ಯಾದಗಿರಿಯಲ್ಲಿ ಸತ್ತವರ ಹೆಸರಿನಲ್ಲಿ ವ್ಯಾಕ್ಸಿನ್ ಮತ್ತು ನೆಗೆಟಿವ್ ರಿಪೋರ್ಟ್ ಪ್ರಕರಣ ದಾಖಲಾಗಿದ್ದು,ಎಡವಟ್ಟಿನ ಬಗ್ಗೆ ಸಿಬ್ಬಂದಿಗಳ ಮೇಲೆ ಹಾಕಿದ ಡಿಹೆಚ್ಓ ಇಂದುಮತಿ ಕಾಮಶೆಟ್ಟಿ,ಕೆಲ ಹೊಸ ನೇಮಕಾತಿಯಾದವರು ಯಡವಟ್ಟು ಮಾಡಿದ್ದಾರೆ ಎಂದು ಯಾದಗಿರಿ ಡಿಹೆಚ್ಓ ಡಾ.ಇಂದುಮತಿ ಕಾಮಶೆಟ್ಟಿ ಹೇಳಿಕೆ ನೀಡಿದ್ದಾರೆ,SRF ID ತೆಗೆದುಕೊಂಡು ಇದರ ಬಗ್ಗೆ ತಿಳಿದುಕೊಳ್ಳಲಾಗುವುದು ಯಾವ ಲಾಗಿನ್ ನಿಂದ ಎಂಟ್ರಿ ಆಗಿದೆ ಅಂತ ನೋಡಿಕೊಳ್ತೀವಿ,ಕೆಲ ಹೊಸ ಸಿಬ್ಬಂದಿಯವರು ಈ ತರಹ ಮಾಡಿರ್ತಾರೆ,ಇಂತಹ ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ಕಂಡು ಬಂದಿರಲಿಲ್ಲ,ಸುಮಾರು ದಿನಗಳ ನಂತರ ಇಂತಹ ಮಿಸ್ಟೇಕ್ ಕಾಣಿಸ್ತಾ ಇದೆ ಎಲ್ಲಾ ಸಿಬ್ಬಂದಿಗಳು ಸಹ ಕರೆಕ್ಟ್ ತರಭೇತಿ ಪಡೆದುಕೊಂಡವರಿದ್ದಾರೆ.ಒಂದೊಂದು ಸಲ ಔಟ್ ಸೋರ್ಸ್ ನಿಂದ ಬಂದವರು ಈ ತರ ಮಾಡಿರ್ತಾರೆ,ಈ ಮಿಸ್ಟೇಕ್ ಬಗ್ಗೆ ನಾನು ಮೊದಲು ಚೆಕ್ ಮಾಡಿಕೊಳ್ತೀನಿ ,ಉದ್ದೇಶಪೂರ್ವಕವಾಗಿ ತಪ್ಪು ಮಾಡಿದ್ರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಯಾದಗಿರಿ ಡಿಹೆಚ್ಓ ಡಾ.ಇಂದುಮತಿ ಕಾಮಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada