ಆರ್ಯನ್ ಖಾನ್ ಹಾಗೂ ಇತರ ಬಂಧಿತರನ್ನು ಅಡಿಷನಲ್ ಚೀಫ್ ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್ ಆರ್‌.ಕೆ.ರಾಜೇಭೋಸ್ಲೆ ಎದುರು ಹಾಜರುಪಡಿಸಲಾಗಿದ್ದು. ಬಂಧಿತರು ಹಾಗೂ ಡ್ರಗ್ಸ್ ಪೆಡ್ಲರ್‌ಗಳು, ಸಪ್ಲೈಯರ್ಸ್‌ಗಳ ನಡುವೆ ನಿಯಮಿತ ಸಂಭಾಷಣೆ ನಡೆದಿರುವುದು ವಾಟ್ಸ್‌ಆಪ್‌ ಚಾಟ್‌ನಿಂದ ಬಹಿರಂಗವಾಗಿದೆಯಾದ್ದರಿಂದ ಹೆಚ್ಚಿನ ತನಿಖೆ ಅವಶ್ಯಕತೆ ಇದೆ ಎಂದು ಎನ್‌ಸಿಬಿ ನ್ಯಾಯಾಲಯದಲ್ಲಿ ಹೇಳಿ ಅಕ್ಟೋಬರ್ 05ರವರೆಗೆ ಬಂಧಿತರನ್ನು ಎನ್‌ಸಿಬಿ ವಶಕ್ಕೆ ನೀಡಬೇಕೆಂದು ಮನವಿ ಮಾಡಿದೆ ಎನ್‌ಸಿಬಿ ತಂಡ. ಎನ್ಸಿಬಿ ಅಧಿಕಾರಿಗಳು ಮುಂಬೈ ಮತ್ತು ನವಿ ಮುಂಬೈನಲ್ಲಿ ಮತ್ತಷ್ಟು ದಾಳಿಗಳನ್ನು […]

ತಾನು ಪ್ರೀತಿಸಿದ ಹುಡುಗಿಗೆ ಬೇರೆ ಮದುವೆಗೆ ಸಿದ್ಧತೆ ನಡೆಸಿದ ಹಿನ್ನೆಲೆಯಲ್ಲಿ ಮನನೊಂದ ಪ್ರಿಯಕರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಯತ್ನ ನಡೆಸಿದ ಘಟನೆ, ಚಿಕ್ಕಮಗಳೂರು ಜಿಲ್ಲೇಯ ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿ ನಡೆದಿದೆ. ಬಣಕಲ್ ನ ರಾಘವೇಂದ್ರ ಆತ್ಮಹತ್ಯೆಗೆ ಯತ್ನಿಸಿದ ಯುವಕ. ರಾಘವೇಂದ್ರನು ಯುವತಿಯನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ ಯುವತಿಯ ಪೋಷಕರು ಯುವತಿಗೆ ಬೇರೆ ಯುವಕನೊಂದಿಗೆ ಮದುವೆ ಮಾಡಲು ಸಿದ್ದತೆ ನಡೆಸಿದ್ದರು.ಈ ವಿಚಾರ ತಿಳಿದು ಮನನೊಂದ ರಾಘವೇಂದ್ರ […]

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕಾಫಿ ತೋಟಗಳಲ್ಲಿ ಹೆಚ್ಚುತ್ತಿರುವ ಕಾಡಾನೆಗಳ ಹಾವಳಿಯಿಂದ ಕೂಲಿ ಕಾರ್ಮಿಕರು ತೋಟದಲ್ಲಿ ಕೆಲಸ ಮಾಡಲು ಭಯಪಡುತ್ತಿದ್ದಾರೆ. ಕಳೆದ ವಾರ ವ್ಯಕ್ತಿಯ ಮೇಲೆ ಆನೆ ದಾಳಿಮಾಡಿದ್ದು, ಇಂದು ಮತ್ತೆ ತೋಟದಲ್ಲಿ ಆನೆಗಳ ಗುಂಪು ಓಡಾಟ ಜಾಸ್ತಿಯಾಗಿದೆ. ಕೂಲಿಕಾರ್ಮಿಕರಿಗೆ ಅರಣ್ಯ ಇಲಾಖೆಯವರು ಮುಂಜಾಗೃತ ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಫಿ ತೋಟದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಚಲಿಸುತ್ತಿದ್ದ ಟ್ರಾಕ್ಟರ್ ಪಲ್ಟಿ, ಓರ್ವ ಸಾವು

ಚಲಿಸುತ್ತಿದ್ದ ಟ್ರಾಕ್ಟರ್ ನಿಯಂತ್ರಣ ತಪ್ಪಿ ಪಾದಾಚಾರಿ ಮೇಲೆ ಮುಗುಚಿಬಿದ್ದು ಪಲ್ಟಿ ಹೊಡೆದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿಯ ದಾಸೇನಹಳ್ಳಿಯಲ್ಲಿ ನಡೆದಿದೆ. ಪಾದಾಚಾರಿ 16 ವರ್ಷದ ವಿರೇಶ್ ಎಂದು ತಿಳಿದು ಬಂದಿದ್ದು. ಸ್ಥಳದಲ್ಲೇ ಸಾವನಪ್ಪಿದ್ದಾನೆ. ಬಡವನಹಳ್ಳಿಯ ಪಿ.ಎಸ್.ಐ ಹನುಮಂತರಾಯಪ್ಪ ಭೇಟಿ ನೀಡಿದ್ದು ,ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿ,ಓರ್ವ ಸಾವು..

ಹುಣಸೇಹಣ್ಣು ತುಂಬಿಕೊಂಡು ಹೋಗ್ತಿದ್ದ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಹೊಡೆದಿರುವ ಘಟನೆ ಶಿರಾ ತಾಲ್ಲೂಕಿನ ಬಡೇನಹಳ್ಳಿ ತಿರುವಿನಲ್ಲಿ ನಡೆದಿದೆ. ಶಿರಾದಿಂದ ಅಮಾರಪುರಕ್ಕೆ ಹೋಗ್ತಿದ್ದ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ವಾಹನ ಪಲ್ಟಿಹೊಡೆದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಐವರಿಗೆ ಗಾಯವಾಗಿ ಶಿರಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪಟ್ಟನಾಯಕಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ:KSRTC ಬಸ್ ಚಾಲಕನ ಅಜಾಗೃತೆಗೆ ಮಹಿಳೆ ಬಲಿ

ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಅಜಾಗೃತೆಯಿಂದ ರಸ್ತೆ ದಾಟುತ್ತಿದ್ದ 65 ವರ್ಷದ ಮಹಿಳೆ ಸಾವನಪ್ಪಿದ್ದು. ಚಿಕ್ಕಬಳ್ಳಾಪುರ ಜಿಲ್ಲೆಯ ಕೊಡದವಾಡಿ ಗ್ರಾಮದ ಗೇಟ್ ಬಳಿ ಈ ಘಟನೆ ಸಂಭವಿಸಿದೆ. KSRTC ಚಾಲಕ ಹೂವಿನ ವ್ಯಾಪಾರಿಯಾಗಿದ್ದ ಮೃತ ಮಹಿಳೆ ವಸಂತಮ್ಮನ ಮೇಲೆ ಬಸ್ ಹತ್ತಿಸಿ ಬಸ್ ಸಮೇತ ಪರಾರಿಯಾಗಿದ್ದಾನೆ . ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ತನಿಖೆ ನಡೆಯುತ್ತಿದೆ. ಇದನ್ನೂ ಓದಿ:ನಂದಿಬೆಟ್ಟ ಬೆಂಕಿ

ಚಿಕ್ಕಬಳ್ಳಾಪುರದ ಪ್ರಸಿದ್ಧ ನಂದಿಗಿರಿಧಾಮದಲ್ಲಿ ಯಾರೋ ದುಷ್ಕರ್ಮಿಗಳು ಮಾಡಿದ ಕೃತ್ಯಕ್ಕೆ ಅರ್ಧ ನಂದಿಬೆಟ್ಟ ಬೆಂಕಿಗಾಹುತಿಯಾಗಿದೆ. ಬೆಂಕಿ ಆರಿಸಲು ಬೆಟ್ಟದ ಸಿಬ್ಬಂಧಿಗಳು ಹರಸಾಹಸಪಟ್ಟರು ಈ ಬೆಂಕಿಯ ಕೆನ್ನಾಲಿಗೆಗೆ ಅರ್ಧ ಬೆಟ್ಟ ಸುಟ್ಟುಹೋಗಿ ಅಲ್ಲಿದ್ದಂತಹ ನೀಲಗಿರಿ ತೋಪು ಭಾಗಶಹ ಸುಟ್ಟುಹೋಗಿದೆ… ಅಲ್ಲಿದ್ದಂತಹ ನವಾನರ ಸೈನ್ಯ ಬೆಂಕಿಗೆ ಹೆದರಿ ಗಾಬರಿಯಾಗಿ ಹಳ್ಳಿಗಳ ಕಡೆ ಮುಖ ಮಾಡಿವೆ. ಇಷ್ಟೆಲ್ಲಾ ಆದರೂ ಅಗ್ನಿಶಾಮಕದಳಕ್ಕೆ ವಿಚಾರ ಹೋದರೂ ಸಹ ಭಾರದ ಅಗ್ನಿಶಾಮಕದಳದವರು. ಇದನ್ನೂ ಓದಿ:ಸಾವಿನ ಜೊತೆಯಾದ ತಂದೆ ಮಗು  

10 ತಿಂಗಳ ಮಗುವಿನ ಜೊತೆಗೆ ತಂದೆ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಯಲ್ಲಿ ನಡೆದಿದೆ. ತಾಲೂಕಿನ ಬ್ರಾಹ್ಮಣರ ದಿನ್ನೆ ಗ್ರಾಮದ ರವಿ(35) ಎಂಬ ವ್ಯಕ್ತಿಯೇ ಈ ರೀತಿ ಸಾವನ್ನಪ್ಪಿದ್ದಾರೆ. ಇವರು ತನ್ನ 10 ತಿಂಗಳ ಕುಸುಮಗಂಗ ಎಂಬ ಮಗುವನ್ನು ಹೊತ್ತುಕೊಂಡು ಗಡದಾಸನಹಳ್ಳಿಯ ಮಂಜುನಾಥ ಎಂಬುವವರಿಗೆ ಸೇರಿದ್ದ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ರವಿಯ ಮೊದಲ ಪತ್ನಿ ಕೂಡ ಮೂರು […]

ಅಗ್ನಿ ಅವಘಡದಿಂದ ಪಂಚರ್ ಅಂಗಡಿ ಸುಟ್ಟು ಕರಕಲಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕೋಲಾರ ತಾಲೂಕಿನ ಮುಳವಾಡ ಕ್ರಾಸ್ ಬಳಿ ನಡೆದಿದೆ. ಮಂಜು ರಮೇಶ್ ಮುಳಸಾವಳಗಿ ಎಂಬುವರ ಸೇರಿದ ಅಂಗಡಿಯಾಗಿದ್ದು, ಅಂದಾಜು 4 ಲಕ್ಷ ರೂಪಾಯಿಗಳು ನಷ್ಟವಾಗಿದೆ. ಯಾರೋ ಕಿಡಿಗೇಡಿಗಳು ಬೆಂಕಿಹಚ್ಚಿರ ಬಹುದ ಎಂಬುವುದು ಸಂಶಯ ಶಂಕಿತವಾಗಿದೆ. ಕೂಡಲೇ ಅಧಿಕಾರಿಗಳು ಪರಿಶೀಲನೆ ನೀಡಿದ್ದಾರೆ ಈ ಪ್ರಕರಣವು ಮನಗೂಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ. ಇದನ್ನೂ ಓದಿ:FDA ಪರೀಕ್ಷೆಯಲ್ಲಿ ಬಾರಿ ದೊಡ್ಡ ಗೋಲ್ಮಾಲ್

ಇಂದು ನಡೆದ FDA ಪರೀಕ್ಷೆಯಲ್ಲಿ ಬಾರಿ ದೊಡ್ಡ ಗೋಲ್ಮಾಲ್ ಆಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಪ್ರಶ್ನೆ ಪತ್ರಿಕೆ ಕೊಡುವುದಕ್ಕಿಂತ ಮುಂಚೆ ಪ್ರಶ್ನೆಪತ್ರಿಕೆಯ ಉತ್ತರಗಳು ಮೊಬೈಲ್ ವಾಟ್ಸಪ್ ನಲ್ಲಿ ಹರಿದಾಡುತ್ತಿವೆ. ಈ ಹಿಂದೆ ಪ್ರಶ್ನೆಪತ್ರಿಕೆ ಹಲವಾರು ಜನರು ಓಪನ್ ಮಾಡಿದರು. ಇಷ್ಟಾದರೂ ಕೂಡ ಸರ್ಕಾರ ಯಾವುದೇ ನಿಯಮಗಳನ್ನು ಮಾಡುತ್ತಿಲ್ಲ ಹೀಗಾದರೆ ಹಗಲು-ರಾತ್ರಿ ಓದಿದ ವಿದ್ಯಾರ್ಥಿಗಳ ಪಾಡೇನು ಇದನ್ನೂ ಓದಿ:ನಮಗೆ ಅಮೆರಿಕ ಕೊಡಬೇಕು 15 ಲಕ್ಷ ಕೋಟಿ.!

Advertisement

Wordpress Social Share Plugin powered by Ultimatelysocial