‘ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲವೇ ಇಲ್ಲ’: ನೇರವಾಗಿ ಹೇಳಿದ ಜನಾರ್ದನ ರೆಡ್ಡಿ ಪುತ್ರ ಕಿರೀಟಿ

‘ರಾಜಕೀಯದ ಬಗ್ಗೆ ನಾನು ಎಂದಿಗೂ ಯೋಚನೆ ಮಾಡಿಲ್ಲ. ಅದರ ಮೇಲೆ ನನಗೆ ಆಸೆಯೂ ಇಲ್ಲ’ ಎಂದು ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಹೇಳಿದ್ದಾರೆ.ರಾಜಕಾರಣಿಗಳ ಮಕ್ಕಳು ಸಿನಿಮಾ ರಂಗಕ್ಕೆ ಕಾಲಿಡುವುದು ಹೊಸದೇನೂ ಅಲ್ಲ. ಆ ಸಾಲಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ   ಅವರ ಪುತ್ರ ಕಿರೀಟಿ ರೆಡ್ಡಿ ಕೂಡ ಸೇರಿಕೊಂಡಿದ್ದಾರೆ.ಮೊದಲ ಚಿತ್ರದಲ್ಲಿಯೇ ಅವರು ದೊಡ್ಡ ನಿರ್ಮಾಣ ಸಂಸ್ಥೆ ‘ವಾರಾಹಿ ಫಿಲ್ಮಂ ಪ್ರೊಡಕ್ಷನ್’ ಜೊತೆ ಕೈ ಜೋಡಿಸಿದ್ದಾರೆ. ಈ ಸಿನಿಮಾದಲ್ಲಿ ರವಿಚಂದ್ರನ್​, ಜೆನಿಲಿಯಾ ಮುಂತಾದ ಸ್ಟಾರ್​ ಸೆಲೆಬ್ರಿಟಿಗಳು ನಟಿಸುತ್ತಿದ್ದಾರೆ. ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಕನಸು ಇಟ್ಟುಕೊಂಡಿರುವ ಕಿರೀಟಿ  ಅವರು ಸಾಕಷ್ಟು ತಯಾರಿ ಮಾಡಿಕೊಂಡು ಬಂದಿದ್ದಾರೆ. ತಂದೆ ರಾಜಕೀಯದಲ್ಲಿ ಹೆಸರು ಮಾಡಿದ್ದರೂ ಕೂಡ ಕಿರೀಟಿಗೆ ಆ ಕಡೆ ಆಸಕ್ತಿ ಇಲ್ಲ. ಆ ಬಗ್ಗೆ ಅವರು ನೇರವಾಗಿ ಮಾತನಾಡಿದ್ದಾರೆ. ‘ನಾನು ಚಿಕ್ಕ ಹುಡುಗ ಆಗಿದ್ದಾಗಿನಿಂದಲೂ ನನಗೆ ಇದ್ದ ಒಂದೇ ಆಸೆ ಎಂದರೆ ನಟ ಆಗಬೇಕು ಎಂಬುದು. ಕನ್ನಡ ಚಿತ್ರರಂಗದಲ್ಲಿ ಒಬ್ಬ ನಟನಾಗಿ ನಾನು ಉಳಿದುಕೊಳ್ಳಬೇಕು. ರಾಜಕೀಯದ ಬಗ್ಗೆ ನಾನು ಎಂದಿಗೂ ಯೋಚನೆ ಮಾಡಿಲ್ಲ. ಅದರ ಮೇಲೆ ನನಗೆ ಆಸೆಯೂ ಇಲ್ಲ. ಮುಂದೆ ಯಾರು ಪ್ರಶ್ನೆ ಕೇಳಿದರೂ ನನ್ನ ಉತ್ತರ ಇದೇ ಆಗಿರುತ್ತದೆ. ನನಗೆ ರಾಜಕೀಯಕ್ಕೆ ಹೋಗುವ ಉದ್ದೇಶ ಇಲ್ಲ’ ಎಂದು ಕಿರೀಟಿ ರೆಡ್ಡಿ   ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎರಡು ದಿವಾಳಿತನದಿಂದ ಬದುಕುಳಿದ ಡೈರಿ ಸ್ಟಾರ್ಟ್ಅಪ್ ಅನ್ನು ರೂ 225 ಕೋಟಿ ವ್ಯವಹಾರವನ್ನಾಗಿ ಮಾಡಿದ್ದ,ನಾಲ್ವರು ಸ್ನೇಹಿತರು;

Sun Mar 6 , 2022
ರಾಂಚಿ, ಮಾರ್ಚ್ 6 ಜಾರ್ಖಂಡ್‌ನ ರಾಂಚಿಯ ಮೂವರು ಸ್ನೇಹಿತರು ಡೈರಿ ಫಾರ್ಮ್ ಅನ್ನು ಪ್ರಾರಂಭಿಸಲು ತಮ್ಮ ಉತ್ತಮ ಸಂಬಳದ ಕಾರ್ಪೊರೇಟ್ ಉದ್ಯೋಗಗಳು, ಅತ್ಯುತ್ತಮ ವೃತ್ತಿಜೀವನದ ನಿರೀಕ್ಷೆಗಳು ಮತ್ತು ಮೇಲಿನ ಸ್ಥಿರವಾದ ಮೇಲ್ಛಾವಣಿಯನ್ನು ತ್ಯಜಿಸಿದಾಗ, ಪ್ರತಿಯೊಬ್ಬರೂ ಸವಾಲಿನ ವ್ಯಾಪಾರವನ್ನು ಹೊಂದುವ ನಿಖರತೆಯ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿದರು. ಅವರ ಸಾಹಸವು ಎಂದಿಗೂ ಪ್ರಾರಂಭವಾಗುವುದಿಲ್ಲ ಎಂದು ಕೆಲವರು ಹೇಳಿದರೆ, ಇತರರು ತಮ್ಮ ಆರಾಮದಾಯಕ ವಲಯಗಳಿಂದ ಹೊರಬರುವುದು ಮರೀಚಿಕೆಯನ್ನು ಬೆನ್ನಟ್ಟುವಂತೆ ತೋರುತ್ತಿರುವುದರಿಂದ ಮತ್ತೆ ತಮ್ಮ […]

Advertisement

Wordpress Social Share Plugin powered by Ultimatelysocial