ರೈತರ ಬಗ್ಗೆ ಪದ ಕಟ್ಟಿದ ಮಹಾಗುರುಗಳು.

ಅಭಿಮಾನಿಗಳಿಗೆ ಮನರಂಜನೆ ನಿಡೋದ್ರಲ್ಲಿ ಸದಾ ಮುಂದೆ ಇರುತ್ತೆ. 2 ವಾರದ ಹಿಂದೆ ವಾರದಿಂದ ಜೀ ಕನ್ನಡದಲ್ಲಿ ‘ಸರಿಗಮಪ ಲಿಟಲ್ ಚಾಂಪ್ಸ್  ಸೀಸನ್ -19’ ಶುರುವಾಗಿದೆ.
18 ಸರಿಗಮಪ ಲಿಟಲ್ ಚಾಂಪ್ಸ್ಸೀಸನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ಜೀ ಕನ್ನಡ ವಾಹಿನಿ19ನೇ ಸೀಸನ್ ನಡೆಸುತ್ತಿದೆ. 18 ಸೀಸನ್‍ಗಳಲ್ಲಿ ಅದೇಷ್ಟೋ ಪುಟ್ಟ ಪುಟ್ಟ ಹಾಡುಗಾರರು ಇಲ್ಲಿ ಬಂದು ಕಲಿತು, ಯಶಸ್ವಿಯಾಗಿದ್ದಾರೆ. ಎಷ್ಟೋ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಬಾರಿ ಸಹ ಎಲ್ಲ ಮಕ್ಕಳು ಅದ್ಭುತವಾಗಿ ಹಾಡುತ್ತಿವೆ. ಈ ವಾರದ ಕಾರ್ಯಕ್ರಮದಲ್ಲಿ ಸಂಕ್ರಾಂತಿಗಾಗಿ ಜನಪದ ರೌಂಡ್ ಇತ್ತು. ಮಹಾಗುರುಗಳು ರೈತರಿಗೆ ಹಾಡು (Snig) ಬರೆದಿದ್ದಾರೆ. ಅದನ್ನು ವಿಜಯ್ ಪ್ರಕಾಶ್ ಅವರು ಹಾಡಿದ್ದಾರೆ.

ಜಾನಪದ ಸಂಕ್ರಾಂತಿ
ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 ನಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜಾನಪರ ಸಂಕ್ರಾಂತಿ ರೌಂಡ್ ಮಾಡಲಾಗ್ತಿದೆ. ಎಲ್ಲಾ ಮಕ್ಕಳು ಜಾನಪದ ಹಾಡುಗಳನ್ನು ಹೇಳಬೇಕು. ಕೆಲ ಮಕ್ಕಳು ತಮ್ಮ ಧ್ವನಿಯ ಮೂಲಕ ಅದ್ಭುತವಾಗಿ ಜಾನಪದ ಹಾಡನ್ನು ಹೇಳಿದ್ದಾರೆ. ಎಲ್ಲರೂ ಕೇಳಿ ಎಂಜಾಯ್ ಮಾಡಿದ್ದಾರೆ.

ರೈತರ ಬಗ್ಗೆ ಪದ ಕಟ್ಟಿದ ಮಹಾಗುರುಗಳು
ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 ರಲ್ಲಿ ಹಂಸಲೇಖ ಸರ್ ಮಹಾಗುರುಗಳಾಗಿ ತೀರ್ಪು ನೀಡುತ್ತಾರೆ. ವಿಜಯ್ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಜಡ್ಜ್ ಗಳಾಗಿದ್ದಾರೆ. ವಿಜಯ್ ಪ್ರಕಾಶ್ ರೈತರ ಬಗ್ಗೆ ನಾಲ್ಕು ಸಾಲು ಕೊಡಿ ಎಂದು ಕೇಳ್ತಾರೆ. ಅದಕ್ಕೆ ಹಂಸಲೇಖಾ ಸರ್ ಈ ರೀತಿ ಹೇಳಿದ್ದಾರೆ. ರೈತರ ಹಾಡು ವಿಜಯ್ ಪ್ರಕಾಶ್ ಧ್ವನಿಯಲ್ಲಿ
‘ಒಲವ ಬಿತ್ತಿ, ಒಳಿತು ಬೆಳೆ, ಕಳೆಯ ತೆಗೆ ಸತ್ಯ ತಿಳಿ, ನಾನು ರೈತ, ನಾನು ರೈತ ಎಂದಿದ್ದಾರೆ. ಅದನ್ನು ಮ್ಯೂಸಿಕ್ ಸಮೇತ ವಿಜಯ್ ಪ್ರಕಾಶ್ ಅವರು ಹಾಡು ಹೇಳಿದ್ದಾರೆ. ಎಲ್ಲರೂ ವಿಜಯ್ ಪ್ರಕಾಶ್ ಹಾಡಿಗೆ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 ರೈತರಿಗೆ ಗೌರವ ಸಲ್ಲಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೀಗೊಂದು ವಿಚಿತ್ರ ಮದುವೆ.

Sun Jan 15 , 2023
ಕೆಲವರು ವಿಚಿತ್ರ ರೀತಿಯಲ್ಲಿ ಹೆಸರು ಮಾಡುತ್ತಾರೆ. ಹಿಂದೊಮ್ಮೆ ತನ್ನನ್ನು ತಾನೇ ಮದುವೆಯಾಗಿ ಯುವತಿಯೊಬ್ಬಳು ಸುದ್ದಿ ಮಾಡಿದ್ದರೆ, ಪ್ರಾಣಿಗಳನ್ನು ಮದುವೆಯಾಗಿ ಸುದ್ದಿ ಮಾಡಿದವರೂ ಇದ್ದಾರೆ. ಇದೀಗ ಮಹಿಳೆ ತನ್ನ ತುಪ್ಪಳದ ಹಾಸಿಗೆಯನ್ನೇ ಮದುವೆಯಾಗಿದ್ದಾಳೆ ! 49 ವರ್ಷದ ಪಾಸ್ಕಲ್ ಸೆಲ್ಲಿಕ್ ತನ್ನ ಹಾಸಿಗೆಯನ್ನು ಮದುವೆಯಾಗಲು ಅದ್ಧೂರಿ ಸಮಾರಂಭವನ್ನು ಆಯೋಜಿಸಿದ್ದಳು. ಮದುವೆಯನ್ನು ಆಚರಿಸಲು ಅವಳು ಮದುವೆಯ ಯೋಜಕನನ್ನು ಸಹ ನೇಮಿಸಿಕೊಂಡಿದ್ದರು. ಅತಿಥಿಗಳಿಗೂ ಆಹ್ವಾನ ನೀಡಿದ್ದಳು. ತನ್ನ ನಿರ್ಧಾರದ ಬಗ್ಗೆ ಮಾತನಾಡಿರುವ ಪಾಸ್ಕಲ್​, ನನಗೆ […]

Advertisement

Wordpress Social Share Plugin powered by Ultimatelysocial