ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಜೋಗಿ ಪ್ರೇಮ್ ಸುದ್ದಿಗೋಷ್ಠಿ ನಡೆಸಿದರು.

ಬೆಂಗಳೂರಿನಲ್ಲಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಜೋಗಿ ಪ್ರೇಮ್ ಸುದ್ದಿಗೋಷ್ಠಿ ನಡೆಸಿದರು. ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಲ್ಟಿಪ್ಲೆಕ್ಸ್ ಗಳಲ್ಲಿಯೂ ಸ್ಯಾಂಡಲ್ವುಡ್ನ ಚಿತ್ರಗಳಿಗೆ ಅನ್ಯಾಯ ಆಗುತ್ತಿದೆ ಎಂದು ನಟ ಹಾಗೂ ನಿರ್ದೇಶಕ ಪ್ರೇಮ್ ತಿಳಿಸಿದರು.ಕನ್ನಡ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ಗಳಲ್ಲಿ ಹೆಚ್ಚು ಸೌಂಡ್ ಕೊಡುವುದಿಲ್ಲ ಎನ್ನುವ ಆರೋಪ ಇದೆ. ಇದರಿಂದ ಪ್ರೇಕ್ಷಕರಿಗೆ ಸಿನಿಮಾ ಅಷ್ಟು ಪ್ರಭಾವಕಾರಿ ಎನಿಸುವುದಿಲ್ಲ. ಕನ್ನಡ ಚಿತ್ರಗಳಿಗೆ ನಾನಾ ರೀತಿಯಲ್ಲಿ ಅನ್ಯಾಯ ಆಗುತ್ತಿದೆ ಎನ್ನುವ ಆರೋಪ ಮೊದಲಿನಿಂದಲೂ ಇದೆ. ಇದನ್ನು ಅನೇಕ ನಿರ್ದೇಶಕರು, ನಿರ್ಮಾಪಕರು ಹಾಗೂ ನಟರು ಹೇಳಿಕೊಂಡು ಬರುತ್ತಲೇ ಇದ್ದಾರೆ.ಪರಭಾಷೆಯ ಸಿನಿಮಾಗಳ ಅಬ್ಬರದ ನಡುವೆ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರ ಸಿಗುವುದಿಲ್ಲ ಎನ್ನುವುದು ದೊಡ್ಡ ಸಮಸ್ಯೆ ಎಂದು ಹೇಳಿದರು. ಮಲ್ಟಿಪ್ಲೆಕ್ಗಳಲ್ಲಿ ತೆಲುಗು, ತಮಿಳು, ಇಂಗ್ಲಿಷ್ ಸಿನಿಮಾಗಳಿಗೆ ಒಂದು ಸೌಂಡ್ ಅಂತ ಫಿಕ್ಸ್ ಮಾಡಿರ್ತಾರೆ. ಇಂಗ್ಲಿಷ್ ಸಿನಿಮಾಗೆ ಸೌಂಡ್ ಮಟ್ಟವನ್ನು 7 ಪಾಯಿಂಟ್ ನಲ್ಲಿ ಇಟ್ಟರೆ, ತೆಲುಗು ಚಿತ್ರಕ್ಕೆ 6 ಪಾಯಿಂಟ್ ಸೌಂಡ್ ಕೊಡ್ತಾರೆ. ಆದರೆ, ಕನ್ನಡದ ಸಿನಿಮಾಗಳಿಗೆ ಕೇವಲ 4 ಪಾಯಿಂಟ್ ಸೌಂಡ್ ಕೊಡ್ತಾರೆ. ಇದರಿಂದ ನಮಗೆ ತುಂಬಾನೇ ತೊಂದರೆ ಆಗುತ್ತದೆ. ಆಗ ಸೌಂಡ್ ಚೆನ್ನಾಗಿ ಕೇಳುವುದಿಲ್ಲ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶೀಘ್ರವೇ ಬ್ಯಾಂಕುಗಳಲ್ಲಿ 41,177 ಹುದ್ದೆಗಳ ನೇಮಕಾತಿ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ,

Tue Feb 8 , 2022
ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ದೇಶದ 12 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸುಮಾರು 41,177 ಹುದ್ದೆಗಳು ಖಾಲಿ ಇದ್ದು, ಈ ವರ್ಷವೇ ಈ ಹುದ್ದೆಗಳ ನೇಮಕ ನಡೆಯಲಿದೆ. ಬ್ಯಾಂಕುಗಳಲ್ಲಿ ಖಾಲಿ ಇರುವ 41,177 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (IBPS) ನಾನಾ ನೇಮಕಾತಿ ಪರೀಕ್ಷೆಗಳ ಸಂಭವನೀಯ ವೇಳಾಪಟ್ಟಿ ಪ್ರಕಟಿಸಿದೆ. ಐಬಿಪಿಎಸ್ 12 ರಾಷ್ಟ್ರೀಕೃತ ಬ್ಯಾಂಕುಗಳ ಪೈಕಿ 11 ಬ್ಯಾಂಕ್ ಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ.ಐಬಿಪಿಎಸ್ […]

Advertisement

Wordpress Social Share Plugin powered by Ultimatelysocial