ಇಂದು ನಡೆದ ಪದವಿ ಪ್ರಧಾನ ಸಮಾರಂಭದಲ್ಲಿ ನಿಯೋಜಿತ ಜಿಲ್ಲಾ ಗವರ್ನರ್ ನೈನ ಅಚ್ಚಪ್ಪ ಅವರು ನೂತನ ಅಧ್ಯಕ್ಷರಿಗೆ ಪದವಿ ಪ್ರಧಾನ ಮಾಡಿದರು
ಪಟ್ಟಣದ ಶ್ರಾವಣ ಕಲ್ಯಾಣ ಮಂಟಪದಲ್ಲಿ ನಡೆದ ಪದವಿ ಪ್ರಧಾನ ಸಮಾರಂಭ
ನಿಕಟಪೂರ್ವ ಅಧ್ಯಕ್ಷರಾದ ವಿನುತಾ ಶಶಿಧರ್ ಅವರಿಂದ ಅಧಿಕಾರ ಪಡೆದು ನೂತನ ಅಧ್ಯಕ್ಷರಾದ ಆಶಾ ನಾರಾಯಣರಾವ್ ಅವರಿಗೆ ಪದವಿ ಪ್ರಧಾನ ಮಾಡಲಾಯಿತುಅಧ್ಯಕ್ಷರ ಜೊತೆಗೆ ಕಾರ್ಯದರ್ಶಿ ಖಜಾಂಚಿ ಸೇರಿದಂತೆ ನೂತನ ಪದಾಧಿಕಾರಿಗಳಿಗೂ ಸಹ ಪದವಿ ಪ್ರಧಾನ ಮಾಡಲಾಯಿತು
ಇದೇ ಸಂದರ್ಭ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ವಿಶೇಷ ಚೇತನರಿಗೆ ವೀಲ್ ಚೇರ್ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ನೀರಿನ ಲೋಟಗಳನ್ನು ಸಹ ವಿತರಿಸಲಾಯಿತು
ಇನ್ನರ್ ವೀಲ್ ಹಿರಿಯ ಸದಸ್ಯೆ ಹಾಗೂ ಹಿರಿಯ ನೃತ್ಯ ಶಿಕ್ಷಕಿ ಉಷಾ ವೇಣುಗೋಪಾಲ್ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು
ಬಳಿಕ ನೂತನ ಅಧ್ಯಕ್ಷೆ ಆಶಾ ನಾರಾಯಣ್ ರಾವ್ ಮಾತನಾಡಿ ಬಹು ಆಸೆ ಮತ್ತು ನಿರೀಕ್ಷೆಯೊಂದಿಗೆ ಅಧಿಕಾರ ಪಡೆದಿದ್ದೇನೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ ತಮ್ಮ ಸಹಕಾರದಿಂದ ಕೆಲವು ನೂತನ ಯೋಜನೆಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು
ನಿಕಟ ಪೂರ್ವ ಅಧ್ಯಕ್ಷೆ ವಿನುತಾ ಶಶಿಧರ್ ಮಾತನಾಡಿ ನನ್ನ ಅವಧಿಯಲ್ಲಿ ಸುಮಾರು 85 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಒಳ್ಳೆಯ ಕೆಲಸ ಮಾಡಿರುವ ಖುಷಿ ತಂದಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿ ನನಗೆ ಸಹಕರಿಸಿದ ಸಂಸ್ಥೆಯ ಎಲ್ಲ ಪದಾಧಿಕಾರಿಗಳಿಗೆ ಧನ್ಯವಾದ ಎಂದ ರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಮಾರಿ ಡಾ. ಭಾವನ ವೇಣುಗೋಪಾಲ್ ನೂತನ ಕಾರ್ಯದರ್ಶಿ ಪೂರ್ಣಿಮಾ ಮಲ್ಲೇಶ್ ನಿಕಟ ಪೂರ್ವ ಕಾರ್ಯದರ್ಶಿ ಶಿಲ್ಪ ಗುರು ಪ್ರಸನ್ನ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: