ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ ಮಾಜಿ ಶಾಸಕ ಪಿ.ಸಿ. ಜಾರ್ಜ್!

ತಿರುವನಂತಪುರಂ: ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ ಮಾಜಿ ಶಾಸಕ ಪಿ.ಸಿ. ಜಾರ್ಜ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮುಸ್ಲಿಂ ಮಾಲೀಕತ್ವದ ರೆಸ್ಟೋರೆಂಟ್ ಗಳಲ್ಲಿ ಕೊಡುವ ಚಹಾದಲ್ಲಿ ಬಂಜೆತನ ಬರುವ ಹನಿ ಹಾಕಲಾಗುತ್ತದೆ ಎಂಬುದು ಸೇರಿದಂತೆ ಅನೇಕ ವಿವಾದಿತ ಹೇಳಿಕೆಗಳನ್ನು ಪಿ.ಸಿ.

ಜಾರ್ಜ್ ನೀಡಿದ್ದರು. ಮುಸ್ಲಿಮರ ರೆಸ್ಟೊರೆಂಟ್ ವ್ಯಾಪಾರ ಸ್ಥಳಗಳಿಗೆ ಹಿಂದೂಗಳು ಹೋಗಬಾರದು ಎಂದು ಹೇಳಿದ್ದರು.

ಅವರ ಹೇಳಿಕೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅನೇಕ ಸಂಘಟನೆಗಳು ಜಾರ್ಜ್ ವಿರುದ್ಧ ದೂರು ದಾಖಲಿಸಿ ಕೋಮು ಸೌಹಾರ್ದತೆ ಕದಡಲು ಮುಂದಾಗಿರುವ ಪಿ.ಸಿ. ಜಾರ್ಜ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದರು. ತಿರುವನಂತಪುರಂ ಪೋರ್ಟ್ ಠಾಣೆ ಪೊಲೀಸರು ಜಾರ್ಜ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ದೇವೆಗೌಡರನ್ನು ಕುಂತಂತ್ರದಿಂದ ಸೋಲಿಸಿದ್ದು ನಂಬಿಕೆಗೆ ಮಾಡಿದ ದ್ರೋಹ :

Sun May 1 , 2022
ಕುಣಿಗಲ್, ಮೇ 1- ಜಿಲ್ಲಾಗೆ ಹೇಮಾವತಿ ನೀರು ಹರಿಯಲು ಪ್ರಮುಖ ಕಾರಣರಾದ ದೇವೆಗೌಡರನ್ನು ಕುತಂತ್ರದಿಂದ ಸೋಲಿಸಿದ್ದು ನಂಬಿಕೆಗೆ ಮಾಡಿದ ದ್ರೋಹ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. ಪಟ್ಟಣದ ಜಿ.ಕೆ.ಬಿ.ಎಂ.ಎಸ್ ಶಾಲಾ ಮೈದಾನದಲ್ಲಿ ಜನತಾ ಜಲಾಧಾರೆ ಕಾರ್ಯಕ್ತಮ ಉದ್ಘಾಟಿಸಿ ಮಾತನಾಡಿ, 1962 ರಿಂದ 2022 ರವರೆಗಿನ ಸುದೀರ್ಘ ಹೋರಾಟ ನಡೆಸಿ ನೀರಾವರಿಗೆ ರಾಜ್ಯದಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ರಾಜ್ಯದ ಉಳಿವಿಗಾಗಿ ತಮ್ಮ ಇಳಿ ವಯಸ್ಸಿನಲ್ಲಿ ಶ್ರಮಿಸುತಿದ್ದಾರೆ. […]

Advertisement

Wordpress Social Share Plugin powered by Ultimatelysocial