ವಿಶ್ವದ ದೊಡ್ಡ ಆರ್ಥಿಕತೆಯ ದೇಶವಾದ ಅಮೇರಿಕ ಸಹ ಸಾಲದ ಹೊರೆಯಿಂದ ತತ್ತರಿಸಿದೆ. ಭಾರತಕ್ಕೆ ಸುಮಾರು 15 ಲಕ್ಷಕೋಟಿ ಸಾಲದ ಬಾಕಿಯನ್ನು ಉಳಿಸಿಕೊಂಡಿರುವ ಅಮೆರಿಕ ಇದೂ ಸೇರಿದಂತೆ ಚೀನಾ, ಬ್ರೆಜಿಲ್, ಜಪಾನ್ 29 ಲಕ್ಷ ಕೋಟಿ ಡಾಲರ್ ಗೆ ಸಾಲ ಮುಟ್ಟಿದೆ ಎಂದು ಅಮೆರಿಕ ಶಾಸನಸಭೆಯ ಪ್ರಮುಖ ಸದಸ್ಯ ಅಲೆಕ್ಸ್ ಮೂನಿ ಹೇಳಿದ್ದಾರೆ.  2020 ರಲ್ಲಿ ಅಮೆರಿಕದ ರಾಷ್ಟ್ರೀಯ ಸಾಲವು 23.4 ಲಕ್ಷ ಕೋಟಿ ನಷ್ಟಕ್ಕೇರಿತು. ಸಾಲವನ್ನು ನಾಗರಿಕರಿಗೆ ಹಂಚಿದರೆ ತಲಾ […]

ಗಾಂಜಾ ಗುಂಗಿನಲ್ಲೇ ತೆಲಾಡುತ್ತಿರುವ ನೂರಾರು ಸಾದುಗಳು.. ಭಕ್ತಿಯಿಂದ ಸಾದುಗಳಿಗೆ ಗಾಂಜಾ ಹಂಚುತ್ತಿರುವ ಭಕ್ತರು.. ಇನ್ನೋಂದು ಕಡೆ ಕೈಲಾಸ ಕಟ್ಟಿಯಲ್ಲಿ ಸಾದುಗಳಿಂದ ದಮ್ಮಾರೋ ದಮ್ಮ..ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಸುಪ್ರಸಿದ್ಧ ಮೌನೇಶ್ವರ ಜಾತ್ರೆಯಲ್ಲಿ.. ಕಳೆದ ದಶಮಾನಗಳಿಂದ ನಡೆಯುತ್ತಿರುವ ಹೈದ್ರಾಬಾದ್ ಕರ್ನಾಟಕ ಭಾಗದಲ್ಲೇ ಸುಪ್ರಸಿದ್ಧ ಮೌನೇಶ್ವರ ಜಾತ್ರೆ ಅತ್ಯಂತ ಅದ್ದೂರಿಯಾಗಿ ನಡೆಯುತ್ತೆ.. ಇನ್ನು ಐದು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಗಾಂಜಾ ಗಮ್ಮತ್ತು ಜೋರಾಗಿರುತ್ತೆ.. […]

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾರಿಹಳ್ಳಿ ಅವರ ಸಂಬಂಧಿ ಮನೋಜ್ ಎಂಬುವರು ಮಚ್ಚಿನಿಂದ ಕುತ್ತಿಗೆಯ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ. ಕುರ್ಚಿ ಮೇಲೆ ಕುಳಿತುಕೊಂಡು ನೋಟರಿ ಮಾಡುತ್ತಿದ್ದಾಗ ತಾರಿಹಳ್ಳಿ ಅವರಿಗೆ ಏಕಾಏಕಿ ಬಂದು ಹೊಡೆದಿದ್ದಾನೆ. ಅವರ ದೇಹರಕ್ತಸಿಕ್ತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಿಂದ ನ್ಯಾಯಾಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗುಂಪುಗೂಡಿದ ಜನರನ್ನು ಪೊಲೀಸರು ಅಲ್ಲಿಂದ ಕಳುಹಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದರು. ಕೊಲೆ ಮಾಡಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ:ಪೊಲೀಸ್‌ […]

ಕೆಆರ್‌ಎಸ್ ಡ್ಯಾಂ ಮೇಲೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿದರು ಯುವಕನೋರ್ವ ಪೊಲೀಸ್ ಜೀಪ್ ನಲ್ಲಿ ಕುಳಿತು ಜಾಲಿ ರೈಡ್ ಮಾಡಿದ್ದಾನೆ. ಅಲ್ಲದೆ ಯುವಕ ಆಟಾಟೋಪವನ್ನು ಪೊಲೀಸಪ್ಪನೇ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಡ್ಯಾಂನ ಭದ್ರತೆ ನೋಡಿಕೊಳ್ಳಬೇಕಿದ್ದ ಅಧಿಕಾರಿಯೇ ನಿಯಮ ಉಲ್ಲಂಘಿಸಿ ಸರ್ಕಾರಿ ವಾಹನದಲ್ಲಿ ಕುಳಿತು ಯುವಕ ಮೊಬೈಲ್ ಕ್ಯಾಮರಾಗೂ ಫೋಸ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕವಾಗಿ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ:ದಾವಣಗೆರೆ ಎಕ್ಸ್ಪ್ರೆಸ್ ಕ್ರಿಕೆಟ್ಗೆ ವಿದಾಯ  

ದಾವಣಗೆರೆ ಎಕ್ಸ್ಪ್ರೆಸ್’ ಎಂದೇ ಖ್ಯಾತಿ ಹೊಂದಿರುವ ಟೀಮ್ ಇಂಡಿಯಾ ಮತ್ತು ಕರ್ನಾಟಕದ ವೇಗದ ಬೌಲರ್ ವಿನಯ್ ಕುಮಾರ್ ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳಿದ್ದಾರೆ. ಭಾರತ ತಂಡದ ಪರ ಒಂದು ಟೆಸ್ಟ್, 31 ಏಕದಿನ, 9 ಟಿಟ್ವೆಂಟಿ ಪಂದ್ಯವನ್ನಾಡಿರುವ ವಿನಯ್ ಕುಮಾರ್ ಒಟ್ಟಾರೆ 49ವಿಕೆಟ್ ಪಡೆದುಕೊಂಡಿದ್ದಾರೆ. ಐಪಿಲ್ ನಲ್ಲೂ ಕೂಡ ಮಿಂಚಿರುವ ವಿನಯ್ ಕುಮಾರ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ನಾಯಕನಾಗಿ ಬ್ಯಾಕ್ ಟು ಬ್ಯಾಕ್ ಟ್ರೋಫಿಗಳನ್ನು ಗೆದ್ದು […]

ಪತ್ನಿಯು 2 ತಿಂಗಳ ಹಸುಗೂಸ್ಸನ್ನು ಕೈಯಲ್ಲಿ ಎತ್ತಿಕೊಂಡಿರುವಾಗಲೇ ಪತಿಯಿಂದ ಚಾಕು ಇರಿತ. ಹುಬ್ಬಳ್ಳಿ ನಗರದ ಸೆಟಲ್ಮೆಂಟ್ ಪ್ರದೇಶದ ಗಂಗಾಧರ್ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಪ್ರತಿದಿನ ಹಣಕಾಸಿನ ವಿಷಯವಾಗಿ ನಡೆಯುತ್ತಿದ್ದ ಜಗಳ ವಿಕೋಪಕ್ಕೆ ಹೋಗಿ ಪತಿ ಸುನಿಲ್ ಎಂಬಾತನು ಪತ್ನಿ ಸಂಗೀತಾಳನ್ನು ಚಾಕುವಿಂದ ಇರಿದು ಪರಾರಿಯಾಗಿದ್ದಾನೆ. ಇನ್ನು ಈ ಪ್ರಕರಣವು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸದ್ಯ ಪತ್ನಿಯ ಸ್ಥಿತಿ ಚಿಂತಾಜನಕವಾಗಿದ್ದು ಮಗುವನ್ನು ಸಂಬಂಧಿಕರು ಪೋಶಿಸುತ್ತಿದ್ದಾರೆ. ಇದನ್ನೂ ಓದಿ:ವೈದ್ಯರ ನಿರ್ಲಕ್ಷ್ಯ […]

ವೈದ್ಯರ ನಿರ್ಲ್ಯಕ್ಷದಿಂದ  ಹೆರಿಗೆಗೆಂದು ಬಂದಿದ್ದ ಗರ್ಭಿಣಿ ಮತ್ತು ಮಗು  ಸಾವನಾಪ್ಪಿರುವ ಘಟನೆ  ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ನಿಡಗುರ್ಕಿ ಗ್ರಾಮದ ಅನುಷಾ ನಿನ್ನೆ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದು,  ಸರಿಯಾಗಿ ಚಿಕಿತ್ಸೆ ನೀಡಿಲ್ಲ .ಈ ಹಿನ್ನೆಲೆ ವೈದ್ಯರ ನಿರ್ಲ್ಯಕ್ಷತನದಿಂದ   ತಾಯಿ ಮಗು ಸಾವನಾಪ್ಪಿದರೆಂದು ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಎಸ್ಪಿ ಜಾಹ್ನವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ […]

ಕಡಬ ತಾಲೂಕಿನ ನೆಲ್ಯಾಡಿಯ ಹೊಸಮಜಲು ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಮತ್ತು ಡೀಸೆಲ್ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಎರಡು ಟ್ಯಾಂಕರ್ ಗಳ ಮುಂಭಾಗ ನಜ್ಜುಗುಜ್ಜಾಗಿದೆ. ಗ್ಯಾಸ್ ಟ್ಯಾಂಕರ್ ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು. ಡೀಸೆಲ್ ಟ್ಯಾಂಕರ್ ಕೋಲಾರದಿಂದ ಮಂಗಳೂರು ಕಡೆಗೆ ಬರುತ್ತಿತ್ತು. ಹೊಸಮಜಲುವಿನಲ್ಲಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಗ್ಯಾಸ್ ಸೋರಿಕೆ ಆಗಿಲ್ಲ. ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ ಇದನ್ನೂ ಓದಿ:ವಿದ್ಯುತ್ ಟ್ರಾನ್ಸ್ ಫಾರ್ಮ್ ಗೆ ಆನೆ ಬಲಿ

ವಿದ್ಯುತ್ ಟ್ರಾನ್ಸ್‌ಫಾರ್ಮರ್ಸ್‌ ಗೆ ಡಿಕ್ಕಿ ಹೊಡೆದ ಆನೆ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ರಾಮನಗರದ ತುಂಬೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಹಾರ ಹರಸಿಕೊಂಡು ಬಂದಿದ್ದ ಕಾಡಾನೆ ದಾರಿಯಲ್ಲಿ ಟ್ರಾನ್ಸ್‌ಫಾರ್ಮರ್ಸ್‌ ಗಮನಿಸದೇ ಡಿಕ್ಕಿ ಹೊಡೆದ ಹಿನ್ನೆಲೆ ವಿದ್ಯುತ್ ಶಾಕ್ ನಿಂದ ಗಂಡಾನೆ ಸ್ಥಳದಲ್ಲೇ ಸಾವನಪ್ಪಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಸಂಸ್ಕಾರ ಮಾಡಲು ನಿರ್ಧಾರ ಕೈಗೊಂಡಿದ್ದಾರೆ. ಇದನ್ನೂ ಓದಿ:ಬೈಕ್ ಸವಾರ ಸ್ಥಳದಲ್ಲೇ ಸಾವು ಒರ್ವನಿಗೆ ಗಾಯ.!

ಬೈಕ್ ಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಡಿವಾಳ ಬಳಿ ನಡೆದಿದೆ. ಕಾಡದೇನಹಳ್ಳಿ ಗ್ರಾಮದ ಕೃಷ್ಣ(28) ಮೃತ ದುರ್ದೈವಿ ಇನ್ನು ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಘಟನೆ ಬಳಿಕ ಲಾರಿ ಡ್ರೈವರ್ ಸ್ಥಳದಲ್ಲೇ ಲಾರಿ ಬಿಟ್ಟು ಪರಾರಿಯಾಗಿದ್ದಾನೆ.ಈ ಬಗ್ಗೆ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಬಳ್ಳಾರಿ ಮುಖ್ಯ ರಸ್ತೆ ಶ್ರೀಪುರಂ ಜಂಕ್ಷನ್ […]

Advertisement

Wordpress Social Share Plugin powered by Ultimatelysocial