ಮಫ್ತಿ ಡೈರೆಕ್ಟರ್​ ನರ್ತನ್​ಗೆ ಅದ್ಯಾಕೋ ಟೈಮೇ ಸರಿ ಇಲ್ಲ ಅನಿಸ್ತಿದೆ.

ಫ್ತಿ ಡೈರೆಕ್ಟರ್​ ನರ್ತನ್​ಗೆ ಅದ್ಯಾಕೋ ಟೈಮೇ ಸರಿ ಇಲ್ಲ ಅನಿಸ್ತಿದೆ. ಮಫ್ತಿ ಆದ್ಮೇಲೆ ಇಷ್ಟೊತ್ತಿಗೆ ಎರಡ್ಮೂರು ಸಿನಿಮಾ ಮಾಡಬಹುದಿತ್ತೇನೋ ಆದ್ರೆ, ಅಂದುಕೊಂಡಂತೆ ಯಾವುದು ಆಗಿಲ್ಲ. ಯಶ್​ ಬಿಟ್ಟು ಆ ಕಡೆ ರಾಮ್​ ಚರಣ್​ ಹತ್ರಾ ಹೋದ್ರು. ಅಲ್ಲೂ ಕೂಡ ನಿರಾಸೆಯಾಗಿದೆಯಂತೆ.

‘ಮಫ್ತಿ’ ಅಂಥಾ ಸೂಪರ್​ ಡೂಪರ್​ ಹಿಟ್​ ಸಿನಿಮಾ ಕೊಟ್ಟ ನರ್ತನ್, ಅಂದುಕೊಂಡಂತೆ ಆಗಿದ್ದರೆ ರಾಕಿ ಭಾಯ್​ ಜೊತೆ ಇಷ್ಟೊತ್ತಿಗೆ ಸಿನಿಮಾ ಅನೌನ್ಸ್ ಮಾಡಬೇಕಿತ್ತು. ಆದ್ರೆ, ಯಶ್​ ವಿಚಾರದಲ್ಲಿ ಅಂದುಕೊಂಡಂತೆ ಆಗ್ಲಿಲ್ಲ. ಸರಿ ಮತ್ತೊಂದು ಆಪ್ಷನ್ ತಗೊಳ್ಳೋಣ ಅಂತ ಪಕ್ಕದ ಟಾಲಿವುಡ್​ ಕಡೆ ಪ್ರಯಾಣ ಬೆಳೆಸಿದ್ದ ನರ್ತನ್​ಗೆ ಅಲ್ಲಿಯೂ ನಿರಾಸೆ ಎದುರಾಗಿದೆ ಅನ್ನೋ ಮಾತುಗಳು ಕೇಳಿಬರ್ತಿದೆ.

ಯಶ್​ ಒಪ್ಪಲಿಲ್ಲ.. ರಾಮ್ ಚರಣ್​ ಹುಂ ಅನ್ಲಿಲ್ಲ..!
ಈ ಕಡೆ ಯಶ್​ಗಾಗಿ ನಾಲ್ಕೈದು ವರ್ಷ ಕೂತು ಸ್ಕ್ರಿಪ್ಟ್ ಮಾಡಿದ್ರು. ಒನ್ ಲೈನ್ ಸ್ಟೋರಿನ ಓಕೆ ಮಾಡಿದ್ದ ಯಶ್​, ಸ್ಕ್ರಿಪ್ಟ್​ ಮುಗಿಯೋ ವೇಳೆಗೆ ತಮ್ಮ ನಿರ್ಧಾರ ಬದಲಿಸಿಕೊಂಡ್ರು. ಸ್ಕ್ರಿಪ್ಟ್​ನಲ್ಲಿ ಚೇಂಜ್ ಮೇಲೆ ಚೇಂಜ್ ಹೇಳಿ ಹೇಳಿ ಕೊನೆಗೆ ಆ ಸ್ಕ್ರಿಪ್ಟ್​ ಬೇಡ ಅಂದು ಬಿಟ್ಟರು. ಈ ಕಡೆ ರಾಕಿ ಭಾಯ್​ ಬೇಡ ಅಂದ್ಮೇಲೆ ನರ್ತನ್​ಗೆ ಟಾಲಿವುಡ್​ ಮೆಗಾ ಪವರ್​ಸ್ಟಾರ್​ ರಾಮ್ ಚರಣ್ ತೇಜರಿಂದ ಬುಲಾವ್ ಬಂತು. ಸಿನಿಮಾ ಮಾಡೋ ಬಗ್ಗೆ ಇಂಟ್ರೆಸ್ಟ್​ ತೋರಿಸಿದ ಮೆಗಾಪುತ್ರ ಕಥೆ ಕೇಳ್ತೀನಿ ಅಂತಾನೂ ಹೇಳಿದ್ರು. ಆದ್ರೀಗ, ನರ್ತನ್ ಕಥೆ ಕೇಳಿದ್ಮೇಲೆ ಸದ್ಯಕ್ಕೆ ಬೇಡ ಇರಿ ಅಂತೇಳಿದ್ದಾರಂತೆ. ಇದು ನರ್ತನ್​ ಪಾಲಿಗೆ ಮತ್ತೆ ನಿರಾಸೆ ತಂದೊಡ್ಡಿದೆ.

ತ್ರಿಬಲ್ ಆರ್ ಸಕ್ಸಸ್​ ನಂತರ ನಟ ರಾಮ್ ಚರಣ್ ರೋಬೋ ಖ್ಯಾತಿಯ ಶಂಕರ್ ಜೊತೆ ಆರ್​ಸಿ 15 ಸಿನಿಮಾ ಮಾಡ್ತಿದ್ದಾರೆ. ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಆಗಿದ್ದು, ಈ ಚಿತ್ರದಲ್ಲಿ ಮೆಗಾಪುತ್ರ ದ್ವಿಪಾತ್ರ ಮಾಡ್ತಿದ್ದಾರೆ. ಈ ಸಿನಿಮಾ ನಂತರ ಉಪ್ಪೇನಾ ಡೈರೆಕ್ಟರ್ ಬುಚ್ಚಿಬಾಬು ಜೊತೆ 16ನೇ ಚಿತ್ರ ಮಾಡೋದಾಗಿ ಘೋಷಿಸಿದ್ದಾರೆ. ಈ ನಡುವೆ ಕನ್ನಡದ ನರ್ತನ್​ಗೂ ಕಾಲ್​ಶೀಟ್​ ಕೊಟ್ಟಿದ್ದು, ಶೀಘ್ರದಲ್ಲೇ ಅನೌನ್ಸ್ ಆಗಬಹುದು ಎಂದು ಹೇಳಲಾಗಿತ್ತು. ಆದ್ರೀಗ, ನರ್ತನ್ ಸಿನಿಮಾ ಟೇಕ್ ಆಫ್ ಆಗೋದು ಅನುಮಾನ ಎನ್ನಲಾಗಿದೆ. ಸ್ಕ್ರಿಪ್ಟ್ ವಿಷ್ಯದಲ್ಲಿ ಸ್ಯಾಟಿಸಿಪೈಡ್​ ಆಗದ ರಾಮ್ ಚರಣ್ ಸದ್ಯಕ್ಕೆ ಹೋಲ್ಡ್ ಎಂದಿದ್ದಾರಂತೆ.

ಆ ಕಡೆ ಯಶ್​ ಕೂಡ ಸ್ಕ್ರಿಪ್ಟ್​ ಇಷ್ಟ ಆಗಿಲ್ಲ ಅಂತ ಸಿನಿಮಾ ಕೈ ಬಿಟ್ರು. ಈ ಕಡೆ ರಾಮ್ ಚರಣ್ ತೇಜ ಕೂಡ ಸ್ಕ್ರಿಪ್ಟ್ ವಿಷ್ಯದಲ್ಲಿ ಇಂಟ್ರೆಸ್ಟ್​ ಕೊಟ್ಟಿಲ್ಲ ಎನ್ನಲಾಗಿದೆ. ಅಷ್ಟಕ್ಕೂ, ನರ್ತನ್ ಮಾಡ್ಕೊಂಡಿರೋ ಆ ಸ್ಕ್ರಿಪ್ಟ್​ನಲ್ಲಿ ಅಂಥದ್ದೇನಿದೆ? ಯಶ್​ ಬೇಡವೆಂದ ಕಥೆಯನ್ನೇ ರಾಮ್ ಚರಣ್​ಗೂ ಹೇಳಿದ್ರಾ ಅಥವಾ ಯಶ್​ಗೆ ಬೇರೆ ರಾಮ್ ಚರಣ್​ಗೆ ಬೇರೆ ಬೇರೆ ಕಥೆ ರೀಡ್ ಮಾಡಿದ್ರಾ? ಈ ಬಗ್ಗೆ ಯಾವುದೇ ಕ್ಲಾರಿಟಿ ಇಲ್ಲ. ಬಟ್, ರಾಮ್ ಚರಣ್ ಟೀಮ್ ಸದ್ಯಕ್ಕೆ ನರ್ತನ್​ ಕಥೆಯನ್ನ ವೆಯ್ಟಿಂಗ್ ಲಿಸ್ಟ್​ಗೆ ಹಾಕಿಕೊಂಡಿದೆ ಅನ್ನೋ ಸುದ್ದಿ ಮಾತ್ರ ಟಾಲಿವುಡ್​ ಅಂಗಳದಿಂದ ಹೊರಬಿದ್ದಿದೆ.

ಇನ್ನು ಯಶ್​-ನರ್ತನ್​ ಸಿನಿಮಾ ಕೆವಿಎನ್ ಸಂಸ್ಥೆ ನಿರ್ಮಿಸಬೇಕಿತ್ತು. ಅದಾಗಿಲ್ಲ ಅಂತ ರಾಮ್ ಚರಣ್​ ಬಳಿಯೂ ಕೆವಿಎನ್​ ಅವರೇ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಆ ಕಡೆ ಯುವಿ ಕ್ರಿಯೇಷನ್ಸ್​ ಕೂಡ ನರ್ತನ್​​ ಇಟ್ಕೊಂಡು ರಾಮ್ ಚರಣ್​ಗೆ ಸಿನಿಮಾ ಮಾಡಬೇಕು ಅಂತ ಸುತ್ತಾಡ್ತಿದ್ದಾರಂತೆ. ನರ್ತನ್​ಗೆ ಸದ್ಯಕ್ಕೆ ಟೈಮು ಸರಿ ಇಲ್ಲ ಅನಿಸ್ತಿದೆ. ಹಿಟ್ ಸಿನಿಮಾ ಕೊಟ್ರು ಹೊಸ ಚಿತ್ರ ಶುರು ಮಾಡೋಕೆ ಇನ್ನಿಲ್ಲದೇ ಕಷ್ಟಪಡುವಂತಾಗಿದೆ. ಈ ಕಷ್ಟ, ಈ ಸವಾಲುಗಳನ್ನ ಮೆಟ್ಟಿ ನರ್ತನ್​ ಆದಷ್ಟೂ ಬೇಗ ಸಿನಿಮಾ ಮಾಡ್ಲಿ ಅನ್ನೋದೊಂದೆ ನಮ್ಮ ಆಶಯ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದರ್ಶನ್ 56ನೇ ಸಿನಿಮಾದ ಟೈಟಲ್‌ ರಿವೀಲ್ ಆಗೋವರೆಗೂ ಫ್ಯಾನ್ಸ್ ನಿದ್ದೆನೂ ಮಾಡಿರಲಿಲ್ಲ.

Fri Feb 17 , 2023
ದರ್ಶನ್ 56ನೇ ಸಿನಿಮಾದ ಟೈಟಲ್‌ ರಿವೀಲ್ ಆಗೋವರೆಗೂ ಫ್ಯಾನ್ಸ್ ನಿದ್ದೆನೂ ಮಾಡಿರಲಿಲ್ಲ. ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ಟೈಟಲ್ ‘ಕಾಟೇರ’ ಅಂತ ರಿವೀಲ್ ಮಾಡಿದ್ದರು. ಅಲ್ಲಿಂದ ಸಿನಿಮಾದ ಟೈಟಲ್‌ ಬಗ್ಗೆ ಕುತೂಹಲ ಮತ್ತಷ್ಟು ದುಪ್ಪಟ್ಟಾಗಿದೆ. ‘ಕಾಟೇರ’ 1974ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಈ ಕಾರಣಕ್ಕೆ ಪ್ರೇಕ್ಷಕರನ್ನು ಸಿನಿಮಾದ ಕಥೆಯಷ್ಟೇ ಅಲ್ಲ, ಟೈಟಲ್ ಕೂಡ ಸೆಳೆಯುತ್ತಿದೆ. ಹಾಗಿದ್ದರೆ, ‘ಕಾಟೇರ’ ಅಂದ್ರೆ ಏನು? ಅನ್ನೋ ಇದೇ ಟೈಟಲ್‌ ಅನ್ನು […]

Advertisement

Wordpress Social Share Plugin powered by Ultimatelysocial