ತುಮಕೂರು ನಗರದ ಭದ್ರಮ್ಮ ಸರ್ಕಲ್​ನಲ್ಲಿ ಯುವ ಕಾಂಗ್ರೆಸ್​ನಿಂದ ರಾಮನವಮಿ ಆಚರಣೆ !

 

ತುಮಕೂರು: ಇಂದು ಎಲ್ಲೆಡೆ ಶ್ರೀರಾಮ ನಾಮ ಸ್ಮರಣೆ ಮೊಳಗುತ್ತಿದೆ. ಹಿಂದೂಗಳು ರಾಮನಾಮ ಜಪಿಸುತ್ತಾ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಿದ್ದಾರೆ. ಆದರೆ ತುಮಕೂರಲ್ಲಿ ಮುಸ್ಲಿಮರೂ ಕೇಸರಿ ಶಲ್ಯ ಧರಿಸಿ ಶ್ರೀರಾಮ ನವಮಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಹಿಂದೂಗಳ ಜತೆ ಅವರೂ ಪಾನಕ ಹಂಚುತ್ತಿದ್ದಾರೆ.

ತುಮಕೂರು ನಗರದ ಭದ್ರಮ್ಮ ಸರ್ಕಲ್​ನಲ್ಲಿ ಯುವ ಕಾಂಗ್ರೆಸ್​ನಿಂದ ರಾಮನವಮಿ ಆಚರಣೆ ಮಾಡಲಾಗುತ್ತಿದ್ದು, ‘ಶ್ರೀರಾಮ್’ ಎಂದು‌ ಘೋಷಣೆ ಕೂಗುತ್ತಾ ಕಾರ್ಯಕರ್ತರು ಜನರಿಗೆ ಪಾನಕ ಹಂಚುತ್ತಿದ್ದಾರೆ.

ಕೇಸರಿ ಶಲ್ಯ ಧರಿಸಿರುವ ಹಿಂದೂ ಹಾಗೂ ಮುಸ್ಲಿಂ ಕಾಂಗ್ರೆಸ್ ಕಾರ್ಯಕರ್ತರು ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ನ ಜಾತಿ ಲೆಕ್ಕಾಚಾರವನ್ನು ಎತ್ತಿ ಹಿಡಿಯಲು ಬಿಜೆಪಿ ಕೋಮುವಾದವನ್ನು ಎಬ್ಬಿಸುತ್ತದೆ!

Sun Apr 10 , 2022
ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವ ಕರ್ನಾಟಕದಲ್ಲಿ ಸಾರ್ವಜನಿಕ ಚರ್ಚೆಗೆ ಚಾಲನೆ ನೀಡುವ ನಿರೂಪಣೆಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಭಿವೃದ್ಧಿ ಮತ್ತು ಕಲ್ಯಾಣ ಹಲಗೆಯ ಧ್ವನಿಯನ್ನು ಮುಳುಗಿಸಿದೆ. ಚುನಾವಣೆಯ ವರ್ಷದಲ್ಲಿ ತನ್ನನ್ನು ತಾನು ಸಾಬೀತು ಪಡಿಸುವ ಆತುರದಲ್ಲಿರುವ ಬೊಮ್ಮಾಯಿಗೆ ಇದು ಚಿಂತೆಯಂತಿದೆ. ಈಗಾಗಲೇ ಬೊಮ್ಮಾಯಿ ಆಡಳಿತವು ಹೊಸ ಹಾಲು ಸಹಕಾರಿ ಬ್ಯಾಂಕ್ ಆರಂಭಿಸುವುದು, ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಮರುಪ್ರಾರಂಭಿಸುವುದು, ವಯಸ್ಸಾದ ಕುಸ್ತಿಪಟುಗಳಿಗೆ ಮಾಸಿಕ ಸಹಾಯಧನ ಹೆಚ್ಚಳ […]

Advertisement

Wordpress Social Share Plugin powered by Ultimatelysocial