ಈ ಏಕಾಂಶ್ ಹೆಸರಿನ ಅಪಾರ್ಟ್ಮೆಂಟ್ ನಲ್ಲಿ ನಿನ್ನೆ ನಡೆಯಬಾರದ ಘಟನೆಯೊಂದು ನಡೆದು ಹೋಗಿತ್ತು.

ವೃದ್ಧ ತಾಯಿಯ ಜೊತೆಗಿದ್ದ ಅನ್ ಮ್ಯಾರಿಡ್ ಮಕ್ಕಳಿಬ್ಬರು ಇದೇ ಅಪಾರ್ಟ್ಮೆಂಟ್ ನ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು. 72 ವರ್ಷದ ಯಶೋಧಾ ಹಾಗೂ ಅವರಿಬ್ಬರು ಮಕ್ಕಳಾದ ಸುಮನ್ ಗುಪ್ತಾ ಹಾಗೂ ನರೇಶ್ ವಿಷ ಸೇವಿಗೆ ಹಾಸಿಗೆಯಲ್ಲೇ ಕೊನೆಯುಸಿರೆಳೆದಿದ್ದರು. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳಕ್ಕೆ ದಾವಿಸಿ ನೋಡಿದಾಗ ಡೆತ್ ನೋಟ್ ಕೂಡ ದೊರೆತಿದೆ. ಆತ್ಮಹತ್ಯೆ ಮಾಡಿಕೊಂಡ ನರೇಶ ಕಂಟ್ರ್ಯಾಕ್ಟರ್ ಆಗಿದ್ದ ಹಣಕಾಸಿನ ಮುಗ್ಗಟ್ಟಿನಿಂದ ಆತ್ಮಹತ್ಯೆಗೆ ಶರಣಾಗಿರೋದಾಗಿ ಬರೆದಿಟ್ಟಿದ್ದನಂತೆ.
ವಾಯ್ಸ್ ಓವರ್ : ವೃತ್ತಿಯಲ್ಲಿ ಕಂಟ್ರ್ಯಾಕ್ಟರ್ ಆಗಿದ್ದ ನರೇಶ ಹಲವು ಗುತ್ತಿಗೆ ಕೆಲಸವನ್ನ ಮಾಡ್ತಿದ್ದ. ಕಳೆದ ಎರಡು ವರ್ಷದಿಂದ ಗುತ್ತಿಗೆ ಪಡೆದ ಕೆಲಸದ ಅಮೌಂಟ್ ಬಂದಿರಲಿಲ್ಲ. ಸರಿಸುಮಾರು 2 ಕೋಟಿಯಷ್ಟು ಹಣ ಸ್ಟಕ್ ಆಗಿದ್ದರಿಂದ ನರೇಶ ಡಿಪ್ರೆಷನ್ ಗೆ ಹೋಗಿದ್ದ. ಅಷ್ಟೇ ಅಲ್ಲ ವಯಸ್ಸಾದ ತಾಯಿ ಯಶೋಧಾ ಹಾಗೂ ನಲವತ್ತು ದಾಟಿದ್ರೂ ಮದ್ವೆಯಾಗದ ಸಹೋದರಿ ಸುಮನ್ ರನ್ನ ಸಾಕೋದಕ್ಕೂ ನರೇಶನಿಗೆ ಕಷ್ಟಸಾಧ್ಯವಾಗಿತ್ತು. ದುಬಾರಿ ಬಾಡಿಗೆಯ ಮನೆಯನ್ನ ಖಾಲಿ ಮಾಡಿಕೊಂಡು ಇದೇ ಫ್ಲ್ಯಾಟ್ ಗೆ ನರೇಶ ಕಳೆದ ನಾಲ್ಕು ತಿಂಗಳ ಹಿಂದೆ ಬಂದಿದ್ದ. ಆದ್ರೆ, ಬದುಕು ಬದುಕಲಾರದಷ್ಟು ಹದಗೆಟ್ಟಿದೆ ಅಂತ ಅರಿತ ನರೇಶ ಶನಿವಾರ ತನ್ನ ಇನ್ನೊಬ್ಬ ಸಹೋದರಿ ಅಪರ್ಣಾರಿಗೆ ಕರೆ ಮಾಡಿ ಸಂಕಷ್ಟವನ್ನ ಹೇಳಿ ಗೋಳಾಡಿದ್ದನಂತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಸಂಕ್ರಾಂತಿಗೆ ಪರಭಾಷೆಯವ್ರದ್ದು ಮಾತ್ರವಲ್ಲ ನಾವೂ ಯಾರಿಗೂ ಕಮ್ಮಿಯಿಲ್ಲ!

Tue Dec 20 , 2022
ಸಂಕ್ರಾಂತಿ ಸಂಭ್ರಮಕ್ಕೆ ಬರ್ತಿದೆ ಅಪ್ಪಟ ಕನ್ನಡ‌ ಪಿಚ್ಚರ್ ‘ಆರ್ಕೆಸ್ಟ್ರಾ’ ಮೈಸೂರು ಇದು ಮೈಸೂರು ಕಲ್ಚರ್ ಡಾಲಿ‌ ಪಿಕ್ಚರ್ಸ್ ಬ್ಯಾನರ್ ಹಾಗೂ ಕೆ.ಆರ್ .ಜಿ ಸ್ಟುಯೋಸ್ ಅರ್ಪಿಸ್ತಿರೋ ಈ ಚಿತ್ರವನ್ನ ಅಶ್ವಿನ್ ವಿಜಯ್ ಕುಮಾರ್ ಹಾಗೂ ರಘು ದೀಕ್ಷಿತ್ ನಿರ್ಮಿಸಿದ್ದಾರೆ. ಪೂರ್ಣಚಂದ್ರ ಅಭಿನಯದಲ್ಲಿ, ಸುನೀಲ್ ಮೈಸೂರು ನಿರ್ದೇಶನ, ರಘು ದೀಕ್ಷಿತ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ‌.ವಿಶೇಷ ಅಂದ್ರೆ ಡಾಲಿ ಧನಂಜಯ ಈ ಚಿತ್ರದ ಎಲ್ಲಾ ಹಾಡುಗಳಿಗೂ ಸಾಹಿತ್ಯ ಬರೆದಿದ್ದು, ಈಗಾಗ್ಲೇ ರಿಲೀಸ್ […]

Advertisement

Wordpress Social Share Plugin powered by Ultimatelysocial