ಅಪ್ಪ-ಅಮ್ಮನನ್ನು ಕಳೆದುಕೊಂಡೆ, ವೇದಿಕೆ ಮೇಲೆ ಸಿತಾರ ಕಣ್ಣೀರು!.

ಜೀ ಕನ್ನಡದಲ್ಲಿ ಸಂಜೆ 6.30ಕ್ಕೆ ಪ್ರಸಾರವಾಗ್ತಿರುವ ಪಾರು ಧಾರಾವಾಹಿ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.ಪಾರು ಧಾರಾವಾಹಿಯಲ್ಲಿ ಕಾಮಿಡಿ ಕಮ್ ವಿಲನ್ ಪಾತ್ರ ಮಾಡಿರೋ ದಾಮಿನಿ ಜನರಿಗೆ ಇಷ್ಟವಾಗಿದ್ದಾರೆ.ನಾವು ಕಾಮಿಡಿಯಾಗಿ ನೋಡುವ ದಾಮಿನಿ ನಡೆದು ಬಂದ ಜೀವನ ತುಂಬಾ ಕಷ್ಟದ್ದಾಗಿದೆ. ಈ ಹಂತಕ್ಕೆ ಬರಲು ಅವರು ತುಂಬಾ ಕಷ್ಟಪಟ್ಟಿದ್ದಾರೆ.ಸಿತಾರ ತಾರಾ ಅವರು 3 ತಿಂಗಳ ಮಗು ಇದ್ದಾಗಲೇ ಅಪ್ಪ-ಅಮ್ಮನನ್ನು ಕಳೆದುಕೊಂಡ್ರಂತೆ. ಆಗ ಅಜ್ಜಿ ಅವರನ್ನು ಸಾಕಿದ್ರಂತೆ. ಆದ್ರೆ ವಿದ್ಯಾಭ್ಯಸ ಕೊಡಿಸುವಷ್ಟು ಅಜ್ಜಿ ಶಕ್ತಳಾಗಿರಲಿಲ್ವಂತೆ ಸಿತಾರ ಅವರನ್ನು ಸಾಣಿ ಹಳ್ಳಿ ಸ್ವಾಮೀಜಿ ದತ್ತು ತೆಗೆದುಕೊಂಡ್ರಂತೆ. ಪ್ರತಿಸಲ ಅನ್ನ ತಿನ್ನುವಾಗಲೂ ನಾನು ಅವರನ್ನು ನೆನಪಿಸಿಕೊಳ್ಳಬೇಕು. ಸಾಣಿ ಹಳ್ಳಿ ಶ್ರೀಗಳನ್ನು ನನ್ನನ್ನು ಸಾಕಿದ್ದು ಎಂದು ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದಾರೆ.ಪಿಯುಸಿ ಮುಗಿಸಿ ಡಿಗ್ರಿ ಮಾಡುವಾಗ ನೀನಾಸಂ ಸಿಕ್ತು. ರಜೆ ಬಿಟ್ರೆ ಮಕ್ಕಳೆಲ್ಲಾ ಊರಿಗೆ ಹೋಗ್ತಾರೆ. ನಾನು ಮಾತ್ರ ಒಬ್ಬಳೇ ಹಾಸ್ಟೆಲ್ ನಲ್ಲಿ ಇರ್ತಿದ್ದೆ. ನನಗೆ ಅಪ್ಪ ಅಮ್ಮ ಇಲ್ಲ ಅನ್ನೋ ನೋವು ತುಂಬಾ ಕಾಡುತ್ತೆ ಸಿತಾರ ಅವರಿಗೆ ಕುಟುಂಬ ಅಂದ್ರೆ ಏನು ಅಂತ ಗೊತ್ತೇ ಇರಲಿಲ್ವಂತೆ. ಸ್ನೇಹಿತರು ಹೇಳಿದ ಮೇಲೆ ಗೊತ್ತಾಗಿದ್ದಂತೆ. ಅವರ ಸ್ನೇಹಿತರ ಅಪ್ಪ ಅಮ್ಮ ಎಷ್ಟೂ ಸಾರಿ ಊಟ, ತಿಂಡಿ ತಂದು ಕೊಡುತ್ತಿದ್ದರಂತೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಕ್ಕಳ ಹಾಲಿನ ಪೌಡರ ಅಕ್ರಮ ಸಾಗಾಟ ಮಾಡುತ್ತಿದ್ದ ಬಿಜೆಪಿ ಮುಖಂಡ.

Mon Jan 30 , 2023
ಬಿಜೆಪಿ‌ ಮುಖಂಡನ ವಿರುದ್ಧ ಯಾದಗಿರಿ ಜಿಲ್ಲಾ ನ್ಯಾಯಾಲಯ ಶಿಕ್ಷೆ ಪ್ರಕಟ.. ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದ ನ್ಯಾಯಲಯದ ಆದೇಶ. ಅಂಗನವಾಡಿ ಮಕ್ಕಳಿಗೆ ಪೂರೈಸಬೇಕಿದ್ದ ಹಾಲಿನ ಪೌಡರ್ ಅಕ್ರಮ ಸಾಗಾಟ ಮತ್ತು ಖರೀದಿ ಪ್ರಕರಣ.. ಬಿಜೆಪಿ ಮುಖಂಡ ಸೇರಿ‌ ಮೂರ ಜನರ ವಿರುದ್ದ ಒಂದು ವರ್ಷ ಸಜೆ ವಿಧಿಸಿದ ನ್ಯಾಯಾಲಯ.. ಯಾದಗಿರಿ ಜಿಲ್ಲಾ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ.. ಒಂದು‌ ವರ್ಷ ಸಾದ ಶಿಕ್ಷೆ 10 ಸಾವಿರ ದಂಡ ವಿಧಿಸಿ ಆದೇಶ.. ಬಿಜೆಪಿಯ […]

Advertisement

Wordpress Social Share Plugin powered by Ultimatelysocial