ತಾನು ಕಷ್ಟಪಟ್ಟು ದುಡಿಯುತ್ತಿದ್ದರೆ ತನ್ನ ಪತ್ನಿ ಆ ಹಣವನ್ನು ಮನಬಂದಂತೆ ದುಂದು ವೆಚ್ಚ ಮಾಡುತ್ತಿದ್ದಾಳೆ ಎಂಬ ಅಸಮಾಧಾನ ಹೊಂದಿದ್ದ ಪತಿಯೊಬ್ಬ ಆಕೆಗೆ ಬುದ್ಧಿ ಕಲಿಸಲು ಹೋಗಿ ಈಗ ಜೈಲು ಪಾಲಾಗಿದ್ದಾನೆ. ಇದರ ಡಿಟೇಲ್ ಸ್ಟೋರಿ ಇಲ್ಲಿದೆ.ಮುಂಬೈನ ಅಂದೇರೀ ವಾಸಿ 30 ವರ್ಷದ ಅಮೀರ್ ವೋಹ್ರಾ, ಫೆಬ್ರವರಿ 22ರಂದು ಅಗ್ರಿಪಾಡ ಪೊಲೀಸ್ ಠಾಣೆಗೆ ತೆರಳಿ ತಾನು ತಂದೆಯೊಂದಿಗೆ 44 ಲಕ್ಷ ರೂಪಾಯಿಗಳನ್ನು ತರುವಾಗ ಕೆಲ ದುಷ್ಕರ್ಮಿಗಳು ಅಡ್ಡಗಟ್ಟಿ ಹಣ ದೋಚಿರುವುದಾಗಿ ದೂರು […]
#Newupdates #Kannadanews #Latestnews #Updates #Speednews #Kannadanews
ತಾಂಜೇನಿಯಾ ಮೂಲದ Instagram ಇನ್ ಫ್ಲುಯೆನ್ಸರ್ ಕಿಲಿ ಪಾಲ್ ನಂತರ ಮತ್ತೊಬ್ಬರು ಭಾರತೀಯರ ಹೃದಯ ಗೆದ್ದಿದ್ದಾರೆ.ಅಂದ ಹಾಗೆ, ನೆಟಿಜನ್ಗಳು ತಮ್ಮ ಸಾಮಾಜಿಕ ಮಾಧ್ಯಮ ಫೀಡ್ ಗೆ ತಾಂಜೇನಿಯಾದ ಇನ್ನೊಬ್ಬ ವ್ಯಕ್ತಿಯನ್ನು ಕಂಡುಕೊಂಡಿದ್ದಾರೆ. ಸ್ನೈಪರ್ ಓಲೆ ಸೈಟ್ಲುನ ರೀಲ್ಗಳು ಅನೇಕ ಭಾರತೀಯರು ಸೇರಿದಂತೆ Instagram ನಲ್ಲಿ ವೀಕ್ಷಕರ ಮೆಚ್ಚುಗೆ ಪಡೆದಿವೆ.ಕಿಲಿ ಪಾಲ್ ಮತ್ತು ಅವರ ಸಹೋದರಿ ನೀಮಾ ಅವರಂತೆಯೇ ಕಂಟೆಂಟ್ ಅನ್ನು ರಚಿಸುವ ತಾಂಜೇನಿಯಾದವರಾದ ಸೈಟ್ಲು ಅವರು ಇತ್ತೀಚೆಗೆ Instagram ರೀಲ್ […]
ಇಂದು ಫೆಬ್ರವರಿ ತಿಂಗಳ ಅಂತಿಮ ಶುಕ್ರವಾರ. ಪ್ರತಿ ಶುಕ್ರವಾರದಂತೆ ಈ ಶುಕ್ರವಾರವೂ ಸಹ ವಿವಿಧ ಭಾಷೆಗಳ ಹಲವಾರು ಸಿನಿಮಾಗಳು ತೆರೆಗೆ ಬಂದಿವೆ. ಗೌಳಿ ಹಾಗೂ ಸೌತ್ ಇಂಡಿಯನ್ ಹೀರೊ ಸೇರಿದಂತೆ ಕನ್ನಡದ ಬರೋಬ್ಬರಿ ಒಂಬತ್ತು ಚಿತ್ರಗಳು ಇಂದು ತೆರೆಗೆ ಬಂದಿವೆ. ಬಾಲಿವುಡ್ನಲ್ಲಿ ಅಕ್ಷಯ್ ಕುಮಾರ್ ನಟನೆಯ ಸೆಲ್ಫಿ ಚಿತ್ರ ತೆರೆಗೆ ಬಂದಿದೆ.ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಕರ್ನಾಟಕದಲ್ಲಿ ಇಂದು ಕನ್ನಡಮಾತ್ರವಲ್ಲದೇ ಪರ ಭಾಷಾ ಚಿತ್ರಗಳು […]
ಮಾರ್ಟಿನ್ ಕನ್ನಡ ಸಿನಿಮಾದಲ್ಲಿ ನಟಿಸಿರುವ ಆ ಇಬ್ಬರು ದೈತ್ಯರು ಯಾರು? ಅವರ ಹಿನ್ನೆಲೆ ಏನು? ಅವರ ವ್ಯಾಯಾಮ ಮತ್ತು ಆಹಾರ ಕ್ರಮವೇನು?ನಟನೆಯ ಮಾರ್ಟಿನ್ ಸಿನಿಮಾ ಟೀಸರ್ ನಿನ್ನೆಯಷ್ಟೆ (ಫೆಬ್ರವರಿ 23) ಬಿಡುಗಡೆ ಆಗಿದೆ.ಟೀಸರ್ ಅನ್ನು ಸಿನಿ ಪ್ರೇಮಿಗಳು ಇಷ್ಟಪಟ್ಟಿದ್ದು, ಒಂದೇ ದಿನದಲ್ಲಿ ಎರಡು ಕೋಟಿಗೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ.ಟೀಸರ್ನಲ್ಲಿನ ಭರ್ಜರಿ ಆಕ್ಷನ್, ಧ್ರುವ ಸರ್ಜಾರ ಮಾಸ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದರಲ್ಲಿಯೂ ಟೀಸರ್ನ ಅಂತ್ಯದಲ್ಲಿ ಧ್ರುವ ಸರ್ಜಾ […]
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದಾರೆ. ಇನ್ನು ಮನೆಯಲ್ಲೇ ಇರುವ ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಹಿರಿಯ ನಟ ಶ್ರೀನಾಥ್ ಹಾಗೂ ತಂಡ ಭೇಟಿ ನೀಡಿದ್ದು, ಈ ಸಂದರ್ಭದ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆಶ್ರೀನಾಥ್ ಜತೆ ಮತ್ತಿತರ ಹಿರಿಯ ಕಲಾವಿದರಾದ ನಟಿ ಪದ್ಮಾ ವಾಸಂತಿ, ನಟ ಸುಂದರ್ ರಾಜ್ ಹಾಗೂ ಪ್ರಮಿಳಾ ಜೋಷಯಿ ಅವರು ಲೀಲಾವತಿ […]
ಪ್ರಜಾಪ್ರಭುತ್ವದ ಮಹತ್ವ ಸಾರಲಿರುವ “ಪ್ರಜಾರಾಜ್ಯ” ಚಿತ್ರ ಇದೇ ಮಾರ್ಚ್ 3 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಈ ಚಿತ್ರ ಹಾಡು ಹಾಗೂ ಟ್ರೇಲರ್ ಮೂಲಕ ಜನರ ಮನ ಗೆದ್ದಿದೆ. ಉತ್ತಮ ಸಂದೇಶವಿರುವ ಚಿತ್ರ ಕೂಡ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂಬ ಭರವಸೆಯಿದೆ. ಇತ್ತೀಚೆಗೆ “ಪ್ರಜಾರಾಜ್ಯ” ಚಿತ್ರಕ್ಕಾಗಿ ಸಂದೀಪ್ ಹೆಗ್ಗದ್ದೆ ಬರೆದಿರುವ “ಏನಾಗಲಿ ಎದ್ದೇಳು” ಎಂಬ ಹಾಡು ವಿಜಯ್ ಪ್ರಕಾಶ್ ಅವರ ಕಂಠಸಿರಿಯಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಇತ್ತೀಚಿಗೆ ಜಿ.ಟಿ ಮಾಲ್ ನಲ್ಲಿ ಡಾ||ಪೂಜಾ ಪ್ರಶಾಂತ್ […]
ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತು ಯಾವ ಭಾಷೆಯ ಚಿತ್ರಗಳನ್ನು ಬೇಕಿದ್ದರೂ ನೋಡಬಹುದು. ಈ ಕಾಲದಲ್ಲೂ ಅಕ್ಷಯ್ ಕುಮಾರ್ ಅವರು ಬಿಟ್ಟೂ ಬಿಡದೆ ರಿಮೇಕ್ ತಂತ್ರದ ಮೊರೆ ಹೋಗುತ್ತಿದ್ದಾರೆ.ನಟ ಅಕ್ಷಯ್ ಕುಮಾರ್ ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದ್ದ ಕಾಲ ಒಂದಿತ್ತು.ಆದರೆ, ಈಗ ಕಾಲ ಬಲಾಗಿದೆ. ಅವರು ಹೋದಲ್ಲೆಲ್ಲ ಸೋಲು ಕಾಣುತ್ತಿದ್ದಾರೆ. ಸಾಲು ಸಾಲು ರಿಮೇಕ್ ಮಾಡಿ ಫ್ಲಾಪ್ ಹೊಡಿಸಿಕೊಳ್ಳುತ್ತಿದ್ದಾರೆ. ಅವರ ನಟನೆಯ ‘ಸೆಲ್ಫೀ’ ಚಿತ್ರ ಸೋಲಿನ ರುಚಿ ಕಂಡಿದೆ. ಈ ಸಿನಿಮಾದ […]
ತಮಿಳಿನ ಖ್ಯಾತ ನಟ ಸಿಲಂಬರಸನ್ ಅಲಿಯಾಸ್ ಸಿಂಭು ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಸಿಂಭು ಶ್ರೀಲಂಕಾದಈಗಾಗಲೇ ಸಿಂಭು ಅವರ ಕಿರಿಯ ಸಹೋದರಿ ಮತ್ತು ಸಹೋದರನಿಗೆ ಮದುವೆ ಆಗಿದೆ. ಆದರೂ, ಕೂಡ ಸಿಂಭು ಮದುವೆ ಬಗ್ಗೆ ಯೋಚಿಸಿರಲಿಲ್ಲ. ಈ ಕುರಿತು ಯಾರೇ ಪ್ರಶ್ನೆ ಮಾಡಿದರೂ, ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದರು. ಆದಷ್ಟು ಮದುವೆ ಕುರಿತಾಗಿ ಚರ್ಚೆ ಆಗದಂತೆ ನೋಡಿಕೊಳ್ಳುತ್ತಿದ್ದರು. ಇದೀಗ ಮದುವೆ ಆಗಲು ಸಿಂಬು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.42 ವರ್ಷ ವಯಸ್ಸಿನ ಸಿಂಭು, ತಮಿಳು […]
ಮೊನ್ನೆಯಷ್ಟೇ ಧ್ರುವ ಸರ್ಜಾ ನಟನೆಯ ಮಾರ್ಟೀನ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಟೀಸರ್ ಅನ್ನು ಟಿಕೆಟ್ ಖರೀದಿಸಿ ನೋಡುವಂತಹ ವ್ಯವಸ್ಥೆಯನ್ನು ಚಿತ್ರತಂಡ ಮಾಡಿತ್ತು. ಅದರಿಂದ ಬಂದ ಹಣವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸುವುದಾಗಿ ನಿರ್ದೇಶಕ ಎ.ಪಿ.ಅರ್ಜುನ್ ತಿಳಿಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿರುವ ನಿರ್ದೇಶಕ ಎ.ಪಿ.ಅರ್ಜುನ್ ಟೀಸರ್ ನಿಂದ ಬಂದ ಹಣವನ್ನು ಗೋಶಾಲೆಗಳಿಗೆ ನೀಡುವುದಾಗಿ ತಿಳಿಸಿದ್ದಾರೆ.ಕನ್ನಡದ ಮತ್ತೊಂದು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಖತ್ ಸದ್ದು […]
ಸಾಮಾಜಿಕ ಜಾಲತಾಣದಲ್ಲಿ ತನಗೆ ಪರಿಚಯವಾಗಿದ್ದ ಯುವಕನನ್ನು ಪ್ರೀತಿಸುತ್ತಿದ್ದ ಪಾಕಿಸ್ತಾನದ ಯುವತಿ ಆತನೊಂದಿಗೆ ಮದುವೆಯಾಗಲು ನೇಪಾಳದ ಮೂಲಕ ಭಾರತ ಪ್ರವೇಶಿಸಿದ್ದಳು. ಬಳಿಕ ತಾನು ಮೆಚ್ಚಿದ ಯುವಕನೊಂದಿಗೆ ಮದುವೆಯಾಗಿ ಬೆಂಗಳೂರಿನಲ್ಲಿ ಸಂಸಾರವನ್ನೂ ನಡೆಸುತ್ತಿದ್ದಳು.ಉತ್ತರಪ್ರದೇಶ ಮೂಲದ ಮುಲಾಯಂ ಸಿಂಗ್ ಎಂಬಾತ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಪಾಕಿಸ್ತಾನದ ಯುವತಿ ಇಕ್ರಾ ಜೀವನಿ ಬಳಿ ತನ್ನ ಹೆಸರನ್ನು ಸಮೀರ್ ಅನ್ಸಾರಿ ಎಂದು ಹೇಳಿಕೊಂಡಿದ್ದಲ್ಲದೆ ತಾನು ಸಾಫ್ಟ್ ವೇರ್ ಇಂಜಿನಿಯರ್ ಎಂದು ಹೇಳಿದ್ದ ಎನ್ನಲಾಗಿದೆ.ಪಾಕಿಸ್ತಾನದ […]