ಮಗಳ ಮೇಲೆ ಅತ್ಯಾಚಾರ ಮಾಡಿದವನನ್ನು ತುಂಡು ತುಂಡಾಗಿ ಕತ್ತರಿಸಿದ !

ಭೋಪಾಲ್ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯ ಹತ್ಯೆಗೈದು, ಆತನ ದೇಹವನ್ನು ತುಂಡು, ತುಂಡುಗಳಾಗಿ ಕತ್ತರಿಸಿ ಬಾಲಕಿಯ ತಂದೆ ಮತ್ತು ಆಕೆಯ ತಾಯಿಯ ಚಿಕ್ಕಪ್ಪ ನದಿಗೆ ಎಸೆದಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.
ತ್ರಿಲೋಕಚಂದ್(55) ಮೃತ ವ್ಯಕ್ತಿಯಾಗಿದ್ದು, ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಅಜ್ನಾಲ್ ನದಿಯಲ್ಲಿ ಛಿದ್ರಗೊಂಡಿರುವ ವ್ಯಕ್ತಿಯ ಶವ ಭಾನುವಾರ ತೇಲುತ್ತಿತ್ತು. ಮೃತ ವ್ಯಕ್ತಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಈ ಘಟನೆ ಕುರಿತಂತೆ ತನಿಖೆ ನಡೆಸಿದ ಪೊಲೀಸರಿಗೆ ಮೃತ ವ್ಯಕ್ತಿ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಇದರಿಂದ ಬಾಲಕಿಯ ತಂದೆ, ಆಕೆಯ ತಾಯಿಯ ಚಿಕ್ಕಪ್ಪ ಶನಿವಾರ ತ್ರಿಲೋಕಚಂದ್ನನ್ನು ತಮ್ಮ ಮೋಟಾರ್ಸೈಕಲ್ನಲ್ಲಿ ಅಜ್ನಾಲ್ ನದಿಗೆ ಕರೆದೊಯ್ದು, ಆತನ ಶಿರಚ್ಛೇದ ಮಾಡಿ ಮೀನು ಕತ್ತರಿಸಲು ಬಳಸುವ ಸಾಧನದಿಂದ ಮುಂಡವನ್ನು ಎರಡು ಭಾಗಗಳಾಗಿ ಕತ್ತರಿಸಿದ್ದಾನೆ.

ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣ ಕುರಿತಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಮೃತ ವ್ಯಕ್ತಿ ಆರೋಪಿಗಳ ಸಂಬಂಧಿಕರು ಎಂದು ಪೊಲೀಸರು ತಿಳಿಸಿದ್ದಾರೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಣದ್ರಾಕ್ಷಿ ಮೂಳೆಯ ನಷ್ಟವನ್ನು ತಡೆಯುತ್ತದೆ, ಮುರಿತದ ಅಪಾಯದಿಂದ ರಕ್ಷಿಸುತ್ತದೆ

Tue Mar 29 , 2022
ದೈನಂದಿನ ಒಣದ್ರಾಕ್ಷಿ ಸೇವನೆಯು ಸೊಂಟದಲ್ಲಿ ಮೂಳೆಯ ನಷ್ಟವನ್ನು ತಡೆಯುತ್ತದೆ ಮತ್ತು ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಹೆಚ್ಚಿದ ಮುರಿತದ ಅಪಾಯದಿಂದ ರಕ್ಷಿಸುತ್ತದೆ ಎಂದು ಹೊಸ ಅಧ್ಯಯನವನ್ನು ಉಲ್ಲೇಖಿಸುತ್ತದೆ. ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿ ನೇತೃತ್ವದ ಅಧ್ಯಯನದ ಸಂಶೋಧನೆಗಳು ‘ದಿ ಅಡ್ವಾನ್ಸ್ ಇನ್ ನ್ಯೂಟ್ರಿಷನ್’ ಜರ್ನಲ್‌ನಲ್ಲಿ ಪ್ರಕಟವಾಗಿವೆ. ಹಿಪ್‌ನಲ್ಲಿ ಮೂಳೆ ಖನಿಜ ನಿಕ್ಷೇಪ (BMD) ಮೇಲೆ ಒಣದ್ರಾಕ್ಷಿ ಸೇವನೆಯ ಅನುಕೂಲಕರ ಪರಿಣಾಮವನ್ನು ಪ್ರದರ್ಶಿಸಲು ಸಂಶೋಧನೆಯು ಮೊದಲನೆಯದು ಮತ್ತು ಮೂಳೆ ಆರೋಗ್ಯವನ್ನು ರಕ್ಷಿಸಲು ಆಹಾರ ಆಧಾರಿತ ಚಿಕಿತ್ಸಕ […]

Advertisement

Wordpress Social Share Plugin powered by Ultimatelysocial