ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣ-ಮಹಿಳೆ ಅರೆಸ್ಟ್

ಆಗ ತಾನೇ ಜನಿಸಿದ ಮಗುವೊಂದನ್ನು ಆಸ್ಪತ್ರೆಯಿಂದ ಅಪಹರಿಸಿದ ಮಹಿಳೆಯೊಬ್ಬಳನ್ನು ತಮಿಳು ನಾಡಿನ ತಂಜಾವೂರು ಪೊಲೀಸರು ಬಂಧಿಸಿದ್ದಾರೆ.

ಅಕ್ಟೋಬರ್‌ 5ರಂದು ರಾಜಲಕ್ಷ್ಮಿ ಎಂಬಾಕೆ ಹೆಣ್ಣು‌ ಮಗವಿಗೆ ಜನ್ಮ ನೀಡಿದ್ದಾರೆ. ಹೆತ್ತವರ ವಿರೋಧದ ನಡುವೆ ಮದುವೆ ಮಾಡಿಕೊಂಡ ಗುಣಶೇಖರನ್ ಹಾಗೂ ರಾಜಲಕ್ಷ್ಮಿಗೆ ಮಗುವಿನ ಹೆರಿಗೆಯಾದ ವೇಳೆ ಆಸ್ಪತ್ರೆಯಲ್ಲಿ ನೋಡಲು ಯಾರೊಬ್ಬರೂ ಇರಲಿಲ್ಲ.ತಾನೂ ಸಹ ಗರ್ಭಿಣಿಯಾದ ಕಾರಣ ಆಸ್ಪತ್ರೆಗೆ ಚೆಕಪ್‌ಗಾಗಿ ಹೋಗಿದ್ದ ವಿಜಿ ಎಂಬಾಕೆ ರಾಜಲಕ್ಷ್ಮಿ ದಂಪತಿಗೆ ಕೆಲವೊಂದು ಸಹಾಯಗಳನ್ನೂ ಮಾಡಿದ್ದಳು.

ಶನಿವಾರ ಬೆಳಿಗ್ಗೆ ಎದ್ದ ರಾಜಲಕ್ಷ್ಮಿಗೆ ತನ್ನ ಮಗು ಕಾಣೆಯಾಗಿದೆ ಎಂದು ತಿಳಿದು ಬಂದಿದ್ದು ಕೂಡಲೇ ಪೊಲೀಸರಿಗೆ ವಿಚಾರ ತಿಳಿಸಿದ್ದಾಳೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಮೂರು ತಂಡಗಳನ್ನು ರಚಿಸಿಕೊಂಡು ಮಗುವಿನ ಪತ್ತೆಗೆ ಮುಂದಾಗಿದ್ದಾರೆ. ಆಗ ವಿಜಿಯೇ ಮಗುವನ್ನು ಅಪಹರಿಸಿದ್ದು ತಿಳಿದು ಬಂದಿದೆ. ಮಗುವನ್ನು ಬಟ್ಟೆಯೊಂದರಲ್ಲಿ ಸುತ್ತಿಕೊಂಡು ವಿಜಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಸಿಸಿ ಟಿವಿ ಫುಟೇಜ್‌ಗಳನ್ನು ವಿಶ್ಲೇಷಿಸಿದ ವೇಳೆ ವಿಜಿ ಮೆಡಿಕಲ್ ಅಂಗಡಿಯೊಂದರಲ್ಲಿ ಡೈಪರ್‌ಗಳನ್ನು ಖರೀದಿ ಮಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಆಕೆಯನ್ನು ಪತ್ತೆ ಮಾಡಿದ ಪೊಲೀಸರು ಮಗುವನ್ನು ರಕ್ಷಿಸಿ, ಹೆತ್ತವರಿಗೆ ಹಸ್ತಾಂತರಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಯದುವೀರ್ ಸಿಂಹಾಸನಾರೋಹಣಕ್ಕೆ ಬಹುಪರಾಕ್…

Mon Oct 11 , 2021
ಮೈಸೂರು ರಾಜರು ನಡೆಸಿಕೊಂಡು ಬರುತ್ತಿದ್ದ ರಾಜದರ್ಬಾರ್, ಮೈಸೂರು ಅರಮನೆಯಲ್ಲಿ ಮರುಕಳಿಸುವುದರೊಂದಿಗೆ ಅಂದಿನ ರಾಜವೈಭವವನ್ನ ತೆರೆದಿಡುತ್ತಿದೆ. ಮೈಸೂರು ಮಹಾರಾಜರ ಕಾಲದಿಂದಲೂ ರಾಜ ದರ್ಬಾರಿಗೂ ದಸರಾ ಆಚರಣೆಗೂ ಅವಿನಾಭಾವ ಸಂಬಂಧವಿದೆ. ದಸರಾ ಹಬ್ಬದ ಕಾರ್ಯಕ್ರಮಗಳು ದರ್ಬಾರಿನಲ್ಲಿಯೇ ನಡೆಯುತ್ತಿದ್ದದ್ದು ಇತಿಹಾಸ. ದಸರಾ ಸಂದರ್ಭ ವಿವಿಧ ಪಾಂಡಿತ್ಯ ಹೊಂದಿದವರನ್ನ ರಾಜರು ಗುರುತಿಸಿ ಸನ್ಮಾನಿಸುತ್ತಿದ್ದದ್ದೇ ರಾಜ ದರ್ಬಾರಿನಲ್ಲಾಗಿತ್ತು. ಬಹುಶಃ ಇತಿಹಾಸದ ಪುಟಗಳನ್ನ ತಿರುವಿ ನೋಡಿದರೆ, ಈ ದೇಶದಲ್ಲಿ ಸುದೀರ್ಘ ಕಾಲದವರೆಗೆ ಅಂದರೆ ಸುಮಾರು 550 ವರ್ಷಗಳ ಕಾಲ […]

Advertisement

Wordpress Social Share Plugin powered by Ultimatelysocial