ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ ಮಧ್ಯಂತರದಲ್ಲಿ 650 ಅಂಕ ಜಿಗಿಯಿತು. ಎನ್ಎಸ್ಇ ಸೂಚ್ಯಂಕ ನಿಫ್ಟಿ 18,000 ಅಂಕಗಳ ಮೈಲುಗಲ್ಲನ್ನು ಮತ್ತೆ ದಾಟಿತು. (Stock Market) ಟಿಸಿಎಸ್ ಷೇರು ದರ 3% ಏರಿತು.ಅಮೆರಿಕದಲ್ಲಿ ಸದ್ಯಕ್ಕೆ ಬಡ್ಡಿ ದರ ಏರಿಕೆಯ ಸಾಧ್ಯತೆ ಕ್ಷೀಣಿಸಿರುವುದು ಜಾಗತಿಕ ಷೇರು ಪೇಟೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಿತು. ಹೂಡಿಕೆದಾರರ ಸಂಪತ್ತಿನಲ್ಲಿ 3.45 ಲಕ್ಷ ಕೋಟಿ ರೂ. ಏರಿತು. ಬಿಎಸ್ಟಿ ಷೇರುಗಳ ಒಟ್ಟು ಮಾರುಕಟ್ಟೆ ಮೌಲ್ಯ 283 ಲಕ್ಷ ಕೋಟಿ ರೂ.ಗೆ ವೃದ್ಧಸಿತು.ಅಮೆರಿಕದಲ್ಲಿ ಪೇರೋಲ್ ಡೇಟಾಗಳು ಸಕಾರಾತ್ಮಕವಾಗಿರುವುದು, ಬಾಂಡ್ಗಳ ಉತ್ಪತ್ತಿ ವೃದ್ಧಿಸಿರುವುದು, ಡಾಲರ್ ಎದುರು ರೂಪಾಯಿಯ ಚೇತರಿಕೆ, ಕೇಂದ್ರ ಬಜೆಟ್ ಹೂಡಿಕೆದಾರರ ಸ್ನೇಹಿಯಾಗುವ ನಿರೀಕ್ಷೆಗಳ ಪರಿಣಾಮ ಷೇರು ಸೂಚ್ಯಂಕ ಜಿಗಿಯಿತು. ದೇಶದಲ್ಲಿ ನಡೆಯುವ ಬಲವಂತದ ಮತಾಂತರಗಳ (Forced Conversion) ಕುರಿತು ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ‘ದೇಶದ ಭದ್ರತೆಗೆ ಬಲವಂತದ ಮತಾಂತರಗಳು ಅಪಾಯಕಾರಿಯಾಗಿವೆ. ಇವುಗಳಿಗೆ ರಾಜಕೀಯ ಬಣ್ಣ ಬಳಿಯಬಾರದು’ ಎಂದು ಹೇಳಿದೆ.ಆಮಿಷವೊಡ್ಡಿ, ಹಣಕಾಸು ನೆರವು ನೀಡಿ, ಬೆದರಿಕೆ ಹಾಕಿ, ವಂಚಿಸಿ ಮತಾಂತರ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಬೇಕು ಎಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಬಲವಂತದ ಮತಾಂತರದ ಕುರಿತು ಆತಂಕ ವ್ಯಕ್ತಪಡಿಸಿತು.’ಬಲವಂತದ ಮತಾಂತರಗಳು ಅಪಾಯಕಾರಿಯಾಗಿವೆ. ಪ್ರಕರಣದಲ್ಲಿ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರ ನೆರವು ಬೇಕು. ಮತಾಂತರಗಳು ಹೇಗೆ ನಡೆಯುತ್ತಿವೆ, ಹೇಗೆ ಇವುಗಳನ್ನು ತಡೆಯಬಹುದು, ಸುಧಾರಣೆ ಕ್ರಮಗಳು ಯಾವವು ಎಂಬುದರ ಕುರಿತು ಚರ್ಚೆಯಾಗಬೇಕು’ ಎಂದು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಸಿ.ಟಿ.ರವಿಕುಮಾರ್ ನೇತೃತ್ವದ ನ್ಯಾಯಪೀಠ ತಿಳಿಸಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada