1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ನೆನಪಿಗಾಗಿ ವಿಜಯ್ ದಿವಸ್ ಆಚರಣೆ ಮಾಡಲಾಗುತ್ತದೆ. ಈ ಯುದ್ಧದ ಸಮುದಲ್ಲಿ ಪ್ರಾಣತ್ಯಾಗ ಮಾಡಿದ ಯೋಧರಿಗೆ ನಮನ ಸಲ್ಲಿಸಲು ವಿಜಯ್ ದಿವಸ್ ಅನ್ನು ಪ್ರತಿವರ್ಷದ ಡಿಸೆಂಬರ್ 16ರಂದು ಆಚರಿಸಲಾಗುತ್ತದೆ.
ಈ ದಿನವು ಪೂರ್ವ ಪಾಕಿಸ್ತಾನದ ವಿಮೋಚನೆಗೆ ಮತ್ತು ಬಾಂಗ್ಲಾದೇಶದ ಹೊಸ ರಾಜ್ಯ ರಚನೆಗೆ ಕಾರಣವಾಯಿತು.
ಡಿಸೆಂಬರ್ 16,1971 ರಂದು ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ಎಎ ಖಾನ್ ನಿಯಾಜಿ ಮತ್ತು ಅವರ 93 ಸಾವಿರ ಸೈನಿಕರು ಭಾರತೀಯ ಪಡೆಗಳಿಗೆ ಶರಣಾದರು. ವಿಜಯ್ ದಿವಸ್ ಅನ್ನು ಬಾಂಗ್ಲಾದೇಶದಲ್ಲಿ ‘ಬಿಜೋಯ್ ಡಿಬೋಸ್’ ಅಥವಾ ಬಾಂಗ್ಲಾದೇಶ ವಿಮೋಚನಾ ದಿನ ಎಂದು ಆಚರಿಸಲಾಗುತ್ತದೆ. ಇದು ಪಾಕಿಸ್ತಾನದಿಂದ ಬಾಂಗ್ಲಾದೇಶದ ಅಧಿಕೃತ ಸ್ವಾತಂತ್ರ್ಯವನ್ನು ಸೂಚಿಸುತ್ತದೆ.
1971ರ ಭಾರತ-ಪಾಕಿಸ್ತಾನ ಯುದ್ಧದ ಬಗ್ಗೆ ಪ್ರಮುಖ ಸಂಗತಿಗಳು :
ಪಶ್ಚಿಮ ಪಾಕಿಸ್ತಾನವು ಜನರೊಂದಿಗೆ ಅನುಚಿತವಾಗಿ ವರ್ತಿಸಿದ ನಂತರ ಮತ್ತು ಪೂರ್ವ ಪಾಕಿಸ್ತಾನದ ಚುನಾವಣಾ ಫಲಿತಾಂಶಗಳನ್ನು ದುರ್ಬಲಗೊಳಿಸಿದ ನಂತರ ಬಾಂಗ್ಲಾದೇಶದ ವಿಮೋಚನಾ ಯುದ್ಧವು ಸಂಘರ್ಷಕ್ಕೆ ಕಾರಣವಾಯಿತು.
ಪೂರ್ವ ಪಾಕಿಸ್ತಾನವು ಮಾರ್ಚ್ 26,1971 ರಂದು ಅಧಿಕೃತವಾಗಿ ಪ್ರತ್ಯೇಕತೆಗೆ ಕರೆಯನ್ನು ನೀಡಿತು. ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿದರು.