ಸಾರ್ವಜನಿಕರು ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆಯಬಹುದು.
ರಾಜೇಶ್ ಅವರಿಗಿದ್ದ ಆರೋಗ್ಯ ಸಮಸ್ಯೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಜೇಶ್ ಅವರ ಅಳಿಯ ನಟ ಅರ್ಜುನ್ ಸರ್ಜಾ, ”ಕಳೆದ ಹತ್ತು ದಿನಗಳಿಂದಲೂ ಅವರು ಆಸ್ಪತ್ರೆಯಲ್ಲಿದ್ದರು. ಮೊದಲಿಗೆ ಅವರಿಗೆ ಪ್ರೋ ಕೋವಿಡ್ ಆಗಿತ್ತು. ಬಳಿಕ ಸಿಕೆಡಿ (ಕ್ರಾನಿಕಲ್ ಕಿಡ್ನಿ ಡಿಸೀಸ್) ಆಯ್ತು. ಬಹಳ ಸುಸ್ತು ಎಂದು ಇತ್ತೀಚೆಗೆ ಹೇಳುತ್ತಿದ್ದರು. ಆಸ್ಪತ್ರೆಗೆ ದಾಖಲಾದ ಬಳಿಕ ಇನ್ನಷ್ಟು ಸುಸ್ತಾಗಿದ್ದರು. ನಾವು ಬಹಳ ಪ್ರಯತ್ನ ಪಟ್ಟೆವು. ಆದರೆ ಉಳಿಸಿಕೊಳ್ಳಲು ಆಗಲಿಲ್ಲ. ಶನಿವಾರ ಬೆಳಗಿನ ಜಾವ 2:20 ಕ್ಕೆ ರಾಜೇಶ್ ಅವರು ಪ್ರಾಣತ್ಯಾಗ ಮಾಡಿದರು” ಎಂದು ಮಾಹಿತಿ ನೀಡಿದ್ದಾರೆ.
”ರಾಜೇಶ್ ಅವರು ಹಲವು ವರ್ಷಗಳಿಂದ ಸಿನಿಮಾರಂಗದಲ್ಲಿ ತೊಡಗಿಕೊಂಡಿದ್ದಾರೆ. ರಾಜೇಶ್ ಅವರು ಅಣ್ಣಾವ್ರ ಸಮಕಾಲೀನರು. ಅವರ ಅಗಲಿಕೆಯಿಂದ ಮನಸ್ಸಿಗೆ ಬಹಳ ವ್ಯಥೆಯಾಗಿದೆ” ಎಂದು ರಾಜೇಶ್ ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada