ಸಿದ್ದರಾಮಯ್ಯಗೆ “ಅಪ್ಪನ ಆಣೆ..” ಹೇಳಿಕೆ ನೆನಪಿಸಿ ಟಾಂಗ್ ನೀಡಿದ ಸಿಎಂ ಬೊಮ್ಮಾಯಿ

ವಿಧಾನಸಭೆ : ಸಿದ್ದರಾಮಯ್ಯ ಏನು ಹೇಳುತ್ತಾರೋ, ಅದಕ್ಕೆ ವಿರುದ್ಧವಾದದ್ದೇ ನಡೆಯುತ್ತದೆ. ಕುಮಾರಸ್ವಾಮಿ, ಯಡಿಯೂರಪ್ಪ ಅವರ ಅಪ್ಪನ ಆಣೆ ಮುಖ್ಯಮಂತ್ರಿಯಾಗುವುದಿಲ್ಲ ಎಂದರು ಆದರೆ ಆಗಿಲ್ಲವೇ ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ” ಹವಾ ತುಂಬಿದ ಪುಗ್ಗಾ ” ರೀತಿ ಆಡುತ್ತಿದ್ದಾರೆ. ಅವರು ವಾಸ್ತವ ಮರೆತಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೇಳಿದರು.

ಪ್ರಜಾಪ್ರಭುತ್ವ ಬಂದು 75 ವರ್ಷದಲ್ಲಿ ದೇಶದ ಜನತೆ ಎಲ್ಲಾ ರಾಜಕೀಯ ಪಕ್ಷಗಳ ಆಟವನ್ನು ನೋಡಿದ್ದಾರೆ. ಜನರ ನಾಡಿ ಮಿಡಿತ ಗೊತ್ತಾಗೋದು ಚುನಾವಣೆ ಬಂದಾಗ.ಎಂಥ ಎಂಥ ನಾಯಕರೇ ಸೋತಿರುವುದು ಗೊತ್ತಲ್ಲವೇ ? ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪ, ಕುಮಾರಸ್ವಾಮಿ ಅವರ ಅಪ್ಪನ ಆಣೆ ಸಿಎಂ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು ಆದ್ರೆ ಇಬ್ಬರೂ ಸಿಎಂ ಆದರು.ಅಧಿಕಾರದಲ್ಲಿ ಇದ್ದ‌ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದಯ ಕಷ್ಟ .ಜನರು ಬಹಳ ವೇಗವಾಗಿ ನಿರೀಕ್ಷೆ ಬದಲಾವಣೆ ಮಾಡುತ್ತಾರೆ.

ಅಧಿಕಾರದಲ್ಲಿ ಇದ್ದಿದ್ದಕ್ಕೆ ಬಿಜೆಪಿ ಗೆದ್ದರು ಎನ್ನುತ್ತೀರಲ್ಲ, ಹಾಗಾದರೆ ಯಾಕೆ ನೀವು ಪಂಜಾಬ್ ನಲ್ಲಿ ಏಕೆ ಗೆದ್ದಿಲ್ಲ ಎಂದು ಪ್ರಶ್ನಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೀದರ್ | ನೌಕರರ ಕ್ರೀಡಾಕೂಟ: ಸಕಲ ಸಿದ್ಧತೆಗೆ ಸೂಚನೆ

Fri Mar 11 , 2022
ಬೀದರ್: ನಗರದಲ್ಲಿ ಮಾರ್ಚ್ ಮಾ. 15 ಹಾಗೂ 16 ರಂದು ಹಮ್ಮಿಕೊಂಡಿರುವ ರಾಜ್ಯ ಸರ್ಕಾರಿ ನೌಕರರ 2021-22ನೇ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅಧಿಕಾರಿಗಳಿಗೆ ಸೂಚಿಸಿದರು.   ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕ್ರೀಡಾಕೂಟದ ಪೂರ್ವ ಭಾವಿ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೆಹರೂ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡೆಗಳು ಹಾಗೂ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ […]

Advertisement

Wordpress Social Share Plugin powered by Ultimatelysocial