ಅಣ್ಣ ತಂದೆಗೆ ಸಮಾನ ಅಂತಾ ಹೇಳ್ತಾರೆ .ಆದರೆ ಇಲ್ಲೂಬ್ಬ ತಮ್ಮ ಸ್ವಂತ ಅಣ್ಣನನ್ನೆಕ್ರೂರವಾಗಿ ಚಾಕು ಎಸೆದು ಕೊಲೆ ಮಾಡಿದ ಘಟನೆ ಬೆಂಗಳೂರಿನ ಪುಲಕೇಶಿನಗರದಲ್ಲಿ ನಡೆದಿದೆ.ವಿಜಯ್ ಎನ್ನುವ ವ್ಯಕ್ತಿಯ ಅಣ್ಣನಾದ ಕಾರ್ತಿಕ್ ಕುಡಿದು ಬಂದು ಗಲಾಟೆ ಮಾಡಿದ್ದ.ಇನ್ನೂ ಮನೆಯಲ್ಲಿದ್ದ ವಿಜಯ್ ಪತ್ನಿಅಣ್ಣ ಕುಡಿದು ಬಂದಿರುವ ಘಟನೆ ತಮ್ಮನಿಗೆ ಹೇಳುತ್ತಾಳೆ .
ಹೆಂಡತಿ ಮಾತು ಹೇಳಿದ ತಕ್ಷಣ ಚಾಕು ಸಮೇತ ಬಂದ ವಿಜಯ್ ಅಣ್ಣ ಕಾರ್ತಿಕ್ಗೆ ಚಾಕುವಿನಿಂದ ಹೊಟ್ಟೆ ಮತ್ತು ಕುತ್ತಿಗೆ ಭಾಗಕ್ಕ ಚಾಕು ಇರಿದು ಸಂಪೂರ್ಣ ಹೊಟ್ಟೆ ಬಗೆದು ಹಾಕಿದ್ದಾನೆ. ತೀವ್ರ ರಕ್ತಸ್ರಾವದಿಂದ ಕಾರ್ತಿಕ್ ಸ್ಥಳದಲ್ಲೆ ಸಾವನಪ್ಪಿದ್ದಾನೆ. ಇತ್ತ ಅಣ್ಣ ಸಾಯುತ್ತಿದ್ದಂತೆ ವಿಜಯ್ ಎಸ್ಕೇಪ್ ಆಗಿದ್ದಾನೆ.
ಅಣ್ಣ ತಮ್ಮ ಅಂದ ಮೇಲೆ ಒಂದು ಮಾತು ಬರೋದು ಸಹಜ .ಆದರೆ ಕುಡಿದು ಗಲಾಟೆ ಮಾಡಿದ ಅನ್ನೂ ಕ್ಷುಲ್ಲಕ ಕಾರಣಕ್ಕೆ ಒಡಹುಟ್ಟಿದ ಅಣ್ಣನನ್ನೆ ಕೊಲೆ ಮಾಡಿದ್ದು ವಿಪರ್ಯಾಸ. ಸದ್ಯ ಈ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
https://play.google.com/store/apps/details?id=com.speed.newskannada