬರೆದ ಅಷ್ಟಪದಿ ಕವಿತೆಗಳು ಪತ್ರಿಕೆಗಳಲ್ಲಿ ಬೆಳಕು ಕಂಡ ನಂತರ, 1951ರಲ್ಲಿ ‘ವಿಷಸಿಂಧು’ ಎಂಬ ಸಂಕಲನವನ್ನು ಹೊರತಂದರು. 1952ರಲ್ಲಿ ಮಿತ್ರರಾದ ಶ್ರೀನಿವಾಸ ತೋಫಖಾನೆ ಅವರೊಡನೆ ‘ಅನ್ನ’ ಎಂಬ ಚುಟುಕು ಕವನ ಸಂಕಲನವನ್ನು ಹೊರತಂದರು.ಅಕಬರ ಅಲಿ ಅವರು ನವೋದಯ ಕಾವ್ಯ ಕಾಲದಲ್ಲಿ ಕವಿತೆಯನ್ನು ರಚಿಸಲು ಪ್ರಾರಂಭಿಸಿದರೂ, ಯಾವ ಪ್ರಭಾವಕ್ಕೂ ಒಳಗಾಗದೆ ತಮ್ಮದೇ ಆದ ಶೈಲಿಯಲ್ಲಿ ಕಾವ್ಯರಚಿಸುತ್ತಾ ಬಂದರು. ನಾಡಿನ ಪತ್ರಿಕೆಗಳಲ್ಲೆಲ್ಲಾ ಇವರ ಕವನ, ಚುಟುಕುಗಳು ಪ್ರಕಟಗೊಂಡಿವೆ. ಹೀಗೆ ಬರೆದ ಕವನಗಳು ನವಚೇತನ, ಸುಮನ ಸೌರಭ, ಗಂಧಕೇಶರ, ಆಯ್ದ ಕವನ ಸಂಕಲನ – ತಮಸಾನದಿ ಎಡಬಲದಿ, ಅಕಬರ ಅಲಿಯವರ ಚುಟುಕುಗಳು, ಕಸಿಗುಲಾಬಿಕಥನ, ಬೆಳಕಿನ ಆರಾಧನೆ ಮುಂತಾದ ಕವನ ಸಂಕಲನಗಳಾಗಿ ಹೊರಹೊಮ್ಮಿವೆ. ಅಲಿಯವರ ಸಮಗ್ರ ಕವಿತೆಗಳು 2006ರಲ್ಲಿ ಪ್ರಕಟಗೊಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮತ್ತೇ ಒಂದಾಗುತ್ತಿದ್ದಾರೆ ಮಾದಕ ಚೆಲುವೆ ಶಿಲ್ಪಾ ಶೆಟ್ಟಿ ಮತ್ತು ಕ್ರೇಜಿ ಸ್ಟಾರ್ ಉಪೇಂದ್ರ.

Fri Mar 3 , 2023
  ಜೋಗಿ ಪ್ರೇಮ್ ಜೊತೆಗಿನ ಸಿನಿಮಾದಲ್ಲಿ ಮಾದಕ ಚೆಲುವೆ ಶಿಲ್ಪಾ ಶೆಟ್ಟಿ ಮತ್ತು ಅಧೀರ ಪಾತ್ರದಲ್ಲಿ ಮಿಂಚಿದ ಸಂಜಯ್ ದತ್ ನಟನೆ ಮಾಡೋದು ಕನ್ಫರ್ಮ್ ಆಗಿದೆ. ಈ ಸುದ್ದಿಯನ್ನ ನಿಮ್ಮ ಜೀ ಕನ್ನಡ ನ್ಯೂಸ್ ಎರಡು ತಿಂಗಳ ಹಿಂದೆಯೇ Exclusive ಸುದ್ದಿ ಕೊಟ್ಟಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ಇದೀಗ KD ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.ಇನ್ನೊಂದು ಸಖತ್ ಖುಷಿ ನ್ಯೂಸ್ ಅಂದ್ರೆ 1998ರಲ್ಲಿ ಬಿಡುಗಡೆಯಾಗಿದ್ದ ಪ್ರೀತ್ಸೋದ ತಪ್ಪಾ ಮೂಲಕ ಹೊಸ […]

Advertisement

Wordpress Social Share Plugin powered by Ultimatelysocial