ಕೌರವರಿಗೆ ಎಲ್ಲಾ ದಿಕ್ಕುಗಳಿಂದಲೂ ದೂತರು ವಾರ್ತೆಗಳನ್ನು ತರುತ್ತಿದ್ದರು. ಆದರೆ ಎಲ್ಲಿಯೂ ಪಾಂಡವರ ಸುಳಿವು ಸಿಗಲಿಲ್ಲ. ಅಷ್ಟರಲ್ಲಿ ಕೀಚಕನ ಮರಣದ ವಾರ್ತೆ ಬಂದಿತು. ಅದರ ಬಗ್ಗೆ ವಿವರವಾಗಿ ಕೇಳಿದ ನಂತರ ಕೀಚಕನನ್ನು ಕೊಲ್ಲಬೇಕಾದರೆ ಅದು ಭೀಮನೇ ಇರಬೇಕು ಎಂದು ಊಹಿಸಿದನು. ಎಲ್ಲರನ್ನೂ ಕರೆಸಿ ತನ್ನ ಊಹೆಯನ್ನು ಹೇಳಿದನು. ಅಲ್ಲಿಗೆ ಹೋಗಿ ಪತ್ತೆ ಹಚ್ಚಿ ಮತ್ತೆ ಅವರನ್ನು ವನವಾಸಕ್ಕೆ ಕಳಿಸುವ ಅದಮ್ಯ ಆಸೆ ಅವನದು. ಸುತ್ತಮುತ್ತಲಿನ ರಾಜ್ಯಗಳು ಬರಗಾಲದಿಂದ ಬೆಂದಿದ್ದರೆ ವಿರಾಟನ ರಾಜ್ಯ ಮಾತ್ರ ಸುಭಿಕ್ಷದಿಂದ ಕೂಡಿತ್ತು. ಎಲ್ಲಿ ಧರ್ಮಜನಿರುವನೋ ಅಲ್ಲಿ ಈ ಸ್ಥಿತಿ ಎಂದು ಭೀಷ್ಮನೂ ಹೇಳಿದನು. ಗೋಗ್ರಹಣದ ನೆಪದಲ್ಲಿ ಅಲ್ಲಿಗೆ ಮುತ್ತಿಗೆ ಹಾಕುವುದು ಹಿರಿಯರಾರಿಗೂ ಹಿಡಿಸಲಿಲ್ಲ. ಆದರೆ ದುರ್ಯೋಧನನು ಅದನ್ನೇ ಬಲವಾಗಿ ಹಿಡಿದು ಸೇನೆಗೆ ಸಿದ್ಧವಾಗಲು ಹೇಳಿದನು. ಗೋವಿನ ರಕ್ಷಣೆಯಲ್ಲಿ ಪಾಂಡವರು ಬಂದೇ ಬರುವರೆಂಬ ನಂಬಿಕೆ ಅವನದು.
ಸೇನೆ ಹೊರಟಿತು. ಅಪಶಕುನಗಳನ್ನು ಲೆಕ್ಕಿಸಲಿಲ್ಲ. ವಿರಾಟನಗರದ ದಕ್ಷಿಣ ಭಾಗದಲ್ಲಿ ಅರವತ್ತು ಸಾವಿರ ಗೋವುಗಳನ್ನು ಸೆರೆಹಿಡಿದರು ತ್ರಿಗರ್ತ ಸುಶರ್ಮಕರು. ಈ ವಿಷಯವನ್ನು ಗೋಪಾಲಕರು ಬಂದು ಹೇಳಿದಾಗ ಈ ಸಮಯದಲ್ಲಿ ಕೀಚಕನಿಲ್ಲವೇ ಎಂದು ಅಳಲಿದನು ರಾಜ. ಆಗ ಧರ್ಮಜನು ಗೋವನ್ನು ರಕ್ಷಿಸುವುದು ನಮ್ಮ ಧರ್ಮವೆಂದು ಅವಧಿಯ ಬಗ್ಗೆ ಯೋಚಿಸದೆ ನಡೆಯಿರಿ ಎಂದು ಭೀಮಾರ್ಜುನರ ಸಹಿತ ವಿರಾಟನ ಸೈನ್ಯದೊಂದಿಗೆ ಹೊರಟನು. ಸುಶರ್ಮನು ವಿರಾಟನನ್ನು ಮೂದಲಿಸಿ ನಕ್ಕನು. ಆಗ ಕೋಪಗೊಂಡ ಭೀಮನು ಎದುರಿಗಿದ್ದ ಆಲದ ಮರವನ್ನು ನೋಡಲು ಧರ್ಮಜನು ತಡೆದನು. ಮರವನ್ನು ಮುರಿದರೆ ನೀನೇ ಭೀಮನೆಂದು ತಿಳಿಯುವರು. ಬೇಡ ಎಂದನು. ಇಷ್ಟು ದಿನಗಳು ಕಷ್ಟಪಟ್ಟು ಅವಧಿ ಸಾಗಿಸಿದ್ದೇವೆ ಎನ್ನಲು ಭೀಮನು ಸರಿಯೆಂದು ಬಾಣಗಳಿಂದಲೇ ಎಲ್ಲರನ್ನೂ ಈಡಾಡಿದನು. ಇಡೀ ಸೈನ್ಯ ಪುಡಿಯಾಯಿತು. ಗೋವುಗಳನ್ನು ಬಿಡಿಸಿಕೊಂಡು ಬಂದಾಗ ವಿರಾಟನು ಇವರನ್ನು ಬಗೆಬಗೆಯಾಗಿ ಹೊಗಳಿದನು. ಸುಶರ್ಮನು ಅವಮಾನದಿಂದ ಹಿಂದಿರುಗಲು ಮತ್ತೆ ಉತ್ತರ ಭಾಗದಲ್ಲಿ ಗೋಗ್ರಹಣ ಮಾಡಲು ದುರ್ಯೋಧನನು ನಿರ್ಧರಿಸಿದನು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada
Please follow and like us: