ಟರ್ಕಿಯಲ್ಲಿ ಭೂಕಂಪದಿಂದ ತೊಂದರೆಗೆ ಒಳಗಾದ ಪ್ರದೇಶಗಳಲ್ಲಿ ದೇಶದ ವಿಪತ್ತು ನಿರ್ವಹಣಾ ದಳ ನಡೆಸಿದ ಕಾರ್ಯಾಚರಣೆಗೆ ಆ ದೇಶದ ಜನರು ಮುಕ್ತ ಕಂಠದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಒಂದೇ ರಾತ್ರಿಯಲ್ಲಿ 140 ಮಂದಿಗೆ ಅಲ್ಲಿಗೆ ತೆರಳಲು ತುರ್ತಾಗಿ ಪಾಸ್ಪೋರ್ಟ್ ಒದಗಿಸಿದ ಪ್ರಕ್ರಿಯೆ, ಸರಿಯಾದ ರೀತಿಯಲ್ಲಿ ಸ್ನಾನ ಇಲ್ಲದೆ ದಿನಗಳನ್ನು ಕಳೆದ ಬಗ್ಗೆ “ಪಿಟಿಐ’ ಸುದ್ದಿ ಸಂಸ್ಥೆ ಜತೆಗೆ ಹಂಚಿಕೊಂಡಿದೆ.ನಿಸ್ವಾರ್ಥ ಸೇವೆಗೆ ಆ ದೇಶದ ಜನರ ಪ್ರೀತಿ, ಮನತುಂಬಿದ ಹಾರೈಕೆ, ಕೃತಜ್ಞತೆಯ ಬಿಸಿ ಕಣ್ಣಹನಿಯನ್ನು ತಂಡ ನೆನಪಿನ ಬುತ್ತಿಯಲ್ಲಿ ಹೊತ್ತು ತಂದಿದೆ.ಭೂಕಂಪದಿಂದ ತತ್ತರಿಸಿದ್ದ ಟರ್ಕಿಗೆ ನೆರವು ನೀಡಲು ನಿರ್ಧರಿಸಿ “ಆಪರೇಷನ್ ದೋಸ್ತ್’ಗೆ ಕೇಂದ್ರ ಸರ್ಕಾರ ನಿರ್ಧರಿಸುತ್ತಿದ್ದಂತೆಯೇ ಎನ್ಡಿಆರ್ಎಫ್ನ 152 ಸಿಬ್ಬಂದಿಯ 3 ಎನ್ಡಿಆರ್ಎಫ್ ತಂಡ ಹಾಗೂ 6 ಸೇನಾ ಶ್ವಾನಗಳು. ಕೇವಲ 8 ಗಂಟೆಯ ಅವಧಿಯಲ್ಲಿ 30 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ, 60ಕ್ಕೂ ಅಧಿಕ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಸ್ಥಾಪನೆ, 24 ಗಂಟೆಗಳ ಅವಧಿಯೂ 3,600ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ, ಶ್ವಾನದಳದಿಂದ ನಿರಂತರ ಹುಡುಕಾಟ ಹೀಗೆ ಫೆ. 7 ರಿಂದ ಫೆ.19ರ ವರೆಗೆ ಭಾರತದ ತಂಡ, ಟರ್ಕಿ ಜನರ ಜೀವ ಉಳಿಸಲು ಕೆಲಸ ಮಾಡಿದೆ.“ನಮಗಿನ್ನೂ ಟರ್ಕಿಯದ್ದೇ ಚಿಂತೆ, ಇನ್ನಷ್ಟು ಮಂದಿಯ ಜೀವವನ್ನು ಉಳಿಸಬಹುದಿತ್ತು ಎನ್ನುವ ಭಾವ ಕಾಡುತ್ತಲೇ ಇದೆ’ ಎಂದು ಹೇಳಿದ್ದಾರೆ. ಟರ್ಕಿ ಜನರು ನಮ್ಮ ಸೇವೆಗೆ ಪ್ರತಿಯಾಗಿ ಕಣ್ಣೀರಿಟ್ಟು ಧನ್ಯವಾದ ಅರ್ಪಿಸಿದರು. ನಮ್ಮನ್ನು ಅಪ್ಪಿ, ಸಹಾಯ ಮರೆಯುವುದಿಲ್ಲವೆಂದರು. ನಮ್ಮ ಕುಟುಂಬಸ್ಥರೇ ಸಂಕಟದಲ್ಲಿ ಸಿಕ್ಕ ಅನುಭವ ಆಗಿತ್ತು ಎಂದು ಮತ್ತೊಬ್ಬ ಸದಸ್ಯರು ತಿಳಿಸಿದ್ದಾರೆ. ರಕ್ಷಾಣಾ ತಂಡದ ಅಧಿಕಾರಿಯೊಬ್ಬರಿಗೆ ಸಸ್ಯಹಾರ ಬೇಕಿತ್ತು. ಈ ವೇಳೆ ಅಲ್ಲಿನ ಜನ ಸಿಕ್ಕ, ಹಣ್ಣು ತರಕಾರಿಗಳನ್ನೇ ನೀಡಿ ಸಹಕರಿಸಿದರು ಎಂದು ನೆನಪಿಸಿಕೊಂಡರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada