ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದ ಎಲ್ಲಾ ಪದವೀಧರರಿಗೆ ಸಿಹಿ ಸುದ್ದಿ

ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದ ಎಲ್ಲಾ ಪದವೀಧರರಿಗೆ ಸಿಹಿ ಸುದ್ದಿ

ಬೆಂಗಳೂರು: ಯಾವುದೇ ಪದವಿಯಲ್ಲಿ ಯಾವುದೇ ವಿಷಯ ಓದಿದ್ದರೂ, ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ಕುರಿತಂತೆ ಶಿಕ್ಷಣ ಇಲಾಖೆ ನಿಯಮಾವಳಿಗೆ ತಿದ್ದುಪಡಿ ತಂದಿದೆ. ಅನೇಕ ವಿಷಯಗಳಲ್ಲಿ ಪದವಿ ಪಡೆದು, ಬಿಎಡ್, ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

ಈ ಮೊದಲು ಆರರಿಂದ ಎಂಟನೇ ತರಗತಿ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಬಿಎಸ್ಸಿಯಲ್ಲಿ ಪಿಸಿಎಂ ಮತ್ತು ಬಿಎ ನಲ್ಲಿ ಇಂಗ್ಲಿಷ್ ಐಚ್ಛಿಕವಾಗಿ ಓದಿದವರಿಗೆ ಮಾತ್ರ ನೇಮಕಾತಿಯಲ್ಲಿ ಅವಕಾಶ ನೀಡುತ್ತಿದ್ದ ಕಾರಣ ಬೇರೆ ಪದವಿ ಪಡೆದವರಿಗೆ ಶಿಕ್ಷಕರ ಹುದ್ದೆ ಅವಕಾಶ ಇರಲಿಲ್ಲ. ಈಗ ಬಿಎಡ್ 2 ವರ್ಷದ ಕೋರ್ಸ್ ಆದ ನಂತರ ಯಾವುದೇ ಪದವಿಯಲ್ಲಿ ಓದಿದವರಿಗೂ ಬಿಎಡ್ ಮಾಡಲು ಅವಕಾಶ ನೀಡಿದ್ದು, ನೇಮಕಾತಿ ನಿಯಮದಲ್ಲಿ ಎಲ್ಲಾ ಪದವೀಧರರಿಗೆ ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ ಆರರಿಂದ ಎಂಟನೇ ತರಗತಿಯ ಶಿಕ್ಷಕರ ಸುಮಾರು 52,630 ಹುದ್ದೆಗಳು ಖಾಲಿ ಇದ್ದು, ಶೀಘ್ರವೇ 15 ಸಾವಿರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ. ನೇಮಕಾತಿಯಿಂದ ವಂಚಿತರಾಗಿದ್ದ ಪದವೀಧರರಿಗೆ ಅವಕಾಶ ನೀಡಲಾಗುವುದು. ಈ ಪದವೀಧರರು ಬಿಎಡ್ ಮತ್ತು ಟಿಇಟಿ ಪಾಸ್ ಮಾಡುವುದು ಕಡ್ಡಾಯವಾಗಿರುತ್ತದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂಗವಿಕಲನಾಗಿದ್ದರೂ ಕುಗ್ಗದ ವಿಶ್ವಾಸ್ : ಅಂತರಾಷ್ವ್ರೀಯ ಈಜುಗಾರನಾದ ಬೆಂಗಳೂರಿನ ಪ್ರತಿಭೆ

Fri Dec 24 , 2021
ಇತ್ತೀಚಿನ ದಿನದಲ್ಲಿ ಈಜುವುದು ಒಂದು ಉತ್ತಮ ಕಲೆಯಾಗದೆ,ಬೆಂಗಳೂರಿನ ಕೆ.ಎಸ್‌.ವಿಶ್ವಾಸ್‌ ಅಂತರಾಷ್ಷ್ರೀಯ ಪ್ಯಾರಾ ಈಜು ಚಾಂಪಿಯನ್‌ ಷಿಷ್‌ ಗಳಲ್ಲಿ ಇದುವರೆಗೂ 15 ರಾಷ್ಷ್ರೀಯ ಹಾಗೂ 7 ಅಂತರಾಷ್ಷ್ರೀಯ ಪದಕಗಳನ್ನು ಜಯಗಳಿಸಿದ್ದಾರೆ.ಆದರೆ ವಿಶ್ವಾಸ್‌ ಆತ್ಮ ವಿಶ್ವಾಸವನ್ನು ಗೆಲ್ಲಲೂ ಮುಖ್ಯ ಕಾರಣವೆಂದರೆ ಆಕಸಿಕ್ಮವಾಗಿ ಸಂಭವಿಸಿದ ಅವಘಡ ದಲ್ಲಿ ಎರಡೂ ಕೈಗಳನ್ನೂ ಕಳೆದುಕೊಂಡಿದ್ದರೂ ಅದರೆ ಎದೆಗುಂದದ ವಿಶ್ವಾಸ್‌ ತಮ್ಮ ಅತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಏನಾದರೂ ಸಾಧಿಸ ಬೇಕೆಂಬ ಯಾಚನೆಯಿಂದಾಗಿ ಅವರು ಈಜುವ ನಿರ್ಧಾರಕ್ಕೆ ಬರುತ್ತಾರೆ.ಮುಖ್ಯವಾಗಿ ವಿಶ್ವಾಸ್‌ ರವರ […]

Advertisement

Wordpress Social Share Plugin powered by Ultimatelysocial