ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ (ರಿ ) ಲಕ್ಷ್ಮೇಶ್ವರ ಇವರ ನೇತೃತ್ವದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ನಡೆಯುವ ಪುಲಿಗೇರಿ ಪೌರ್ಣಿಮ ಕಾರ್ಯಕ್ರಮವನ್ನು ಪಟ್ಟಣದ ಹಿರಿಯ ಗಣ್ಯರು ಶಿವಣ್ಣ ಕೋಳಿವಾಡ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಭಾರತೀಯ ಪರಂಪರೆಯಲ್ಲಿ ಗೋಮಾತೆ ಎಂಬ ವಿಷಯಕ್ಕೆ ಉಪನ್ಯಾಸ ನೀಡಿದ ಸುಧಾ ಹುಚ್ಚಣ್ಣವರ ಮಾತನಾಡಿ ಭಾರತೀಯ ಪಾರಂಪರಿಕ ಒಳಗೆ ಗೋವಿಗೆ ಮಹತ್ವ ಸ್ಥಾನ ಸಾಂಪ್ರದಾಯಿಕವಾಗಿ ಆಧ್ಯಾತ್ಮಿಕವಾಗಿ ಭಾವನಾತ್ಮಕವಾಗಿ ಗೋವು ನಂಟು ಹೊಂದಿದೆ ಎಲ್ಲಾ ನದಿಗಳ ಗಿಂತಲೂ ಗೋಮೂತ್ರ ಪವಿತ್ರಸ್ಥಾನವನ್ನು ಹೊಂದಿದೆ ಪ್ರಾಣಿಹಿಂಸೆ ಮಹಾಪಾಪ ಮನುಷ್ಯರಂತೆ ಪ್ರಾಣಿ ಒಂದು ಅದರಲ್ಲಿ ಮನುಷ್ಯ ಬುದ್ಧಿಜೀವಿ ಅಂತ ಅನಿಸಿಕೊಂಡರು ಪ್ರಾಣಿಹತ್ಯೆ ಗೋಹತ್ಯೆ ಅಂತಹ ಕೃತ್ಯಗಳನ್ನು ಎಸೆಯುತ್ತಾನೆ ಭಾರತೀಯ ಪಾರಂಪರಿಕವಾಗ ಗೋವಿಗೆ ವಿಶಿಷ್ಟ ಸ್ಥಾನವಿದೆ ರಾಜ-ಮಹಾರಾಜರ ಕಾಲದಿಂದಲೂ ಗೋದಾನ ಪದ್ಧತಿ ಇದೆ ಗೋದಾನ ಕೊಡುವುದರಿಂದ ಪಾಪ ಕರ್ಮಗಳು ತೊಳೆಯುತ್ತದೆ ಎಂದು ನಂಬುತ್ತಿದ್ದರು ದೇವಾನುದೇವತೆಗಳಿಗೂ ದೇವತೆಯಂತೆ ಹಿಂದೂ ಧರ್ಮದಲ್ಲಿ ಗೋವನ್ನ ಪೂಜಿಸುತ್ತಾರೆ ಎಂದು ಹೇಳಿದರು….
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada