ಸಲ್ಮಾನ್ ಖಾನ್ ತಂದೆ ಸಲೀಂಗೆ ಜೀವ ಬೆದರಿಕೆ: ಎಫ್‌ಐಆರ್ ದಾಖಲು

ಸಲ್ಮಾನ್ ಖಾನ್ ಹಾಗೂ ಅವರ ತಂದೆ ಖ್ಯಾತ ಚಿತ್ರಕತೆ ರಚನೆಕಾರ ಸಲೀಂ ಅವರಿಗೆ ಜೀವ ಬೆದರಿಕೆ ಪತ್ರ ಬರೆಯಲಾಗಿದ್ದು, ಈ ಸಂಬಂಧ ಮುಂಬೈನಲ್ಲಿ ದೂರು ದಾಖಲಾಗಿದೆ.

ಸಲೀಂ ಖಾನ್ ಹಾಗೂ ಸಲ್ಮಾನ್ ಖಾನ್ ಅನ್ನು ಕೊಲ್ಲುತ್ತೇವೆಂದು ಬರೆಯಲಾದ ಪತ್ರ ಭಾನುವಾರ ದೊರಕಿದೆ.

‘ಗ್ಯಾಂಗ್’ ಒಂದು ಈ ಕೃತ್ಯ ಎಸಗುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸಲ್ಮಾನ್ ಖಾನ್‌ ತಂದೆ ಸಲೀಂ ಖಾನ್‌ಗೆ ಈ ಪತ್ರ ಬ್ಯಾಂಡ್ರಾ ಸ್ಟಾಂಡ್‌ ಬಳಿಕ ಪಾರ್ಕ್‌ನಲ್ಲಿ ದೊರಕಿದೆ. ಸಲೀಂ ಖಾನ್, ತಾವು ಪ್ರತಿದಿನವೂ ಬ್ಯಾಂಡ್ರಾ ಸ್ಟ್ಯಾಂಡ್ ಬಳಿ ಜಾಗಿಂಗ್ ಮಾಡಿ ಒಂದು ಕಲ್ಲು ಬೇಂಚಿನ ಬಳಿ ಕೂರುತ್ತಾರೆ. ಭಾನುವಾರ ಜಾಗಿಂಗ್ ಮುಗಿಸಿ ಅದೇ ಕಲ್ಲು ಬೇಂಚಿನ ಮೇಲೆ ಕೂತಾದ ಪಕ್ಕದಲ್ಲಿಯೇ ಇದ್ದ ಈ ಪತ್ರ ಸಿಕ್ಕಿದೆ. ಪತ್ರದ ಮೇಲೆ ಸಲ್ಮಾನ್ ಖಾನ್ ಎಂದು ಬರೆದಿದ್ದ ಕಾರಣ ಸಲೀಂ ಖಾನ್ ಆ ಪತ್ರವನ್ನು ತೆಗೆದು ಓದಿದ್ದಾರೆ.

ಪತ್ರದಲ್ಲಿ ಹೆಸರು ನಮೂದಿಸದ ‘ಗ್ಯಾಂಗ್’ ಒಂದು ಸಲ್ಮಾನ್ ಖಾನ್ ಹಾಗೂ ಅವರ ತಂದೆ ಸಲೀಂ ಖಾನ್ ಅನ್ನು ಕೊಲ್ಲವುದಾಗಿ ಹೇಳಿದೆ. ಪೊಲೀಸರು ಐಪಿಸಿ ಸೆಕ್ಷನ್ 506 ಅಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.

ಸಲೀಮ್‌ ಖಾನ್‌ರರ ದಿನಚರಿಯನ್ನು ಗಮನಿಸಿಯೇ ಈ ಗುಂಪು ಬೆದರಿಕೆ ಹಾಕಿರುವ ಕಾರಣ ಈ ಬೆದರಿಕೆ ಪತ್ರವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ಈ ಹಿಂದೆಯೂ ಹಲವು ಬಾರಿ ಸಲ್ಮಾನ್ ಖಾನ್‌ಗೆ ಬೆದರಿಕೆ ಕರೆಗಳು, ಪತ್ರಗಳು ಬಂದಿವೆ. 2018 ರಲ್ಲಿಯೂ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕಲಾಗಿತ್ತು. 1998 ರಲ್ಲಿ ಲಾರೆನ್ಸ್ ಬಿಷ್ಣೋಯಿ ಎಂಬಾತನೂ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದ. ಕೃಷ್ಣಮೃಗ ಭೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬೆದರಿಕೆ ಹಾಕಲಾಗಿತ್ತು. ಸಲ್ಮಾನ್ ಖಾನ್ ಕೃಷ್ಣ ಮೃಗವನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ ಸಲ್ಮಾನ್ ಖಾನ್ ಅನ್ನು ಕೊಲ್ಲುವುದಾಗಿ ಲಾರೆನ್ಸ್ ಬಿಷ್ಣೋಯಿ ಎಂಬಾತ ಬೆದರಿಕೆ ಹಾಕಿದ್ದ.

ಕೆಲವು ದಿನಗಳ ಹಿಂದೆಯಷ್ಟೆ ಪಂಜಾಬ್ ಗಾಯಕ ಸಿಧು ಮೂಸೆಯ ಭೀಕರ ಹತ್ಯೆ ನಡೆದಿದೆ. ಗ್ಯಾಂಗ್ ಒಂದು ಸಿಧು ಮೂಸೆಯನ್ನು ಅಡ್ಡಗಟ್ಟಿ ಮಷಿನ್ ಗನ್ ಬಳಸಿ ಗುಂಡಿನ ಮಳೆ ಗರೆದು ಸಿಧು ಅವರನ್ನು ಹತ್ಯೆ ಮಾಡಿತ್ತು. ಈ ಘಟನೆ ನಂತರ ಸೆಲೆಬ್ರಿಟಿಗಳ ಭಧ್ರತೆ ಹೆಚ್ಚಿಸಲಾಗಿದೆ.

ಇದೀಗ ಸಲ್ಮಾನ್ ಖಾನ್‌ಗೂ ಜೀವ ಬೆದರಿಕೆ ಬಂದಿರುವುದು ಇನ್ನಷ್ಟು ಆತಂಕ ತಂದಿದ್ದು, ಪೊಲೀಸರು ಸಲ್ಮಾನ್ ಖಾನ್ ಹಾಗೂ ಸಲೀಂ ಖಾನ್‌ರಿಗೆ ಭದ್ರತೆ ಹೆಚ್ಚು ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾಕ್ಕೆ ಶಿವಣ್ಣನ ಸಿನಿಮಾ ಹೆಸರು!

Mon Jun 6 , 2022
ಕೇವಲ ಮೂರು ಸಿನಿಮಾಗಳಿಂದಲೇ ಪ್ರಶಾಂತ್ ನೀಲ್ ದೊಡ್ಡ ಮಟ್ಟದ ಹೆಸರು, ಖ್ಯಾತಿ ಗಳಿಸಿಕೊಂಡಿದ್ದಾರೆ. ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಪ್ರಶಾಂತ್ ನೀಲ್ ಈಗ ತೆಲುಗು ಸಿನಿಮಾಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ‘ಕೆಜಿಎಫ್ 2’ ಸಿನಿಮಾ ಮುಗಿದ ಕೂಡಲೇ ಪ್ರಭಾಸ್ ಜೊತೆ ‘ಸಲಾರ್’ ಚಿತ್ರೀಕರಣ ಪ್ರಾರಂಭ ಮಾಡಿರುವ ಪ್ರಶಾಂತ್ ನೀಲ್, ಸಿನಿಮಾದ ಚಿತ್ರೀಕರಣವನ್ನು ಸುಮಾರು 45% ಮುಗಿಸಿದ್ದಾರೆ. ‘ಸಲಾರ್’ ಸಿನಿಮಾ ಅರ್ಧ ಸಹ ಮುಗಿದಿಲ್ಲ ಅಷ್ಟರಲ್ಲೇ ತೆಲುಗಿನ ಮತ್ತೊಂದು ಸಿನಿಮಾ […]

Advertisement

Wordpress Social Share Plugin powered by Ultimatelysocial