ಎಚ್. ಜಿ. ಜಯಲಕ್ಷ್ಮೀ ಅವರು ವೈದ್ಯೆ.

 

ಡಾ. ಎಚ್. ಜಿ. ಜಯಲಕ್ಷ್ಮೀ ಅವರು ವೈದ್ಯರಾಗಿ, ಪ್ರಾಧ್ಯಾಪಕರಾಗಿ, ಬರಹಗಾರ್ತಿಯಾಗಿ, ಸಂಗೀತಾಸಕ್ತರಾಗಿ, ಸಾಮಾಜಿಕ ಕಳಕಳಿಯುಳ್ಳ ಸೇವಾಕರ್ತರಾಗಿ ತಮ್ಮ ಪರಿಶ್ರಮ ನೀಡುತ್ತ ಬಂದಿದ್ದಾರೆ.
ಫೆಬ್ರುವರಿ 24 ಜಯಲಕ್ಷ್ಮೀ ಅವರ ಜನ್ಮದಿನ. ಜಯಲಕ್ಷ್ಮೀ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದಿಕ್ ಮೆಡಿಸಿನ್ ಅಂಡ್ ರಿಸರ್ಚ್ ಸಂಸ್ಥೆಯಲ್ಲಿ ಪ್ರಾಧ್ಯಾಪನ ನಡೆಸಿದವರು. ಸಂಗೀತದಲ್ಲೂ ಪರಿಶ್ರಮವಿರುವ ಇವರು ಸುಶ್ರಾವ್ಯವಾಗಿ ಹಾಡುತ್ತಾರೆ.ಜಯಲಕ್ಷ್ಮೀ ಅವರು ಸಾಮಾಜಿಕ ಸಮಾನತೆಯ ಹಿತಚಿಂತನೆ ಮತ್ತು ಆರೋಗ್ಯಕರ ಸಮಾಜದ ಬೆಳವಣಿಗೆಗಳಿಗೆ ಪೂರಕವಾದ ಬರಹ, ಚಳವಳಿ, ಸಮಾಜಸೇವಾ ಕಾರ್ಯಗಳು ಮತ್ತು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ಬರೆದಿದ್ದಾರೆ. ‘ಸಾಮಾಜಿಕ ಪಿಡಗುಗಳು ವೈಜ್ಞಾನಿಕ ಪರಿಹಾರ’ ಅವರ ಪ್ರಕಟಿತ ಕೃತಿಗಳಲ್ಲಿದೆ. ಅವರು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (AIMSS)ಯ ಪದಾಧಿಕಾರಿಗಳಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ವಿರುದ್ಧ ಹರಿಹಾಯ್ದ ಸಂಸದ ಶ್ರೀನಿವಾಸ್ ಪ್ರಸಾದ್.

Sun Feb 26 , 2023
ಏನ್ ದನಾ ಕಾಯಕ್ಕೆ ಹೋಗಿದ್ದಾನಾ ಇಲ್ಲಾ ಎಮ್ಮೆ ಮೇಯ್ಸಕ್ಕೆ ಹೋಗಿದ್ದಾನ ಪತ್ತೆನೇ ಇಲ್ವಲ್ಲ ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ವಿರುದ್ಧ ಹರಿಹಾಯ್ದ ಸಂಸದ ಶ್ರೀನಿವಾಸ್ ಪ್ರಸಾದನಂಜನಗೂಡಿನ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಅವರು ಮಾತನಾಡುತ್ತಾ ಕಾಂಗ್ರೆಸ್ ನಾಯಕರನ್ನು ಕುಟುಕಿದರು ಉಪಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿ ಯಾರು ಅಭ್ಯರ್ಥಿ ಇಲ್ಲದೆ ಜೆಡಿಎಸ್ ನಲ್ಲಿದ್ದ ಕೇಶವಮೂರ್ತಿಯನ್ನು ದೊಡ್ಡ ಲೀಡರ್ ಎಂದು ಕರೆತಂದಿದ್ದರು ಈಗ ಅವನೆಲ್ಲಿ ಎಂದು ವ್ಯಂಗ್ಯವಾಡಿದರು.ಈಗ ಅವನ ಸ್ಥಾನಕ್ಕೆ ಮಹದೇವಪ್ಪ ಮತ್ತು ದ್ರುವ […]

Advertisement

Wordpress Social Share Plugin powered by Ultimatelysocial