ಕಿರುತೆರೆಗೆ ಮತ್ತೆ ಎಂಟ್ರಿಕೊಟ್ಟ ಹ್ಯಾಂಡ್ ಸಮ್ ಹೀರೋ ವಿಜಯ್ ಸೂರ್ಯ..!

 

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದ ನಟ ವಿಜಯ್ ಸೂರ್ಯ. ಅಗ್ನಿಸಾಕ್ಷಿಯಲ್ಲಿ ಸಿದ್ಧಾರ್ಥ್ ಪಾತ್ರದಲ್ಲಿ ಕಾಣಿಕೊಂಡಿದ್ದ ವಿಜಯ್ ಅದೇ ಹೆಸರಿನ ಮೂಲಕವೇ ಖ್ಯಾತಿಗಳಿಸಿದ್ದರು. ವಿಜಯ್ ಸೂರ್ಯ ಎನ್ನುವುದಕ್ಕಿಂತ ಸಿದ್ಧಾರ್ಥ್ ಎಂದರೇ ಥಟ್ ಅಂತ ಎಲ್ಲರಿಗೂ ಗೊತ್ತಾಗುತ್ತಿತ್ತು.

ಅಷ್ಟರ ಮಟ್ಟಿಗೆ ಆ ಪಾತ್ರ ಪ್ರೇಕ್ಷಕರ ಮನದಲ್ಲಿತ್ತು. ಈ ಧಾರಾವಾಹಿ ಬಳಿಕ ವಿಜಯ್ ಮತ್ತೆ ಅಭಿಮಾನಿಗಳ ಮುಂದೆ ಬಂದರು. ಆದರೆ ಈ ಪಾತ್ರ ತಂಡುಕೊಟ್ಟ ಖ್ಯಾತಿ ಮಾತ್ರ ಸಿಕ್ಕಿಲ್ಲ. ವಿಜಯ್ ಸೂರ್ಯ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಸದ್ಯ ಕಿರುತೆರೆಯಿಂದ ದೂರ ಉಳಿದು ಪತ್ನಿ ಮಗು ಅಂತ ಬ್ಯುಸಿಯಾಗಿದ್ದರು. ಇದೀಗ ಮತ್ತೆ ಅಭಿಮಾನಿಗಳಿಗೆ ಸಂತಸ ಸುದ್ದಿ ನೀಡಿದ್ದಾರೆ. ಹೌದು, ವಿಜಯ್ ಸೂರ್ಯ ಮತ್ತೆ ಬಣ್ಣ ಹಚ್ಚಿದ್ದು ಕಿರುತೆರೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಜಿ ಧಾರಾವಾಹಿಗೆ ವಿಜಯ್ ಸೂರ್ಯ ಎಂಟ್ರಿ ಕೊಟ್ಟಿದ್ದಾರೆ.

ಈಗಾಗಲೇ ವಿಜಯ್ ಎಂಟ್ರಿಯ ಪ್ರೋಮೋ ಕೂಡ ರಿಲೀಸ್ ಆಗಿದ್ದು ವಿಜಯ್ ನನ್ನು ಮತ್ತೆ ತೆರೆಮೇಲೆ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ. ಧಾರಾವಾಹಿಯ ನಾಯಕಿ ರಾಜಿ ಬಾಳಲ್ಲಿ ಕರ್ಣನ ಸ್ಥಾನವನ್ನು ವಿಜಯ್ ತುಂಬುತ್ತಾರಾ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಅಂದಹಾಗೆ ಈ ಧಾರಾವಾಹಿಗೆ ವಿಜಯ್ ಎಂಟ್ರಿ ವಿಶೇಷ ವ್ಯಕ್ತಿಯಾಗಿನಾ ಅಥವಾ ಸಂಪೂರ್ಣ ಧಾರಾವಾಹಿಯಲ್ಲಿ ಇರ್ತಾರಾ ಎನ್ನುವುದು ಇನ್ನು ರಿವೀಲ್ ಆಗಿಲ್ಲ. ಆದರೆ ಸದ್ಯ ಕಾಣಿಸಿಕೊಂಡಿರುವುದು ಧಾರಾವಾಹಿ ಮೇಲಿನ ಕುತೂಹಲ ಹೆಚ್ಚಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

''ವೀಲ್ ಚೇರ್ ರೋಮಿಯೋ''ಗೆ ಸಿಕ್ಕ ರೆಸ್ಪಾನ್ಸ್ ಕಂಡು ಕಿಚ್ಚ ಸುದೀಪ್ ಹೇಳಿದ್ದೇನು

Tue May 31 , 2022
  ಕನ್ನಡ ಬೆಳ್ಳಿತೆರೆಯಲ್ಲೀಗ ಸಿನಿಮಾಗಳ ಟ್ರಾಫಿಕ್ ಶುರುವಾಗಿದೆ. ವಾರಕ್ಕೆ ಏನಿಲ್ಲ ಅಂದ್ರೂ ಏಳರಿಂದ ಎಂಟು ಸಿನಿಮಾಗಳು ರಿಲೀಸ್ ಆಗ್ತಿವೆ. ಇಷ್ಟು ಸಿನಿಮಾಗಳಲ್ಲಿ ಎಲ್ಲವೂ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತವೆ ಅಂತನೂ ಏನು ಇಲ್ಲ. ಕಂಟೆಂಟ್ ಹಾಗೂ ಕ್ವಾಲಿಟಿ ಸಿನಿಮಾಗಳನ್ನ ಮಾತ್ರ ಸಿನಿಪ್ರೇಮಿಗಳು ಬಾಚಿತಬ್ಬಿಕೊಳ್ಳುತ್ತಾರೆ ಎಂಬುವುದಕ್ಕೆ ಈ ವಾರ ತೆರೆಗೆ ಬಂದ ವೀಲ್‍ಚೇರ್ ರೋಮಿಯೋ ತಾಜಾ ಉದಾಹರಣೆ. ಇದೇ ಶುಕ್ರವಾರ ಒಂದಷ್ಟು ಕಾಂಪಿಟೇಷನ್ ನಡುವೆ ಥಿಯೇಟರ್‌ಗೆ ಲಗ್ಗೆ ಇಟ್ಟ ‘ವೀಲ್‍ಚೇರ್ ರೋಮಿಯೋ’ ರಾಜ್ಯಾದ್ಯಂತ […]

Advertisement

Wordpress Social Share Plugin powered by Ultimatelysocial