ಪೆಟ್ರೋಲ್ ಖಾಲಿಯಾದ ಕಾರಣಕ್ಕೆ ಬೈಕ್ ನಿಲ್ಲಿಸಿದ್ದೇ ಯುವಕನ ಪ್ರಾಣಕ್ಕೆ ಮುಳುವಾಯ್ತು..!

ಪೆಟ್ರೋಲ್ ಖಾಲಿಯಾದ ಕಾರಣಕ್ಕೆ ಬೈಕ್ ನಿಲ್ಲಿಸಿದ್ದೇ ಯುವಕನ ಪ್ರಾಣಕ್ಕೆ ಮುಳುವಾಯ್ತು..!

ಹೈದರಾಬಾದ್ : ಸಾವು ಯಾವ ರೀತಿ ಬರುತ್ತವೆ ಎನ್ನುವುದನ್ನೇ ಊಹಿಸಲು ಸಾಧ್ಯವಾಗದಂತಾಗಿದೆ. ಗಟ್ಟಿಮುಟ್ಟಾಗಿದ್ದವರು, ನಮ್ಮೊಡನೆ ಇದ್ದವರು ಏಕಾಏಕಿ ಇಹಲೋಕ ತ್ಯಜಿಸಿದ ಅದೆಷ್ಟೋ ಘಟನೆಗಳು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತವೆ.

ಜವರಾಯ ಯಾರನ್ನೂ ಯಾವ ರೀತಿಯಾಗಿ ಹುಡುಕಿಕೊಂಡು ಹೋಗುತ್ತಾನೆ ಎಂಬುವುದೇ ತಿಳಿಯದಾಗಿದೆ.

ಇಲ್ಲೊಂದು ಪ್ರಕರಣದಲ್ಲಿ ಯುವಕನೇ ಸಾವನ್ನು ಹುಡುಕಿಕೊಂಡು ಹೋದನೋ? ಅಥವಾ ಸಾವೇ ಆತನನ್ನು ಹುಡುಕಿಕೊಂಡು ಹೋಯಿತೇ? ತಿಳಿಯದಾಗಿದೆ.‌

ಯುವಕನೊಬ್ಬ ಬೈಕ್ ನಲ್ಲಿ ಪೆಟ್ರೋಲ್ ಖಾಲಿಯಾಗಿದೆ ಎಂಬ ಕಾರಣಕ್ಕೆ ಬೈಕ್ ನ್ನು ರಸ್ತೆ ಮಧ್ಯೆ ನಿಲ್ಲಿಸಿದ್ದಾನೆ. ಆದರೆ, ಈ ಸಂದರ್ಭದಲ್ಲಿಯೇ ಆ ಪ್ರದೇಶದಲ್ಲಿ ಎರಡು ಕೋಮಿನ ಮಧ್ಯೆ ಜಗಳ ಆರಂಭವಾಗಿತ್ತು.

ಈ ಯುವಕ ಬೈಕ್ ನಿಲ್ಲಿಸಿ ನಿಲ್ಲುತ್ತಿದ್ದಂತೆ ಒಂದು ಕೋಮಿನ ಜನ, ಈ ಯುವಕನೂ ವಿರೋಧಿ ಕೋಮಿನವಾಗಿರಬಹುದು ಎಂದು ಭಾವಿಸಿ, ಆತನನ್ನು ಅಟ್ಟಾಡಿಸಿಕೊಂಡು ಹೊಡೆಯಲು ಆರಂಭಿಸಿದ್ದಾರೆ.

ಏಕಾಏಕಿ ದಾಳಿಯಿಂದ ಕಂಗಾಲಾದ ಯುವಕ, ಅವರಿಂದ ತಪ್ಪಿಸಿಕೊಳ್ಳಲು ಹೋಗಿ ಅಲ್ಲಿಯೇ ಹತ್ತಿರವಿದ್ದ ಬಾವಿಗೆ ಬಿದ್ದಿದ್ದಾನೆ. ಭಯದಲ್ಲಿ ಬಾವಿ ಇರುವ ಕುರಿತೂ ಆತನಿಗೆ ತಿಳಿದಿಲ್ಲ. ಈಜಲು ಬಾರದಿರುವುದರಿಂದಾಗಿ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಈ ಘಟನೆ ತೆಲಂಗಾಣದ ಯಾದಾದ್ರಿ ಭುವನೇಶ್ವರ ಜಿಲ್ಲೆಯಲ್ಲಿನ ಗೂಡೂರು ಎಂಬಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಯುವಕನ ಮೃತ ದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಚ್ಚಲು ಮನೆಯಲ್ಲಿ ಮೇಲೆ ಹೆಡೆಬಿಚ್ಚಿ ಕುಳಿತ ನಾಗರಹಾವು | Snake | Speed News kannada |

Sun Jan 2 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial