ಕುಖ್ಯಾತ ರೌಡಿಶೀಟರ್ ಆರ್ಮುಗಂ ಜೈಲು ಪಾಲು.!

ಸ್ನೇಹಿತನ ಕೊಲೆ ಪ್ರಕರಣದಲ್ಲಿ ಕುಖ್ಯಾತ ರೌಡಿಶೀಟರ್ ಆರ್ಮುಗಂ ಮತ್ತೆ ಕೊಲೆ ಮಾಡಿ ಜೈಲು ಸೇರಿದ್ದಾನೆ. ತನ್ನ 2,500 ರೂಪಾಯಿ ಕದ್ದ ಶಂಕೆಯಿಂದ ಸ್ನೇಹಿತ ಭೀಮಪ್ಪ ಹುಸೇನ್ ನನ್ನು ಆರ್ಮುಗಂ ಕೊಲೆ ಮಾಡಿದ್ದಾನೆ. ಈ ಪ್ರಕರಣ ಸಂಬಂಧ ಬೆಂಗಳೂರಿನ ತಲಘಟ್ಟಪುರ ಪೊಲೀಸರು ಆರ್ಮುಗಂನನ್ನು ಬಂಧಿಸಿದ್ದಾರೆ.ಇವರೆಗೂ 2-3 ಕೊಲೆ ಕೇಸ್ ನಲ್ಲಿ ಜೈಲಿಗೆ ಹೋಗಿರುವ ಆರ್ಮುಗಂ ಇದೀಗ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ.ತನ್ನ ಸ್ನೇಹಿತ ಭೀಮಪ್ಪ ಹುಸೇನ್ ಜೊತೆ ಪಾರ್ಟಿ ಮಾಡಿದ್ದ ಆರ್ಮುಗಂನ 2,500 ಮಿಸ್ಸಿಂಗ್ ಆಗಿತ್ತು. ಆಗ ತನ್ನ ಸ್ನೇಹಿತ ಭೀಮಪ್ಪನೇ ಕದ್ದಿರಬೇಕೆಂಬ ಅನುಮಾನ ವ್ಯಕ್ತವಾಗಿ ಮಾತಿನ ಚಕಮಕಿ ನಡೆದಿದ್ದೆ. ಮಾತಿಗೆ ಮಾತು ಬೆಳೆದು ಆರ್ಮುಗಂ ಸ್ನೇಹಿತನ ತಲೆ ಮೇಲೆ ಹಾಲೋಬ್ಲಾಕ್ ಇಟ್ಟಿಗೆ ಹಾಕಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ:“ಕೋವಿಡ್ ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ

Please follow and like us:

Leave a Reply

Your email address will not be published. Required fields are marked *

Next Post

ಅಮ್ರೋಹಾ ನಿವಾಸಿ ಶಬ್ನಮ್ ಗೆ ಮರಣದಂಡನೆ

Wed Feb 17 , 2021
ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿ ಮಹಿಳಾ ಕೈದಿಯನ್ನು ಗಲ್ಲಿಗೇರಿಸಲಾಗ್ತಿದೆ. ಮಥುರಾದ ಅಮ್ರೋಹಾ ನಿವಾಸಿ ಶಬ್ನಮ್ ಗೆ ಮರಣದಂಡನೆ ಶಿಕ್ಷೆಯಾಗ್ತಿದೆ. ಗಲ್ಲಿಗೇರಿಸುವ ತಯಾರಿ ಶುರುವಾಗಿದೆ.ನಿರ್ಭಯಾ ದೋಷಿಗಳನ್ನು ಗಲ್ಲಿಗೇರಿಸಿದ್ದ ಪವನ್ ಜಲ್ಲಾಡ್, ಈಗಾಗಲೇ ಎರಡು ಬಾರಿ ನೇಣು ಬಿಗಿಯುವ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಗಲ್ಲಿಗೇರಿಸುವ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಏಪ್ರಿಲ್ 2008ರಲ್ಲಿ ಶಬ್ನಮ್ ತನ್ನ ಪ್ರೇಮಿ ಜೊತೆ ಸೇರಿ ಕುಟುಂಬಸ್ಥರ ಹತ್ಯೆ ಮಾಡಿದ್ದಳು. ಕುಟುಂಬಸ್ಥರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಳು. ಶಬ್ನಮ್ […]

Advertisement

Wordpress Social Share Plugin powered by Ultimatelysocial