ಪಠಾಣ್‌ಗೆ ಆ್ಯಕ್ಷನ್ ಅಂದ್ರೆ ಎನರ್ಜಿ; ಲಾಜಿಕ್ ಅಂದ್ರೆ ಅಲರ್ಜಿ!.

 

ಮಾಜಿ ರಾ ಏಜೆಂಟ್ ಆಗಿರುವ ಪಠಾಣ್‌ (ಶಾರುಖ್ ಖಾನ್) ಸೇನೆಯಿಂದ ದೂರ ಉಳಿದಿರುತ್ತಾನೆ. ಮತ್ತೊಂದೆಡೆ ಜಿಮ್ (ಜಾನ್ ಅಬ್ರಾಹಂ) ಎಂಬ ಪಾತಕಿಯೊಬ್ಬ ಭಾರತದ ಮೇಲೆ ದಾಳಿ ಮಾಡಲು ದೊಡ್ಡ ಸ್ಕೆಚ್ ಹಾಕಿರುತ್ತಾನೆ. ಅವನಿಗೆ ಬೆಂಬಲವಾಗಿ ಪಾಕಿಸ್ತಾನ ಇರುತ್ತದೆ. ಭಾರತದ ಮೇಲೆ ದಾಳಿ ಮಾಡಲು ಮುಂದಾಗಿರುವ ಜಿಮ್‌ನನ್ನು ಮಟ್ಟ ಹಾಕಲು ಪಠಾಣ್‌ ಮುಂದಾಗುತ್ತಾನೆ. ಆ ಮಿಷನ್‌ನಲ್ಲಿ ಪಠಾಣ್‌ಗೆ ಹೇಗೆ ಯಶಸ್ವಿಯಾಗುತ್ತಾನೆ? ಜಿಮ್‌ಗೆ ಭಾರತ ಮೇಲೇಕೆ ದ್ವೇಷ? ಪಾಕಿಸ್ತಾನ ಏಕೆ ಜಿಮ್‌ಗೆ ಸಪೋರ್ಟ್ ಮಾಡುತ್ತದೆ ಅನ್ನೋದೆ ‘ಪಠಾಣ್’ ಸಿನಿಮಾದ ಟ್ವಿಸ್ಟ್. ಇಂಥದ್ದೊಂದು ಸೈನಿಕನ ದೇಶಪ್ರೇಮದ ಕಥೆಯನ್ನು ಆ್ಯಕ್ಷನ್ ಮೂಲಕ ತೆರೆಗಿಳಿಸಿದ್ದಾರೆ ನಿರ್ದೇಶಕ ಸಿದ್ದಾರ್ಥ್ ಆನಂದ್.ಶಾರುಖ್ ಖಾನ್‌ರ ಸಿನಿಮಾಗಳನ್ನು ಮಿಸ್ ಮಾಡಿಕೊಂಡಿದ್ದ ಫ್ಯಾನ್ಸ್‌ಗೆ ‘ಪಠಾಣ್‌’ ಒಂದು ಪಕ್ಕಾ ಎಂಟರ್‌ಟೇನ್‌ಮೆಂಟ್ ಪ್ಯಾಕೇಜ್ ಅನ್ನೋದರಲ್ಲಿ ಡೌಟೇ ಇಲ್ಲ. ಇಲ್ಲಿ ಶಾರುಖ್‌ ಖಾನ್‌ ಮ್ಯಾನರಿಸಂ, ಆ್ಯಕ್ಷನ್ ಸೀನ್‌ಗಳು, ಕಟ್ಟುಮಸ್ತಾದ ಅವರ ಫಿಟ್‌ನೆಸ್‌ ಎಲ್ಲವೂ ಫ್ಯಾನ್ಸ್‌ಗೆ ಭೂರಿಭೋಜನ! ಅದರಲ್ಲೂ ಆ್ಯಕ್ಷನ್ ಸೀನ್‌ಗಳಲ್ಲಂತೂ ಶಾರುಖ್ ಮಸ್ತ್‌ ಆಗಿ ಫೈಟ್ ಮಾಡಿದ್ದಾರೆ. ರೊಮ್ಯಾಂಟಿಕ್ ಹೀರೋ ಆಗಿ ಮಿಂಚಿದ್ದ ಶಾರುಖ್ ಈ ಬಾರಿ ಆ್ಯಕ್ಷನ್ ಹೀರೋ ಆಗಿ ಅಕ್ಷರಶಃ ಫ್ಯಾನ್ಸ್‌ಗೆ ಮನರಂಜನೆಯ ರಸದೌತಣ ನೀಡಿದ್ದಾರೆ.’ಪಠಾಣ್‌’ ಸಿನಿಮಾದ ಮೇಜರ್‌ ಹೈಲೈಟ್ ಎಂದರೆ ಅದು ಸಲ್ಮಾನ್ ಖಾನ್. ಏಜೆಂಟ್ ‘ಟೈಗರ್’ ಆಗಿ ಒಂದು ಸೀನ್‌ನಲ್ಲಿ ಕಾಣಿಸಿಕೊಳ್ಳುವ ಅವರು, ಭರ್ಜರಿ ಫೈಟ್ ಮಾಡಿದ್ದಾರೆ. ಶಾರುಖ್ ಮತ್ತು ಸಲ್ಮಾನ್‌ ಜೋಡಿಯನ್ನು ತೆರೆಮೇಲೆ ಒಟ್ಟಿಗೆ ನೋಡುವುದೇ ಒಂದು ಹಬ್ಬ. ನಿರ್ದೇಶಕರ ಈ ಐಡಿಯಾ ಸಖತ್ ವರ್ಕ್‌ ಆಗಿದೆ.ನಿರ್ದೇಶಕ ಸಿದ್ದಾರ್ಥ್ ಆನಂದ್ ಆ್ಯಕ್ಷನ್ ಸಿನಿಮಾಗಳಿಂದಲೇ ಫೇಮಸ್ ಆದವರು. ‘ಪಠಾಣ್‌’ನಲ್ಲೂ ಅವರು ಆ್ಯಕ್ಷನ್ ಜಪ ಮುಂದುವರಿಸಿದ್ದಾರೆ. ಹೆಲಿಕಾಪ್ಟರ್ ಫೈಟ್, ಬೈಕಲ್ ಹಿಮ ಸರೋವರದಲ್ಲಿನ ಬೈಕ್ ಚೇಸ್, ಟ್ರೇನ್ ಫೈಟ್, ಜೆಟ್ ಫೈಟ್.. ಹೀಗೆ ಆ್ಯಕ್ಷನ್‌ಗಾಗಿಯೇ ಹೊಸ ಹೊಸ ಶೈಲಿಯನ್ನು ಸಿದ್ದಾರ್ಥ್ ಆನಂದ್ ಅನುಸರಿಸಿದ್ದಾರೆ. ಈ ಸಿನಿಮಾದಲ್ಲಿ ಯಾವಮಟ್ಟದಲ್ಲಿ ಆ್ಯಕ್ಷನ್‌ ಇದೆಯೆಂದರೆ, ಮೊದಲು ಸಾಹಸ ಸನ್ನಿವೇಶಗಳನ್ನು ಬರೆದುಕೊಂಡು, ಆಮೇಲೆ ಸಿನಿಮಾ ಸ್ಕ್ರಿಪ್ಟ್ ಬರೆದಿದ್ದಾರೇನೋ ಎಂಬ ಅನುಮಾನ ಮೂಡುತ್ತದೆ. ಥರಹೇವಾರಿ ಫೈಟ್‌ಗಳಿದ್ದರೂ, ಅದರಲ್ಲಿ ಲಾಜಿಕ್ ಹುಡುಕುವಂತಿಲ್ಲ. ಯಾಕೆಂದರೆ, ಇಲ್ಲಿ ಲಾಜಿಕ್ ಇಲ್ಲದ ಸಾಕಷ್ಟು ಸೀನ್‌ಗಳಿವೆ. ಚಿತ್ರಕಥೆ ಬುಲೆಟ್‌ ಟ್ರೇನ್‌ನಂತೆ ಸ್ಪೀಡ್ ಹೋಗುತ್ತದೆ. ಅದು ಸಮಾಧಾನಕರ ಸಂಗತಿ. ದೇಶಭಕ್ತಿಯ ಸಿನಿಮಾವಾಗಿದ್ದರೂ, ದೇಶಭಕ್ತಿಯ ತೀವ್ರತೆಯನ್ನು ತೆರೆಮೇಲೆ ಕಟ್ಟಿಕೊಡುವಲ್ಲಿ ನಿರ್ದೇಶಕರು ವಿಫಲವಾಗಿದ್ದಾರೆ. ಸಿನಿಮಾದ ವೇಗಕ್ಕೆ ಸಮಪ್ರಮಾಣದಲ್ಲಿ ಸಾಥ್ ನೀಡಿದ್ದಾರೆ ಛಾಯಾಗ್ರಾಹಕ Satchith Paulose. ಸ್ಟಂಟ್‌ ಕೊರಿಯೋಗ್ರಾಫರ್ಸ್ ಹೆಚ್ಚಿನ ಅಂಕ ಸಲ್ಲಲೇಬೇಕು. ‘ಬೇಷರಮ್ ರಂಗ್..’ ಹಾಡು ಕೇಳುವುದಕ್ಕೂ ಮತ್ತು ನೋಡುವುದಕ್ಕೂ ಚೆನ್ನಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅರಸನ ಕೋಟೆಗೆ ಎಂಟ್ರಿ ಆದ ಅನುಷ್ಕಾ; ಮುಂದೆ ಅಖಿಲ ಗತಿ?

Fri Feb 24 , 2023
ಅರಸನ ಕೋಟೆಗೆ ಇದೀಗ ಅನುಷ್ಕಾ ಎಂಟ್ರಿ ಆಗಿದ್ದಾಳೆ. ತನ್ನ ತಾಯಿ ತಾನು ಅಂದುಕೊಂಡ ಹಾಗೆ ಕೆಲಸ ಮಾಡಲಿಲ್ಲ ಎನ್ನುವ ಕಾರಣಕ್ಕೆ ತನ್ನ ತಾಯಿಯನ್ನೇ ಕೊಂದು ಹಾಕಿ ಇದೀಗ ಸೇಡು ತೀರಿಸಿಕೊಳ್ಳಲು ಅಖೀಲಾಂಡೇಶ್ವರಿ ಮನೆಗೆ ಎಂಟ್ರಿ ನೀಡಿದ್ದಾಳೆ. ಜನನಿಯನ್ನು ನೋಡಿಕೊಳ್ಳುವ ಸಲುವಾಗಿ ಆಕೆ ಬರುತ್ತಾಳೆ.ಆಕೆಯೇ ಅನುಷ್ಕಾ ಎನ್ನುವ ಅನುಮಾನ ಸ್ವಲ್ಪ ಕೂಡ ಬಾರದ ಹಾಗೆ ನಡೆದುಕೊಳ್ಳುತ್ತಾಳೆ. ಇನ್ನು ಪಾರು ಅಖಿಲ ಫೋಟೋವನ್ನು ಗೋಡೆಗೆ ನೇತು ಹಾಕಿ ನೋಡುತ್ತಾ ಇರುವಾಗ ಗಣಿ ತನ್ನ […]

Advertisement

Wordpress Social Share Plugin powered by Ultimatelysocial