ಗುರುವಾರ ರಣಜಿ ಟ್ರೋಫಿಯ ಮೂಲಕ ಕ್ರಿಕೆಟ್ ಅಂಗಳಕ್ಕೆ ಕಂಬ್ಯಾಕ್ ಆಗಿರುವ ವೇಗಿ ಶ್ರೀಶಾಂತ್, ಮೊದಲ ಪಂದ್ಯದಲ್ಲೇ ಎರಡು ವಿಕೆಟ್ ಪಡೆದಿದ್ದಾರೆ. 39 ವರ್ಷದ ಶ್ರೀಶಾಂತ್ ಮೇಘಾಲಯದ ವಿರುದ್ಧ ತಮ್ಮ ಮರು ಪ್ರವೇಶದ ನಂತರ ಮೊದಲ ಪಂದ್ಯವನ್ನು ಆಡಿದ್ದಾರೆ. 11.4 ಓವರ್ ಬೌಲ್ ಮಾಡಿ ಕೇವಲ 40 ರನ್ ನೀಡಿದ ಶ್ರೀಶಾಂತ್, ಆರ್ಯನ್ ಬೋರಾ ಹಾಗೂ ಸಂಗ್ಮಾ ಅವರನ್ನ ಪೆವಿಲಿಯನ್ ಗೆ ಮರಳುವಂತೆ ಮಾಡಿದರು.ಒಂಭತ್ತು ವರ್ಷಗಳ ದೀರ್ಘ ಅಂತರದ ನಂತರ ಪ್ರಥಮ ದರ್ಜೆ ಕ್ರಿಕೆಟ್ ಗೆ ಮರಳಲು ಕೇರಳ ಎಕ್ಸ್ಪ್ರೆಸ್ ಶ್ರೀಶಾಂತ್ ಉತ್ಸುಕರಾಗಿದ್ದರು.
ತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada