ಗೋಹತ್ಯೆ ಬಿಲ್ ಜಾರಿಗೆ ತರುವ ಅವಶ್ಯಕತೆ ಇಲ್ಲ ಇವಾಗ್ಲೆ ಗೋಹತ್ಯೆ ಕಾನೂನು ಜಾರಿಯಲ್ಲಿದೆ ಎಂದು ವಿಧಾನ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ… ಜಾತಿ ಹೆಸರಲ್ಲಿ ರಾಜಕಾರಣ ಮಾಡೋದು ಬಿಜೆಪಿ ನಾಯಕರು ಬೀಡಬೇಕು. ರೈತರ ಬಂದ್ ಕರೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ಕೊಡಲಿದೆ.
ನಮ್ಮ ಪಕ್ಷದ ಎಲ್ಲ ನಾಯಕರೂ, ಕಾರ್ಯಕರ್ತರಿಗೂ ಬೆಂಬಲ ಕೊಡುವಂತೆ ಸೂಚನೆ ಕಳಿಸಲಾಗಿದೆ. ರೈತರ ಪರ ಪಕ್ಷ ವಿವಾದಿತ ಮೂರೂ ಕಾಯ್ದೆಗಳನ್ನೂ ಕೇಂದ್ರ ಸರ್ಕಾರ ವಾಪಸ್ ಪಡೆಯಲಿ ಎಂದು ಡಿಕೆಶಿ ಆಗ್ರಹ ಮಾಡಿದ್ದಾರೆ. ರೈತರಿಗೆ ಮಾರಕವಾಗುವ ಕಾಯ್ದೆಗೆ ನಮ್ಮ ವಿರೋಧ ಇದೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ರು.
ಇದನ್ನೂ ಓದಿ: ಡಿಸೆಂಬರ್ 8 ರಂದು ಭಾರತ ಬಂದ್-ಬಂದ್ ಗೆ ಬೆಂಬಲ ನೀಡುವಂತೆ ಸುರ್ಜೆವಾಲಾ ಮನವಿ