ಮಕ್ಕಳನ್ನು ಕರ್ಕೊಂಡು ಬರೋಕೆ ಅಯಾ ಅಲ್ಲಿಗೆ ಬರ್ತಿದ್ದಂತೆ ಆತನ ಕಣ್ಣು ಕೆಂಪಾಯ್ತು..ಅಕೆಯಿಂದ ಮಾತಿಗಿಳಿದವ್ನೇ ಕೈಯಲ್ಲಿ ಬಂದೂಕು ಹಿಡ್ಕೊಂಡು ಬಂದಿದ್ದಾನೆ..ನಿನ್ನ ಮಾವನ ಹೇಗೆ ಕೊಲೆಯಾದ್ನೋ ಹಾಗೇ ನಿನ್ನು ಕೊಲೆ ಮಾಡ್ತೀನಿ ಅಂತಾ ಹೇಳುತ್ತಲೇ ಟ್ರೀಗರ್ ಓತ್ತಿದ್ದಾನೆ.ಆಗ ಹಾರಿದ ಗುಂಡು ತಗುಲಿದ್ದು ಮಾತ್ರ ಆಕೆಗಲ್ಲ.ಅಲ್ಲೆ ಬೈಕ್ ನಲ್ಲಿ ಹೋಗ್ತಿದ್ದ ಇಬ್ಬರ ಎದೆಗೆ. ಹೊಡೆದಿದ್ದು ಯಾರಿಗೋ ಮಿಸ್ ಫೈರ್ ನಿಂದ ಹೆಣವಾಗಿದ್ದು ಮಾತ್ರ ಅಮಾಯಕರು..
ವಾ.ಓ : 01: ಈ ಪೋಟೋದಲ್ಲಿರುವರ ಹೆಸ್ರು ಪ್ರಕಾಶ್ ಹಾಗೂ ಪ್ರವೀಣ್..ಇಬ್ರು ಕಾಫಿ ನಾಡು ಚಿಕ್ಕಮಗಳೂರಿನ ಖಾಂಡ್ಯ ಸಮೀಪದ ಚಂದುವಳ್ಳಿ ಬಿದರೆಯವ್ರು..ಒಂದೇ ಬೈಕ್ ನಲ್ಲಿ ಮೂವರು ಬಾಳೆಹೊನ್ನೂರಿಗೆ ಹೊರಟವರು ಸೇರಿದ್ದು ಮಸಣಕ್ಕೇ.ಹೌದು ಇವ್ರಿಬ್ರು ಸಾವಿಗೆ ಕಾರಣವಾಗಿದ್ದೇ ಮಿಸ್ ಪೈರ್.. ಈ ಗುಂಡು ಹಾರಿಸಿದವರನು ಬೇರ್ಯಾರು ಅಲ್ಲ ಅವ್ರಿಬ್ರ ಸಂಬಂಧಿಕನೇ ಅಗಿರೋ ರಮೇಶ್ ಅನ್ನೋನ್ನಿಂದ..ಗುಂಡು ತಗುಲುತ್ತಿದ್ದಂತೆ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ.. ತಕ್ಷಣವೇ ಬಾಳೆಹೊನ್ನೂರು ಪೊಲೀಸರಿಗೆ ಮಾಹಿತಿ ಸಿಕ್ತಾ ಇದ್ದಂತೆ ರಮೇಶ್ ನನ್ನ ವಶಕ್ಕೆ ಪಡೆದಿದ್ದಾರೆ.
ಬೈಟ್ :01 ರಘುಪತಿ ಸ್ಥಳೀಯರು.
ವಾ.ಓ02: ಇನ್ನೂ ಈ ಘಟನ ನಡೆಯೊಕೆ ಕಾರಣವೇ ಬೇರೆ.ಎಂದಿನಂತೆ ಮಕ್ಕಳನ್ನು ಕರ್ಕೊಂಡು ಹೋಗೋಕೆ ಆ ಜಾಗಕ್ಕೆ ಅಂಗನವಾಡಿ ಅಯಾಯೊಬ್ರು ಬರ್ತಾರೆ..ಆ ಮಹಿಳೆಯ ನ್ನು ನೋಡ್ತಾ ಇದ್ದಂತೆ ರಮೇಶ್ ಎಂಬಾತನ ಕಣ್ಣು ಕೆಂಪಾಗುತ್ತೇ..ಮಾತಿನ ಚಕಮಕಿಗೆ ಇಳಿದೆ ಬಿಡ್ತಾನೇ ರಮೇಶ್.ಮಾತಿಗೆ ಮಾತು ಅಗ್ತಿದ್ದಂತೆ ಮನೆಯಲ್ಲಿದ್ದ ಬಂದೂಕು ತಂದು ಶೂಟ್ ಮಾಡ್ತೀನಿ ಅಂತಾ ಅಯಾಗೆ ಎಚ್ಚರಿಸ್ತಾನೆ..ಅತನ ಕೈಯಲ್ಲಿ ಬಂದೂಕು ನೋಡ್ತಾ ಇದ್ದಂತೆ ಶಾಕ್ ಅದ ಅಯಾ ಕೊಂಚ ದೂರು ಹೋಗ್ತಾ ಇದ್ದಂತೆ ಬಂದೂಕಿನಿಂದ ಹೊರಬಂದ ಬುಲೆಟ್ ಹಾರೇ ಬಿಟ್ಟಿದೆ..ಅದ್ರೆ ತಗುಲಿದ್ದು ಮಾತ್ರ ಆಯಾಗಲ್ಲ..ಮಿಸ್ ಅಗಿ ಮೂವರು ಬಾಳೆಹೊನ್ನೂರಿಗೆ ಒಂದೇ ಬೈಕ್ ನಲ್ಲಿ ಹೋಗ್ತಾ ಇದ್ದವರಿಗೆ ಇಬ್ಬರಿಗೆ ಗುಂಡು ತಗುಲಿದ್ದು ಇನ್ನೊರ್ವ ಪಾರಾಗಿದ್ದಾನೆ.
ಬೈಟ್ :02 ಉಮಾ ಪ್ರಶಾಂತ್ ಎಸ್ಪಿ ಚಿಕ್ಕಮಗಳೂರು
ವಾ.ಓ :03 ಒಟ್ಟಾರೆ ರಮೇಶ್ ಮಾನಸಿಕ ಸ್ಥಿಮೀತ ಕಳೆದುಕೊಂಡಿದ್ದ ಎನ್ನಲಾಗುತ್ತಿದೆ..ನಿತ್ಯ ಯಾರು ಮನೆ ಹತ್ರ ಹೋಗ್ತಿದ್ರು ಕಿರಿಕ್ ಮಾಡ್ತೀದ್ದ..ಇವತ್ತು ಅಂಗನಾಡಿ ಆಯಾ ಬರ್ತಾ ಇದ್ದಂತೆ ನಿನ್ನ ಮಾವ ಹೇಗೆ ಕೊಲೆಯಾದ್ನೋ ಹಾಗೇ ನಿನ್ನು ಸಾಯಿಸ್ತೀನಿ ಬಂದೂಕಿನಿಂದ ಹಾರಿಸಿದ ಗುಂಡು ತಗುಲಿದ್ದು ಮಾತ್ರ ಬೇರೆಯವ್ರಿಗೆ..ಏನೂ ತಪ್ಪೇ ಮಾಡದೇ ಇಬ್ಬರು ಸಾವು ನಿಜಕ್ಕೂ ದುರಂತವೇ ಸರಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada