ಮನೆಯಲ್ಲಿ ಒಂಟಿಯಾಗಿದ್ದ ಹುಡುಗಿ ಅಪಹರಿಸಿ ಮೂವರಿಂದ ಗ್ಯಾಂಗ್ ರೇಪ್,

 

 

 

ಚಾರ್ಖಿ ದಾದ್ರಿ: ಮೂವರು ಯುವಕರು ತನ್ನ ಮೇಲೆ ಅತ್ಯಾಚಾರ ಎಸಗಿದ ನಂತರ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪೊಲೀಸರ ಪ್ರಕಾರ, ಬಾಲಕಿ ಪರಿಶಿಷ್ಟ ಜಾತಿಗೆ ಸೇರಿದವಳು ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗೆ ಓದುತ್ತಿದ್ದಳು.

ಶುಕ್ರವಾರ, ಹುಡುಗಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿಗಳು ನುಗ್ಗಿ, ಅವಳನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದ್ದು, ಗಂಟೆಗಳ ನಂತರ ಆಕೆಯ ಮನೆಯ ಸೀಲಿಂಗ್‌ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬದ್ರಾದ ಸ್ಟೇಷನ್ ರೆಸಿಡೆನ್ಸ್ ಅಧಿಕಾರಿ ಇನ್ಸ್‌ ಪೆಕ್ಟರ್ ಚಂದರ್ ಶೇಖರ್ ಹೇಳಿದ್ದಾರೆ.

ಎಫ್‌ಐಆರ್‌ ನಲ್ಲಿ ಮೂವರು ಆರೋಪಿಗಳನ್ನು ಹೆಸರಿಸಲಾಗಿದೆ. ಪ್ರಮುಖ ಆರೋಪಿಯನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಶೇಖರ್ ತಿಳಿಸಿದ್ದಾರೆ.

ಬಾಲಕಿ ಮತ್ತು ಮೂವರು ಶಂಕಿತರು ಒಂದೇ ಪ್ರದೇಶದವರು. ಪ್ರಮುಖ ಶಂಕಿತ ಆಕೆಯ ನೆರೆಹೊರೆಯವನಾಗಿದ್ದಾನೆ ಎಂದು ಬದ್ರಾದ ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿಎಸ್‌ಪಿ) ದೇಶ್ ರಾಜ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊಟ್ಟ ಮಾತಂತೆ ಆಂಧ್ರ ಪ್ರದೇಶದಲ್ಲಿ13 ಹೊಸ ಜಿಲ್ಲೆ ರಚಿಸಿ ಜಗನ್ ಆದೇಶ!

Sun Apr 3 , 2022
ಹೈದರಾಬಾದ್, ಏ. 03: 2019ರ ವಿಧಾಸಭಾ ಚುನಾವಣೆ ವೇಳೆ ಆಂಧ್ರ ಜನತೆಗೆ ಕೊಟ್ಟಿದ್ದ ಆಶ್ವಾಸನೆಯನ್ನು ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಈಡೇರಿಸಿದ್ದಾರೆ. ಆಂಧ್ರ ಪ್ರದೇಶದಲ್ಲಿ ಹೆಚ್ಚವರಿ 13 ಹೊಸ ಜಿಲ್ಲೆಗಳ ಏ. 04 ರಿಂದ ಅಸ್ವಿತ್ವಕ್ಕೆ ಬರುವಂತೆ ಜಗನ್ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ತೆಲಂಗಾಣ ಬೇರ್ಪಡೆಯಾದ ಬಳಿಕ ಹದಿಮೂರು ಜಿಲ್ಲೆಗಳಿಗೆ ಸೀಮಿತವಾಗಿದ್ದ ಆಂಧ್ರ ಪ್ರದೇಶದಲ್ಲಿ ಇದೀಗ ಪುನಃ 13 ಹೆಚ್ಚುವರಿ ಜಿಲ್ಲೆಗಳನ್ನಾಗಿ ರಚನೆ ಮಾಡಲಾಗಿದೆ. ಏ. 04 […]

Advertisement

Wordpress Social Share Plugin powered by Ultimatelysocial