ವೃದ್ಧ ತಾಯಿಯ ಜೊತೆಗಿದ್ದ ಅನ್ ಮ್ಯಾರಿಡ್ ಮಕ್ಕಳಿಬ್ಬರು ಇದೇ ಅಪಾರ್ಟ್ಮೆಂಟ್ ನ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು. 72 ವರ್ಷದ ಯಶೋಧಾ ಹಾಗೂ ಅವರಿಬ್ಬರು ಮಕ್ಕಳಾದ ಸುಮನ್ ಗುಪ್ತಾ ಹಾಗೂ ನರೇಶ್ ವಿಷ ಸೇವಿಗೆ ಹಾಸಿಗೆಯಲ್ಲೇ ಕೊನೆಯುಸಿರೆಳೆದಿದ್ದರು. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳಕ್ಕೆ ದಾವಿಸಿ ನೋಡಿದಾಗ ಡೆತ್ ನೋಟ್ ಕೂಡ ದೊರೆತಿದೆ. ಆತ್ಮಹತ್ಯೆ ಮಾಡಿಕೊಂಡ ನರೇಶ ಕಂಟ್ರ್ಯಾಕ್ಟರ್ ಆಗಿದ್ದ ಹಣಕಾಸಿನ ಮುಗ್ಗಟ್ಟಿನಿಂದ ಆತ್ಮಹತ್ಯೆಗೆ ಶರಣಾಗಿರೋದಾಗಿ ಬರೆದಿಟ್ಟಿದ್ದನಂತೆ.
ವಾಯ್ಸ್ ಓವರ್ : ವೃತ್ತಿಯಲ್ಲಿ ಕಂಟ್ರ್ಯಾಕ್ಟರ್ ಆಗಿದ್ದ ನರೇಶ ಹಲವು ಗುತ್ತಿಗೆ ಕೆಲಸವನ್ನ ಮಾಡ್ತಿದ್ದ. ಕಳೆದ ಎರಡು ವರ್ಷದಿಂದ ಗುತ್ತಿಗೆ ಪಡೆದ ಕೆಲಸದ ಅಮೌಂಟ್ ಬಂದಿರಲಿಲ್ಲ. ಸರಿಸುಮಾರು 2 ಕೋಟಿಯಷ್ಟು ಹಣ ಸ್ಟಕ್ ಆಗಿದ್ದರಿಂದ ನರೇಶ ಡಿಪ್ರೆಷನ್ ಗೆ ಹೋಗಿದ್ದ. ಅಷ್ಟೇ ಅಲ್ಲ ವಯಸ್ಸಾದ ತಾಯಿ ಯಶೋಧಾ ಹಾಗೂ ನಲವತ್ತು ದಾಟಿದ್ರೂ ಮದ್ವೆಯಾಗದ ಸಹೋದರಿ ಸುಮನ್ ರನ್ನ ಸಾಕೋದಕ್ಕೂ ನರೇಶನಿಗೆ ಕಷ್ಟಸಾಧ್ಯವಾಗಿತ್ತು. ದುಬಾರಿ ಬಾಡಿಗೆಯ ಮನೆಯನ್ನ ಖಾಲಿ ಮಾಡಿಕೊಂಡು ಇದೇ ಫ್ಲ್ಯಾಟ್ ಗೆ ನರೇಶ ಕಳೆದ ನಾಲ್ಕು ತಿಂಗಳ ಹಿಂದೆ ಬಂದಿದ್ದ. ಆದ್ರೆ, ಬದುಕು ಬದುಕಲಾರದಷ್ಟು ಹದಗೆಟ್ಟಿದೆ ಅಂತ ಅರಿತ ನರೇಶ ಶನಿವಾರ ತನ್ನ ಇನ್ನೊಬ್ಬ ಸಹೋದರಿ ಅಪರ್ಣಾರಿಗೆ ಕರೆ ಮಾಡಿ ಸಂಕಷ್ಟವನ್ನ ಹೇಳಿ ಗೋಳಾಡಿದ್ದನಂತೆ.
ಈ ಏಕಾಂಶ್ ಹೆಸರಿನ ಅಪಾರ್ಟ್ಮೆಂಟ್ ನಲ್ಲಿ ನಿನ್ನೆ ನಡೆಯಬಾರದ ಘಟನೆಯೊಂದು ನಡೆದು ಹೋಗಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
Please follow and like us: