ಕೊಳ್ಳೇಗಾಲ ವಿಧಾನಸಭಾ ಕ್ಷೆತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಶಾಸಕ ಎನ್ ಮಹೇಶ್ 5ಕೋಟಿ 80ಲಕ್ಷದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು…..ಯಳಂದೂರು ತಾಲ್ಲೂಕಿನ ಕಟ್ಟೆಗಣಿಗನೂರು ಗ್ರಾಮದ ಸುವರ್ಣವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು….ಗಣಿಗನೂರು ಗ್ರಾಮಸ್ಥರು ದೇವಸ್ಥಾನ ಹಾಗೂ ಜಮೀನುಗಳಿಗೆ ತೆರಳಲು ಸೇತುವೆ ಆಗಬೇಕು ಎಂಬ ಸುಮಾರು ವರ್ಷಗಳ ಮನವಿಗೆ ಇಂದು ಕಾಲ ಕೂಡಿ ಬಂದಿದೆ…..ಯಳಂದೂರು ತಾಲ್ಲೂಕಿನ ಕಟ್ಟೆಗಣಿಗನೂರು ಗ್ರಾಮದ ಸೇತುವೆ ನಿರ್ಮಾಣಕ್ಕೆ 2ಕೋಟಿ 60ಲಕ್ಷ, ಆಲ್ಕೆರೆ ಅಗ್ರಹಾರ ಗ್ರಾಮದ ಉಪ್ಪಾರ ಸಮುದಾಯದಲ್ಲಿ ಸಿ ಸಿ ರಸ್ತೆ, ಚರಂಡಿಗೆ 30ಲಕ್ಷ, ಕೊಳ್ಳೇಗಾಲ ತಾಲ್ಲೂಕಿನ ಹಿತ್ತಲ ದೊಡ್ಡಿ ಗ್ರಾಮದ ಹತ್ತಿರ ಹೆಬ್ಬಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ 1ಕೋಟಿ 40ಲಕ್ಷ, ಅರೆ ಪಾಳ್ಯ ಮಾರ್ಗವಾಗಿ ಸೂರಾಪುರ ಸೇರುವ ರಸ್ತೆ ನಿರ್ಮಾಣಕ್ಕೆ 1ಕೋಟಿ 50ಲಕ್ಷ ಒಟ್ಟು 5ಕೋಟಿ 80ಲಕ್ಷ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗಿದೆ. ಎಲ್ಲಾರು ಖುದ್ದು ನಿಂತು ಉತ್ತಮ ಗುಣಮಟ್ಟದ ಕೆಲಸ ಮಾಡಿಸಿಕೊಳ್ಳಿ,ಕಳಪೆ ಕಾಮಗಾರಿ ಮಾಡಿದರೆ ಸಾರ್ವಜನಿಕರು ನಮಗೆ ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಆಗಿಯೇ ಅನವಶ್ಯಕವಾಗಿ ತೊಂದರೆ ಕೊಡಬೇಡಿ ಎಂದು ತಿಳಿಸಿದರು…..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de….