ರಾಜ್ಯಕ್ಕೆ ವಕ್ಕರಿಸಿತು ಮತ್ತೊಂದು ಮಹಾಮಾರಿ.! ಮಕ್ಕಳನ್ನು ಬಾಧಿಸುವ ಟೊಮೊಟೊ ಜ್ವರ ವೈರಸ್ ಪತ್ತೆ

ಬೆಂಗಳೂರು : ಕೊರೊನಾ ಬೆನ್ನಲ್ಲೇ ಮತ್ತೊಂದು ಮಹಾಮಾರಿ ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆಯಾ ಎನ್ನುವ ಆತಂಕ ಇದೀಗ ಕಾಡುತ್ತಿದೆ. ಹೌದು ಶಂಕಿತ ಟೊಮೊಟೊ ವೈರಸ್ ರಾಜ್ಯದಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಕೇರಳ ಗಡಿಭಾಗ ಉಡುಪಿಯಲ್ಲಿ ವೈರಸ್ ಪತ್ತೆಯಾಗಿದೆ.ಇದೀಗ ಕೇರಳ ಗಡಿ ಪ್ರದೇಶದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.ಕರ್ನಾಟಕ ಗಡಿ ರಾಜ್ಯವಾದ ಕೇರಳದಲ್ಲಿ ಕಳೆದ ಕೆಲವು ಸಮಯಗಳಿಂದ ಮಕ್ಕಳಲ್ಲಿಟೊಮೊಟೋ ಜ್ವರಕಾಣಿಸಿಕೊಂಡಿದೆ. ಐದು ವರ್ಷದ ಕೆಳಗಿನ ಮಕ್ಕಳನ್ನು ಈ ಟೊಮೊಟೋ ಜ್ವರ ಬಾಧಿಸುತ್ತಿದೆ. ಇದೀಗ ರಾಜ್ಯದಲ್ಲಿಯೂ ಶಂಕಿತ ಟೊಮೊಟೊ ವೈರಸ್ ಪತ್ತೆಯಾಗಿದೆ ಎನ್ನಲಾಗಿದೆ. ಕೇರಳ ಗಡಿಭಾಗವಾದ ಉಡುಪಿ ಜಿಲ್ಲೆಯಲ್ಲಿ ಶಂಕಿತ ಟೊಮೊಟೊ ವೈರಸ್ ಪತ್ತೆಯಾಗಿದೆ ಎನ್ನಲಾಗಿದೆ.ಕೇರಳದಲ್ಲಿ ಕಂಡು ಬಂದ ಮಹಾಮಾರಿ ರಾಜ್ಯಕ್ಕೂ ಎಂಟ್ರಿಕೊಟ್ಟಿರುವ ಬಗ್ಗೆ ಇದೀಗ ಆತಂಕ ಹೆಚ್ಚಿಸುತ್ತಿದೆ. ಉಡುಪಿಯ ನಾಲ್ಕು ವರ್ಷ ಮಗುವಿನಲ್ಲಿ ಟೊಮೆಟೊ ವೈರೆಸ್ ಕಾಣಿಸಿಕೊಂಡಿದೆ ಎನ್ನಲಾಗಿದೆ. ಮಗುವಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣ ಇದೀಗ ಗಡಿಭಾಗ ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ. ವೈರಸ್ ಪತ್ತೆ ಬಗ್ಗೆ ಇದುವರೆಗೂ ಆರೋಗ್ಯ ಇಲಾಖೆ ಧೃಡೀಕರಿಸಿಲ್ಲ. ಹಿನ್ನೆಲೆ ರಾಜ್ಯದ ಗಡಿ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಉಡುಪಿ, ಮಂಗಳೂರು, ಕೊಡಗು, ಚಾಮರಾಜ ನಗರ ಜಿಲ್ಲೆಯಲ್ಲಿ ಆರೋಗ್ಯ ಅಧಿಕಾರಿಗಳು ಹದ್ದಿನ ಕಣ್ಣು

 

ಇರಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿ ತಾಪಮಾನ 49 ಡಿಗ್ರಿ ಸೆಲ್ಸಿಯಸ್ ದಾಖಲು : 50 ಡಿಗ್ರಿ ದಾಟಿದರೆ ಏನಾಗುತ್ತೆ ಗೊತ್ತಾ?

Mon May 16 , 2022
ಸೇರಿದಂತೆ ಹಲವಾರು ದೇಶಗಳಲ್ಲಿ ಹೆಚ್ಚು ತಾಪಮಾನ ಉಂಟಾಗಿದೆ. ಕಳೆದ ವಾರ ಹಗುರದಿಂದ ಸಾಧಾರಣ ಮಳೆಯಾದರೂ ಭಾರತದ ಹವಾಮಾನ ಪರಿಸ್ಥಿತಿಗಳು ಕರುಣೆಯ ಲಕ್ಷಣವನ್ನು ತೋರಿಸಿಲ್ಲ. ಚಾಲ್ತಿಯಲ್ಲಿರುವ ಶಾಖದ ಪರಿಸ್ಥಿತಿಗಳೊಂದಿಗೆ, ತಾಪಮಾನ ಸುಮಾರು 50 ಡಿಗ್ರಿ ಸೆಲ್ಸಿಯಸ್ ಅನ್ನು ಮುಟ್ಟುವುದು ಸಾಮಾನ್ಯ ಸನ್ನಿವೇಶವಾಗಿದೆ ಮತ್ತು ಕುದಿಯುವ ತಾಪಮಾನದ ಅರ್ಧದಷ್ಟು 50 ಡಿಗ್ರಿ ಸೆಲ್ಸಿಯಸ್ ವಾಡಿಕೆಯಂತೆ ಮತ್ತು ಮಾನವ ದೇಹವು ಹೀಗಾದರೆ ಏನಾಗುತ್ತದೆ ಎಂದು ಹವಾಮಾನ ತಜ್ಞರು ಆಶ್ಚರ್ಯ ಪಡುವಂತೆ ಮಾಡಿದೆ.   ದೆಹಲಿ […]

Advertisement

Wordpress Social Share Plugin powered by Ultimatelysocial