ದೇಶಾದ್ಯಾಂತ ಕೊರೋನಾ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಒಂದೊಂದೆ ಉದ್ಯಮಗಳು ಕಾರ್ಯ ವಹಿಸುತ್ತಿವೆ ಹಾಗೂ ಜನಜೀವನ ಕೂಡ ಮಾಮೂಲಿ ಸ್ಥಿಥಿಯಲ್ಲಿ ನಡೆಯುತ್ತಿದೆ, ಅಕ್ಟೋಬರ್ ನಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಯಬೇಕಿತ್ತು, ಆದರೆ ಐಸಿಸಿ ಇಲ್ಲಿಯವರೆಗೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಅಲ್ಲದೆ ಪ್ರತಿ ಬಾರಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಲ್ಲೂ ಚರ್ಚೆಗಳಾಗುತ್ತಿವೆ ಹೊರತು ಐಸಿಸಿ ಅಧಿಕಾರಿಗಳು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಹೀಗಿರುವಾಗ ಐಪಿಎಲ್ 13ನೇ ಆವೃತ್ತಿಯನ್ನು ಖಾಲಿ ಮೈದಾನದಲ್ಲಿ […]
ಕೆಲವು ದಿನಗಳ ಹಿಂದಷ್ಟೆ ರಾಜ್ಯಾದಂತ ರೈತರಿಗೆ ತೀವ್ರ ಭೀತಿ ಹುಟ್ಟಿಸಿದ್ದ ಮಿಡತೆಗಳು ಇದೀಗ ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಿಗೆ ಲಗ್ಗೆಯಿಟ್ಟು ಮತ್ತೊಮ್ಮೆ ಆತಂಕ ಮೂಡಿಸಿವೆ. ಕಳೆದೆರಡು ಮೂರು ದಿನಗಳಿಂದ ಬೀಸುತ್ತಿರುವ ಗಾಳಿಯಿಂದ ಮಿಡತೆಗಳು ಮರಳಿ ದಾಳಿ ಮಾಡುತ್ತಿವೆ ಎಂದು ಮಿಡತೆ ಎಚ್ಚರಿಕೆ ಸಂಸ್ಥೆ ಮಾಹಿತಿ ನೀಡಿದೆ. ಅದಲ್ಲದೇ ಉತ್ತರ ಪ್ರದೇಶದ ಪ್ರಯಾಗ್ ರಾಜ್, ಮಹಾರಾಷ್ಟ್ರದ ನಾಗ್ಪುರ ಹಾಗೂ ರಾಜಸ್ಥಾನದ ಹಲವೆಡೆ ಮಿಡತೆಗಳು ಮತ್ತೊಮ್ಮೆ ದಾಳಿ ಮಾಡುವ ಮೂಲಕ […]
ರಾಜ್ಯದಲ್ಲಿ ಒಂದೇ ಒಂದು ಮುಕ್ತ ವಿವಿ ಮಾಡುತ್ತೇವೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿ ನಡೆಸಿದರು, ಕರ್ನಾಟಕ ಮುಕ್ತ ವಿವಿ ಮಾತ್ರವೇ ಅಧಿಕೃತವಾಗಿ ಕೆಲಸ ಮಾಡುತ್ತದೆ. ಸೆಂಟ್ರಲ್ ವಿವಿಯನ್ನು ಬೆಂಗಳೂರು ಸಿಟಿ ವಿವಿಯಾಗಿ ಮಾಡಿದ್ದೇವೆ, ಸರ್ಕಾರಿ ವಿಜ್ಞಾನ ಕಾಲೇಜಿಗೆ ವಿವಿ ಸ್ವರೂಪ ನೀಡುತ್ತಿದ್ದೇವೆ, ನೃಪತುಂಗ ವಿವಿ ಎಂದು ಮಾಡುತ್ತೇವೆ. ಇನ್ನು ವಿವಿಗಳಿಗೆ ವಿಷೇಶಾಧಿಕಾರಿಗಳ ನೇಮಕಕ್ಕೆ ಒಪ್ಪಿಗೆಯಾಗಿದೆ, ಮಹಾರಾಣಿ ಕ್ಲಸ್ಟರ್,ಮಂಡ್ಯ […]
ಹಾಸನ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ ಸಾವಿಗೀಡಾಗಿದ್ದಾರೆ. ಮಕ್ಕಳ ತಜ್ಞ ಡಾ.ಶಿವಕಿರಣ್ ಮೃತ ವೈದ್ಯ.ಹಾಸನದ ಆಲೂರಿನ ವೈದ್ಯ ಶಿವಕಿರಣ್, ೩ ತಿಂಗಳಿನಿಂದ ನಿರಂತರವಾಗಿ ಕೊರೊನಾ ಸೋಂಕಿತರ ಸೇವೆಯಲ್ಲಿ ನಿರತರಾಗಿದ್ದರು. ಅಧಿಕ ಕೆಲಸದ ಒತ್ತಡದಿಂದ ಆರೋಗ್ಯ ಕೇಂದ್ರದಲ್ಲೇ ಕುಸಿದು ಬಿದ್ದು ಜೂ.೩ ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬ್ರೇನ್ ಸ್ಟ್ರೋಕ್ ಗೆ ತುತ್ತಾಗಿ ನೆನ್ನೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ರಾಜ್ಯ ಸಚಿವ ಸಂಪುಟ ಸಭೆ ಆರಂಭವಾಗಿದೆ. ವಿಧಾನಸೌಧದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಂಪುಟ ಸಭೆ ನಡೆಯುತ್ತಿದೆ. ವಿಧಾನಪರಿಷತ್ ಸದಸ್ಯರ ಆಯ್ಕೆ, ಹೊರರಾಜ್ಯದವರ ಕ್ವಾರಂಟೈನ್ ವಿಚಾರ, ನೇಕಾರರ ಸಮಸ್ಯೆ ಹಾಗೂ ಶಾಲಾ ಆರಂಭ ಮತ್ತು ಶುಲ್ಕದ ವಿಚಾರಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಮಾಜಿ ಡಬಲ್ಸ್ ಬ್ಯಾಡ್ಮಿಂಟನ್ ಆಟಗರ್ತಿ ಜ್ವಾಲಾ ಗುಟ್ಟಾ ಹಾಲಿ ಭಾರತದ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದರ ಜತೆಗೆ ಮಾತನಾಡಿರುವ ಜ್ವಾಲಾ ಗುಟ್ಟಾ, “ಗೋಪಿಚಂದ್ ಅವರು ಭಾರತವನ್ನು ಪ್ರತಿನಿಧಿಸುತ್ತಿದ್ದಾಗ ಇತರೆ ರಾಜ್ಯದ ಬ್ಯಾಡ್ಮಿಂಟನ್ ಆಟಗಾರರು ಕೂಡ ಇರುತ್ತಿದ್ದರು, ದೇಶದ ವಿವಿಧ ಭಾಗಗಳಿಂದ ಉನ್ನತ ಆಟಗಾರರು ಹೊರ ಹೊಮ್ಮುತ್ತಿದ್ದರು. ಆದರೆ ಕಳೆದ ೧೦ರಿಂದ ೧೨ ರ್ಷಗಳ ಅವಧಿಯಲ್ಲಿ ಹೈದರಾಬಾದ್ ಅಥವಾ ತೆಲುಗಿನ ಆಟಗಾರರು ಮಾತ್ರ ಭಾರತ […]
ವಲಸೆ ಕಾರ್ಮಿಕರ ರಕ್ಷಣೆಗೆ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತರಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಟ್ವಿಟ್ಟರ್ನಲ್ಲಿ ಈ ಕುರಿತಾಗಿ ಟ್ವೀಟ್ ಮಾಡಿದ ಅವರು, ವಲಸೆ ಕಾರ್ಮಿಕರನ್ನು 15 ದಿನಗಳಲ್ಲಿ ಊರಿಗೆ ಕಳಿಸಿಕೊಡಬೇಕು, ಊರಿಗೆ ಮರಳಿದವರಿಗೆ ಉದ್ಯೋಗ ಕಲ್ಪಿಸಲು ವ್ಯವಸ್ಥೆ ಮಾಡಬೇಕು ಮತ್ತು ಅವರ ಮೇಲಿನ ಮೊಕದ್ದಮೆಗಳನ್ನು ಕೈಬಿಡಬೇಕು ಎಂಬ ಸುಪ್ರೀಮ್ ಕೋರ್ಟ್ ಆದೇಶ ಮಾಡಿದೆ. ಇದನ್ನು ದೇಶದಲ್ಲಿ ಪ್ರಧಾನಿ […]
ವೃದ್ಧ ದಂಪತಿಯ ಭೀಕರ ಕೊಲೆ…! ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಘಟನೆ…ವೃದ್ಧ ದಂಪತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. ಕಾಮಾಕ್ಷಿಪಾಳ್ಯದ ರಂಗನಾಥಪುರ ನಿವಾಸಿಗಳಾದ ನರಸಿಂಹರಾಜು ಮತ್ತು ಸರಸ್ವತಿ ಹತ್ಯೆಯಾದವರೆಂದು ತಿಳಿದುಬಂದಿದೆ. ದುಷ್ರ್ಮಿಗಳು ವೃದ್ಧ ದಂಪತಿಯನ್ನು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ರ್ಮಿಗಳ ಹುಡುಕಾಟಕ್ಕೆ ಕರ್ಯಚರಣೆ ನಡೆದಿದೆ.
ಶಾಲಾ ಶುಲ್ಕ, ಆನ್ಲೈನ್ ತರಗತಿಗಳ ಕುರಿತು ಸಭೆ…ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ…ಶಾಲಾ ಶುಲ್ಕ ಮತ್ತು ಆನ್ ಲೈನ್ ಕ್ಲಾಸ್ ವಿಚಾರವಾಗಿ, ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ.ಕೊರೊನಾ ಉಂಟುಮಾಡಿರುವ ರ್ಥಿಕ ಸಂಕಷ್ಟದ ನಡುವೆ, ಶಾಲಾ ಫೀಸ್ ಕುರಿತು ಸಾಕಷ್ಟು ರ್ಚೆಗಳು ಸೃಷ್ಟಿಯಾಗುತ್ತಿದ್ದು, ಪೋಷಕರು ತೀರ ಗೊಂದಲಕ್ಕೀಡಾಗಿದ್ದಾರೆ. ಈ ಸಂಬಂಧ ಅಧಿಕಾರಿಗಳ ಜತೆ ಶಿಕ್ಷಣ ಸಚಿವರು ರ್ಚೆ ನಡೆಸಲಿದ್ದು, ಪೋಷಕರು,ಖಾಸಗಿ ಶಾಲೆಗಳ ಒಕ್ಕೂಟ,ಶಿಕ್ಷಣ ಇಲಾಖೆಯ ಆಯುಕ್ತರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಸುಗೂ ಹೆಂಧಾಮ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ ಎಂದು ವರಿದಯಾಗಿದೆ. ಗುಂಡಿನ ಕಾಳಗದಲ್ಲಿ ಭಾರತೀಯ ಸೇನಾ ಪಡೆ ಇಬ್ಬರು ಭಯೋತ್ಪಾದಕರನ್ನು ಎನ್ಕೌಂಟರ್ ಮೂಲಕ ಹತ್ಯೆಗೈದಿದ್ದು, ಇನ್ನು ಕಾರ್ಯಚರಣೆ ಪ್ರಗತಿಯಲ್ಲಿದೆ. ಪೊಲೀಸ್, ಭಾರತೀಯ ಸೇನೆ ಮತ್ತು ಸಿಆರ್ಪಿಎಫ್ ಜಂಟಿ ತಂಡ ಇಂದು ಬೆಳಿಗ್ಗೆ ಸುಗೂ ಹೆಂಧಮಾದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಪಡೆದು ಕಾರ್ಯಚರಣೆಗಿಳಿದಿದ್ದವು. ಈ ವೇಳೆ […]