9ನೇ ತರಗತಿ ವಿದ್ಯಾರ್ಥಿನಿಯನ್ನ ನಾಲ್ಕು ಜನ ದುರ್ಷ್ಕಮಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ!

 

9ನೇ ತರಗತಿ ವಿದ್ಯಾರ್ಥಿನಿಯನ್ನ ನಾಲ್ಕು ಜನ ದುರ್ಷ್ಕಮಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಪೈಶಾಚಿಕ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ತಾಲ್ಲೂಕಿನಲ್ಲಿ ನಡೆದಿದೆ.ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಆನಂದ ಕುಮಾರ್ (25), ಕಾಂತರಾಜ್ (23), ಪ್ರವೀಣ್ (21), ವೇಣು (19) ಬಂಧಿತ ಆರೋಪಿಗಳು.9 ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಶುಕ್ರವಾರ ಸಂಜೆ ಅಪಹರಿಸಿದ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.ನಾಲ್ವರ ವಿರುದ್ಧ ರೇಪ್ ಹಾಗೂ ಪೋಸ್ಕೋ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಎಸ್ಪಿ ದೇವರಾಜ್ ಮಾಹಿತಿ ನೀಡಿದ್ದಾರೆ.ಅತ್ಯಾಚಾರಕ್ಕೆ ಒಳಗಾದ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಪೋಲಿಸ್ ಠಾಣೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ದೆಹಲಿ-ವಾರಣಾಸಿ ಬುಲೆಟ್ ಟ್ರೈನ್ ಪ್ರತಿದಿನ 18 ಟ್ರಿಪ್‌ಗಳನ್ನು ಮಾಡಲಿದೆ

Sat Feb 19 , 2022
  ದೆಹಲಿ-ವಾರಣಾಸಿ ಹೈಸ್ಪೀಡ್ ರೈಲು ಕಾರಿಡಾರ್ ಮುಂಬೈ-ಅಹಮದಾಬಾದ್ ಕಾರಿಡಾರ್ ನಂತರ ಭಾರತದ ಎರಡನೇ ಬುಲೆಟ್ ರೈಲು ಯೋಜನೆಯಾಗಿದೆ. 958-ಕಿಲೋಮೀಟರ್ ಹೈಸ್ಪೀಡ್ ರೈಲು ಕಾರಿಡಾರ್ ವಾರಣಾಸಿ ಮತ್ತು ದೆಹಲಿ ನಡುವಿನ 12 ನಿಲ್ದಾಣಗಳ ಮೂಲಕ ಚಲಿಸುತ್ತದೆ, 123-ಕಿಲೋಮೀಟರ್ ಸ್ಪರ್ ಲಕ್ನೋ ಮತ್ತು ಅಯೋಧ್ಯೆಯನ್ನು ಸಂಪರ್ಕಿಸುತ್ತದೆ. ಈ ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ಸಮೀಕ್ಷೆಯ ಹೊರತಾಗಿ, ಯೋಜನೆಗಾಗಿ ಮಾರ್ಗದ ಕಾರ್ಯಸಾಧ್ಯತೆಯ ಪರೀಕ್ಷೆಯನ್ನು ಸಹ ಬಹುತೇಕ ಮಾಡಲಾಗಿದೆ. ದೆಹಲಿ ಮತ್ತು ವಾರಣಾಸಿ ನಡುವೆ ಬುಲೆಟ್ […]

Advertisement

Wordpress Social Share Plugin powered by Ultimatelysocial