ಕೇಪ್ ಟೌನ್: ದಕ್ಷಿಣ ಆಫ್ರಿಕ ಪ್ರವಾಸದಲ್ಲಿರುವ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದ ಐದನೇ ದಿನದಾಟದಲ್ಲಿ ವೇಗಿ ಮಹ್ಮದ್ ಸಿರಾಜ್ ಆಕ್ರಮಣಕಾರಿ ನಡತೆಯನ್ನು ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಆಕ್ಷೇಪಿಸಿದ್ದಾರೆ.
ದಕ್ಷಿಣ ಆಫ್ರಿಕ ಉಪನಾಯಕ ಬವುಮ ರನ್ ಗಾಗಿ ಓಡದಿದ್ದರೂ ಸಿರಾಜ್ ಆತನ ಮೇಲೆ ಬಾಲ್ ಎಸೆದಿದ್ದಾಗಿ ಅವರು ಆರೋಪಿಸಿದ್ದಾರೆ.
ವಿನಾಕಾರಣ ಬಾಲ್ ಎಸೆಯುವ ಅಗತ್ಯ ಏನಿತ್ತು ಎಂದು ಗವಾಸ್ಕರ್ ಪ್ರಶ್ನೆ ಮಾಡಿದ್ದಾರೆ.
ಪಂದ್ಯದ ವೇಳೆ ಸಿರಾಜ್ ಎಸದ ಚೆಂಡು ಬವುಮಾ ಅವರ ಎಡಗಾಲಿಗೆ ತಗುಲಿ ಅವರು ಗಾಯಗೊಂಡಿದ್ದರು. ಭಾರತ ತಂಡದ ಮ್ಯಾನೆಜ್ಮೆಂಟ್ ಆತನ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada