ರಾಹುಲ್ ಗಾಂಧಿಯವರನ್ನು ‘ಪಪ್ಪು’ ಎಂದು ಬಿಂಬಿಸುತ್ತಿರುವುದು ದುರದೃಷ್ಟಕರ.

ನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ನಡೆಸುತ್ತಿರುವ ‘ಭಾರತ್ ಜೋಡೋ’ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಇದೀಗ ಮತ್ತೊಂದು ಮಹತ್ವದ ಹೇಳಿಕೆ ನೀಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ಅವರು, ರಾಹುಲ್ ಗಾಂಧಿ ಒಬ್ಬ ಬುದ್ಧಿವಂತ ವ್ಯಕ್ತಿಯಾಗಿದ್ದಾರೆ. ಅಲ್ಲದೆ ಅವರಿಗೆ ತಮ್ಮ ಆದ್ಯತೆಗಳೇನು ಹಾಗೂ ಸಾಮರ್ಥ್ಯವೇನು ಎಂಬುದರ ಅರಿವಿದೆ. ಆದರೆ ಅವರನ್ನು ‘ಪಪ್ಪು’ ಎಂಬಂತೆ ಬಿಂಬಿಸುತ್ತಿರುವುದು ದುರದೃಷ್ಟಕರ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.

ಅಲ್ಲದೆ ‘ಭಾರತ್ ಜೋಡೋ’ ಯಾತ್ರೆಯಲ್ಲಿ ತಾವು ಪಾಲ್ಗೊಂಡಿದ್ದನ್ನು ಬಲವಾಗಿ ಸಮರ್ಥಿಸಿಕೊಂಡಿರುವ ರಘುರಾಮ್ ರಾಜನ್, ನಾನು ಆ ಯಾತ್ರೆಯ ಆಶಯಗಳ ಪರವಾಗಿದ್ದೇನೆ. ಅಲ್ಲದೆ ರಾಹುಲ್ ಗಾಂಧಿ ಜೊತೆಗಿನ ಸಂಪರ್ಕದಿಂದ ಅವರ ಕುರಿತು ಅರಿತುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದ ನಿಯಂತ್ರಣ ಅಪರಾಧಿ ಗ್ಯಾಂಗ್ ನ ಬಳಿ ಇದೆ.

Thu Jan 19 , 2023
ನವದೆಹಲಿ – ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದ ನಿಯಂತ್ರಣ ಅಪರಾಧಿ ಗ್ಯಾಂಗ್ ನ ಬಳಿ ಇದೆ. ಅವರು ತಮ್ಮ ಗೂಂಡಾಗಳ ದಾಖಲೆಗಳ ಮೇಲೆ ‘ಇಮಿಗ್ರಷನ್’ ಸೀಲು ಹಾಕಲು ಬಿಡುವುದಿಲ್ಲ. ಆದ್ದರಿಂದ ‘ಪಾಕಿಸ್ತಾನದಲ್ಲಿ ಯಾರು ಬಂದಿದ್ದಾರೆ ಅಥವಾ ಯಾರು ಹೊರಗೆ ಹೋಗಿದ್ದಾರೆ’, ಇದರ ಮಾಹಿತಿ ತಿಳಿಯಲು ಸಾಧ್ಯವಾಗುವುದಿಲ್ಲ. ಇದರಿಂದ ಈ ಗ್ಯಾಂಗ್ ಬೇರೆ ದೇಶದಲ್ಲಿನ ಗೂಂಡಾಗಳನ್ನು ಅಥವಾ ಬೇರೆ ಯಾರನ್ನು ಕೂಡ ಪಾಕಿಸ್ತಾನಕ್ಕೆ ಕರೆಸುತ್ತದೆ. ಇಂತಹ ವ್ಯಕ್ತಿ ಪಾಕಿಸ್ತಾನಕ್ಕೆ ಬಂದ, ಈ […]

Advertisement

Wordpress Social Share Plugin powered by Ultimatelysocial