ಜನವರಿ 2022: ಝೀಝೆಸ್ಟ್ಇದೇ ಮೊದಲ ಬಾರಿಗೆ ಹೊಸ ರೀತಿಯ ‘ಸಫಾರಿಇಂಡಿಯಾ’ ಶೋ ಪ್ರಾರಂಭಿಸಿದೆ. ನಟ ರಣವಿಜಯ ಸಿಂಘಾ ಅವರು ಭಾರತದ ಕೆಲವು ಪ್ರಮುಖ ರಾಷ್ಟ್ರೀಯ ಉದ್ಯಾನವನಗಳನ್ನು ಸುತ್ತಲಿದ್ದು, ಸಾಹಸ, ಮನರಂಜನೆ ಮತ್ತು ರೋಮಾಂಚಕ ಪ್ರಯಾಣದ ಅನುಭವನ್ನು ನೀಡುವ ಕಾರ್ಯಕ್ರಮವಾಗಿದೆ.
ಭಾರತದ ಶ್ರೀಮಂತ ಜೀವವೈವಿಧ್ಯ, ಉದ್ಯಾನವನಗಳ ಹಿಂದೆ ಇರುವ ಜನರನ್ನು ಭೇಟಿ ಮಾಡುವ, ಭವ್ಯವಾದ ವನ್ಯಜೀವಿಗಳನ್ನು ಸಂರಕ್ಷಿಸುವ ತುರ್ತನ್ನು ಅನ್ವೇಷಿಸುವ ಮತ್ತು ಅನುಭವಿಸುವಗುರಿಯೊಂದಿಗೆ, ಸಫಾರಿಇಂಡಿಯಾ ,ಎಂಟು ಭಾಗಗಳ ಟೆಂಟ್ ಪೋಲ್ಸರಣಿಯ ಮೂಲಕ ಭಾರತದ ಏಳು ಪೌರಾಣಿಕ ರಾಷ್ಟ್ರೀಯ ಉದ್ಯಾನವನಗಳನ್ನು ಪರಿಶೋಧಿಸಿದೆ.
ಜಗತ್ತಿನ ಹಲವಾರು ಭಾಗಗಳಲ್ಲಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷದ ಈ ಸಮಯದಲ್ಲಿ, ಪ್ರಾಣಿಗಳನ್ನು ದಯೆಯಿಂದ ನಡೆಸಿಕೊಳ್ಳುವುದು ಮಾನವರಾದ ನಮಗೆ, ಹಿಂದೆಂದಿಗಿಂತಲೂ ಈಗ ಹೆಚ್ಚುಅಗತ್ಯವಾದ ಕ್ರಮವಾಗಿದೆ. ಈ ಪ್ರಾಣಿಗಳು ಮಾನವೀಯತೆ ಮತ್ತು ನೈಸರ್ಗಿಕವಾದ ಎಲ್ಲ ಸೌಂದರ್ಯದ ನಡುವಿನ ಸೇತುವೆಯಾಗಿವೆ.
ಇದೇ ಉದ್ದೇಶದಿಂದ ಆರಂಭವಾಗಿರುವ ಸಫಾರಿಇಂಡಿಯಾ, ದೇಶದ ಮಹತ್ವದ ವನ್ಯಜೀವಿ ಪರಿಸರ ವ್ಯವಸ್ಥೆಯ ಮೂಲಕ ನಿಮ್ಮನ್ನು ಸಾಹಸಮಯ ಪ್ರಯಾಣಕ್ಕೆ ಕರೆದೊಯ್ಯಲು ಸಜ್ಜಾಗಿದೆ. ಆತಿಥೇಯ ರಣವಿಜಯ್ಜೊತೆಗಿನ ಸಫಾರಿಇಂಡಿಯಾ, ಅರಣ್ಯದ ಹೃದಯ ಭಾಗದಲ್ಲಿ ವಾಸಿಸುವ ಜೀವನವನ್ನು ಪತ್ತೆ ಹಚ್ಚುವ, ಭೂಮಿಯ ದಟ್ಟವಾದ ಉಷ್ಣವಲಯದ ಕಾಡುಗಳಲ್ಲಿಟ್ರೆಕ್ಕಿಂಗ್ಮಾಡುವ, ಅಪಾಯಕಾರಿ ನದಿಗಳನ್ನು ದಾಟುವ, ಕಾಡಿನ ಅಪರೂಪದ ಭಾಗಗಳನ್ನು ಅನ್ವೇಷಿಸುವ ಸಾಹಸಮಯ ಪ್ರಯಾಣವಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada