ದೇಶದಾದ್ಯಂತ ವಿವಿಧ ನ್ಯಾಯಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೋರಿರುವ ಅರ್ಜಿ

ನವದೆಹಲಿ (ಪಿಟಿಐ): ದೇಶದಾದ್ಯಂತ ವಿವಿಧ ನ್ಯಾಯಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೋರಿರುವ ಅರ್ಜಿಗಳ ತ್ವರಿತ ವಿಚಾರಣೆಗೆ ಆಗ್ರಹಪಡಿಸಿದ ಅರ್ಜಿದಾರರಿಗೆ, ತಾಳ್ಮೆ ವಹಿಸುವಂತೆ ಸುಪ್ರೀಂ ಕೋರ್ಟ್‌ ಸಲಹೆ ಮಾಡಿದೆ.ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ಹಿಮಾ ಕೊಹ್ಲಿ ಅವರಿದ್ದ ಪೀಠವು, ಫೆ.23ರಂದು ವಿಚಾರಣೆ ನಡೆಸಲಿದ್ದು, ಸಹಕರಿಸಲು ಸಿದ್ಧವಿರಬೇಕು ಎಂದು ಅಟಾರ್ನಿ ಜನರಲ್‌ ಅವರಿಗೆ ತಿಳಿಸಲಾಗಿದೆ ಎಂದು ಹೇಳಿತು.ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಷಯದಲ್ಲಿಯೂ ನೀವು ಗಡಿಬಿಡಿ ಮಾಡುತ್ತಿದ್ದೀರಿ.ನಾವು ಇಂದೇ ಸರ್ಕಾರದ ಅಧಿಕಾರಿಗಳನ್ನು ಕರೆಸಿ, ಜೈಲಿಗೆ ಕಳುಹಿಸುವಂತೆ ಸೂಚಿಸಬಹುದೇ? ದಯವಿಟ್ಟು ತಾಳ್ಮೆ ವಹಿಸಿರಿ. ನಾವು ವಿಚಾರಣೆಗೆ ಅರ್ಜಿಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಅವರು ಅರ್ಜಿದಾರರ ಪರ ವಕೀಲರಿಗೆ ತಿಳಿಸಿದರು.ಅಂಕಿ ಅಂಶಗಳ ಪ್ರಕಾರ, ದೇಶದಾದ್ಯಂತ ವಿವಿಧ ನ್ಯಾಯಮಂಡಳಿಗಳಲ್ಲಿ ಸುಮಾರು 250 ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರ ಸೆಪ್ಟೆಂಬರ್ 2021ರಲ್ಲಿ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಆರು ವಿವಿಧ ನ್ಯಾಯ ಮಂಡಳಿಗಳಿಗೆ ಆಯ್ಕೆ ಮತ್ತು ಶೋಧನಾ ಸಮಿತಿ ಶಿಫಾರಸಿನಂತೆ 84 ಮಂದಿಯನ್ನು ನೇಮಕ ಮಾಡಲಾಗಿದೆ. ಸದ್ಯ, ಯಾವುದೇ ಶಿಫಾರಸು ಬಾಕಿ ಉಳಿದಿಲ್ಲ ಎಂದು ತಿಳಿಸಿತ್ತು.

ತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಂಗನಾ ರಣಾವತ್ ಗೆಹ್ರಾಯನ್ ಅವರನ್ನು 'ಅಶ್ಲೀಲ' ಎಂದು ಕರೆಯುವುದು ನಟಿಯಾಗಿ ಅವರ ಮಿತಿಗಳನ್ನು ಮಾತ್ರ ಪ್ರತಿಬಿಂಬಿಸುತ್ತದೆ!

Thu Feb 17 , 2022
ಆತ್ಮೀಯ ಕಂಗನಾ ರಣಾವತ್, ನೀವು ಏನು ಬೇಕಾದರೂ ಹೇಳಲು ಇಷ್ಟಪಡುತ್ತೀರಿ ಎಂದು ನನಗೆ ತಿಳಿದಿದೆ. ಬಹಿರಂಗವಾಗಿ ಮಾತನಾಡುವುದು ನಿಮ್ಮ ಜನ್ಮಸಿದ್ಧ ಹಕ್ಕು ಮತ್ತು ಸಹಿ ರಾಗವಾಗಿದೆ.ಆದ್ದರಿಂದ ನೀವು ಕರೆ ಮಾಡಿದಾಗ ಶಕುನ್ ಬಾತ್ರಾನ ಗೆಹ್ರೈಯಾನ್ ಅನುಪಯುಕ್ತ ಮತ್ತು ಅಶ್ಲೀಲವಾಗಿ, ನಾನು ನಿಮ್ಮ ಅಭಿಪ್ರಾಯದ ಹಕ್ಕನ್ನು ಸಂಪೂರ್ಣವಾಗಿ ಅನುಮೋದಿಸುತ್ತೇನೆ. ಆದರೆ ಕಸ? ಪೋರ್ನ್? ನನಗೆ ಹೇಳಲು ಸಾಕಷ್ಟು ಧೈರ್ಯವಿರಲು ಅನುಮತಿಸಿ, ಅದು ಸ್ವಲ್ಪ ಅತಿರೇಕವಾಗಿದೆ. ಅಲ್ಲಿ ಒಂದು ದೇಶದಲ್ಲಿ ಪುಷ್ಪಾ ಗಲ್ಲಾಪೆಟ್ಟಿಗೆಯಲ್ಲಿ […]

Advertisement

Wordpress Social Share Plugin powered by Ultimatelysocial