ಬೆಂಗಳೂರು : ಕೊರೊನಾ ಬೆನ್ನಲ್ಲೇ ಮತ್ತೊಂದು ಮಹಾಮಾರಿ ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆಯಾ ಎನ್ನುವ ಆತಂಕ ಇದೀಗ ಕಾಡುತ್ತಿದೆ. ಹೌದು ಶಂಕಿತ ಟೊಮೊಟೊ ವೈರಸ್ ರಾಜ್ಯದಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಕೇರಳ ಗಡಿಭಾಗ ಉಡುಪಿಯಲ್ಲಿ ವೈರಸ್ ಪತ್ತೆಯಾಗಿದೆ.ಇದೀಗ ಕೇರಳ ಗಡಿ ಪ್ರದೇಶದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.ಕರ್ನಾಟಕ ಗಡಿ ರಾಜ್ಯವಾದ ಕೇರಳದಲ್ಲಿ ಕಳೆದ ಕೆಲವು ಸಮಯಗಳಿಂದ ಮಕ್ಕಳಲ್ಲಿಟೊಮೊಟೋ ಜ್ವರಕಾಣಿಸಿಕೊಂಡಿದೆ. ಐದು ವರ್ಷದ ಕೆಳಗಿನ ಮಕ್ಕಳನ್ನು ಈ ಟೊಮೊಟೋ ಜ್ವರ ಬಾಧಿಸುತ್ತಿದೆ. ಇದೀಗ ರಾಜ್ಯದಲ್ಲಿಯೂ ಶಂಕಿತ ಟೊಮೊಟೊ ವೈರಸ್ ಪತ್ತೆಯಾಗಿದೆ ಎನ್ನಲಾಗಿದೆ. ಕೇರಳ ಗಡಿಭಾಗವಾದ ಉಡುಪಿ ಜಿಲ್ಲೆಯಲ್ಲಿ ಶಂಕಿತ ಟೊಮೊಟೊ ವೈರಸ್ ಪತ್ತೆಯಾಗಿದೆ ಎನ್ನಲಾಗಿದೆ.ಕೇರಳದಲ್ಲಿ ಕಂಡು ಬಂದ ಮಹಾಮಾರಿ ರಾಜ್ಯಕ್ಕೂ ಎಂಟ್ರಿಕೊಟ್ಟಿರುವ ಬಗ್ಗೆ ಇದೀಗ ಆತಂಕ ಹೆಚ್ಚಿಸುತ್ತಿದೆ. ಉಡುಪಿಯ ನಾಲ್ಕು ವರ್ಷ ಮಗುವಿನಲ್ಲಿ ಟೊಮೆಟೊ ವೈರೆಸ್ ಕಾಣಿಸಿಕೊಂಡಿದೆ ಎನ್ನಲಾಗಿದೆ. ಮಗುವಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣ ಇದೀಗ ಗಡಿಭಾಗ ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ. ವೈರಸ್ ಪತ್ತೆ ಬಗ್ಗೆ ಇದುವರೆಗೂ ಆರೋಗ್ಯ ಇಲಾಖೆ ಧೃಡೀಕರಿಸಿಲ್ಲ. ಹಿನ್ನೆಲೆ ರಾಜ್ಯದ ಗಡಿ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಉಡುಪಿ, ಮಂಗಳೂರು, ಕೊಡಗು, ಚಾಮರಾಜ ನಗರ ಜಿಲ್ಲೆಯಲ್ಲಿ ಆರೋಗ್ಯ ಅಧಿಕಾರಿಗಳು ಹದ್ದಿನ ಕಣ್ಣು
ಇರಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada